ಕಲಬುರಗಿ : ಅಸಮಾನತೆ ತೊಡೆದು ಹಾಕಲು ಮೀಸಲಾತಿ ಸಕಾರಾತ್ಮಕ ಕ್ರಮವಾಗಿದ್ದು, ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಆರೆಸ್ಸೆಸ್ ಬೆಂಬಲಿಸಲಿದೆ ಎಂದು ಆರ್ ಎಸ್ ಎಸ್ ಸಂಘಟನೆಯ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ದಲಿತ ವಿರೋಧಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ನಿರಂತರವಾಗಿ ಅಪಪ್ರಚಾರ ಮಾಡುತ್ತಲೇ ಬರುತ್ತಿದ್ದು, ಹಲವು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು “ದಲಿತರ ಅಭಿವೃದ್ಧಿ ಕೇವಲ ಘೋಷಣೆಯಲ್ಲೇ ಉಳಿಸಿತ್ತು”. ಆದರೆ ಬಿಜೆಪಿಯು ದಲಿತರ ಅಭಿವೃದ್ದಿಯತ್ತ ಕಾರ್ಯ ಪ್ರವೃತ್ತವಾಗಿದೆ.ಬಿಜೆಪಿ ಮತ್ತು ಆರೆಸ್ಸೆಸ್ ಯಾವತ್ತು ಸಹ ದಲಿತ ವಿರೋಧಿ ಆಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆರೆಸ್ಸೆಸ್ನ ಹಿರಿಯರಾದ ದತ್ತಾತ್ರೇಯ ಹೊಸಬಾಳೆ ಅವರು ಮೀಸಲಾತಿ ಕುರಿತ ಸಂಘಟನೆಯ ನಿಲುವನ್ನು ಸ್ಪಷ್ಟಪಡಿಸಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಅರ್ಥ ಮಾಡಿಕೊಳ್ಳಬೇಕು.
ದೇಶದಲ್ಲಿನ ಪ್ರಚಲಿತ ಮೀಸಲು ವ್ಯವಸ್ಥೆಯನ್ನು ಬೆಂಬಲಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆ ಎಲ್ಲರಿಗೂ ಸಿಗುವಂತಾಗಬೇಕು ಇಲ್ಲವಾದಲ್ಲಿ ಒಕ್ಕೂಟ ವ್ಯವಸ್ಥೆಗೆ ಕೋಡಲಿ ಪೆಟ್ಟು ಬೀಳಲಿದ್ದು,”ದಲಿತರಿಲ್ಲದ ಭಾರತ ದೇಶದ ಇತಿಹಾಸ ಅಪೂರ್ಣ” ಎಂದು ಹೊಸಬಾಳೆ ಹೇಳಿರುವುದಕ್ಕೆ ಅಂಬಾರಾಯ ಅಷ್ಠಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು, ಬಿಜೆಪಿ ಹಾಗೂ ಸಂಘ- ಪರಿವಾರದ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಲೇ ಬಂದಿರುವ ಸಂಗತಿ ಈಗ ದಲಿತ ಸಮುದಾಯಗಳಿಗೂ ಆರ್ಥವಾಗಿದೆ. ಈ ವಿಚಾರ ದಲಿತರೆಲ್ಲರಿಗೂ ಅರ್ಥವಾಗಿರುವುದರಿಂದ ಬಿಜೆಪಿ ಎಲ್ಲ ಕಡೆ ಸಬಲ- ಸದೃಢ ಪಕ್ಷವಾಗಿ ಹೊರಹೊಮ್ಮುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗುತ್ತಿದೆ ಎಂದೂ ಅಷ್ಠಗಿ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಜನತಾ ಪಕ್ಷವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರೋಧಿ, ದಲಿತ ವಿರೋಧಿ, ಸಂವಿಧಾನ ವಿರೋಧಿ, ಮೀಸಲಾತಿ ವಿರೋಧಿ ಎಂಬ ಸುಳ್ಳು ಆರೋಪಗಳಿಗೆ ಸಮರ್ಪಕ ಉತ್ತರ ಈಗ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮಾತಿನಲ್ಲಲ್ಲ; ನಡತೆಯಲ್ಲೂ ಅದನ್ನು ತೋರಿಸಿಕೊಟ್ಟಿದ್ದಾರೆ. ಮೋದಿಯವರು, ಡಾ. ಅಂಬೇಡ್ಕರ್ ರವರ ಸಂವಿಧಾನದಿಂದಲೇ ತಾನು ಪ್ರಧಾನಿ ಆಗಿರುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿಯವರು ಈಚೆಗೆ ತಮ್ಮ ಸಚಿವ ಸಂಪುಟ ಪುನಾರಚನೆ ವೇಳೆ ಎಸ್ಸಿ ಸಮುದಾಯದ 12, ಎಸ್ಟಿ ಸಮುದಾಯದ 8, ಒಬಿಸಿ ಸಮುದಾಯಗಳ 27 ಜನರಿಗೆ ಅವಕಾಶ ನೀಡಿ ದಲಿತರು ಮತ್ತು ಹಿಂದುಳಿದ ವರ್ಗಗಳ ಬಗೆಗಿನ ತಮ್ಮ ನೈಜ ಕಾಳಜಿಯನ್ನು ಸಾಬೀತು ಪಡಿಸಿದ್ದಾರೆ. ಇತ್ತಿಚಿಗೆ ನಡೆದ 8 ರಾಜ್ಯಪಾಲರ ನೇಮಕಾತಿಯಲ್ಲೂ ದಲಿತ- ಶೋಷಿತ ಸಮುದಾಯಗಳಿಗೆ ಗರಿಷ್ಠ ಆದ್ಯತೆ ಕೊಟ್ಟಿದ್ದಾರೆ. ಈ ಕ್ರಮಗಳಿಂದ ದಲಿತ ಸಮುದಾಯಗಳು ಬಿಜೆಪಿಯ ಕಡೆಗೆ ವಾಲುತ್ತಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದಲಿತರ ಅಭ್ಯುದಯಕ್ಕಾಗಿ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಕಾರಣದಿಂದ ಈ ಸಮುದಾಯಗಳು ಭವಿಷ್ಯದ ದಿನಗಳಲ್ಲಿ ಬಿಜೆಪಿ ಪರವಾಗಿ ನಿಲ್ಲಲಿವೆ ಎಂಬ ವಿಶ್ವಾಸವನ್ನು ಅಂಬಾರಾಯ ಅಷ್ಠಗಿ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೊರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ವ್ಯಾಸಂಗ ಮಾಡುತ್ತಿರುವ…
ಕಲಬುರಗಿ: ನಗರದ ಜಿಲ್ಲಾ ಸರಕಾರಿ ಜಿಮ್ಸ್ ಆಸ್ಪತ್ರೆ ಮಹಿಳಾ ವಾರ್ಡಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಹಾಗೂ…
ಕಲಬುರಗಿ: ಗ್ರಾಮೀಣಾ ಭಾಗದಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ 1993 ರ ಪ್ರಕರಣ 61 ಎ ಪ್ರಕಾರ…
ಕಲಬುರಗಿ: ಪ್ರತಿಯೊಂದು ಮಗುವಿನಲ್ಲೂ ವೈಜ್ಞಾನಿಕ ಮನೋಭಾವ ಇದ್ದೇ ಇರುತ್ತದೆ. ಅದು ಪ್ರಶ್ನೆ ಮಾಡುವುದರ ಮೂಲಕ ಗುರುತಿಸುತ್ತದೆ. ಸಮಾಜದಲ್ಲಿ ಕಂಡು ಬರುವ…
ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಪ್ರಸ್ತುತ ಪಡಿಸುವ ಎರಡು ದಿನಗಳ 47ನೇ ಸರಣಿಯ ಪ್ರತಿಷ್ಠಿತ ಪೆÇೀಸ್ಟರ್ ಪ್ರಸ್ತುತಿ ಮತ್ತು ವಿದ್ಯಾರ್ಥಿ ಯೋಜನೆ…
ಕಲಬುರಗಿ; ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಗಮನದ ಅಗತ್ಯತೆಯನ್ನು ದಕ್ಷಿಣ ಪ್ರಾದೇಶಿಕ ಸಮಿತಿಯ ರಾಷ್ಟ್ರೀಯ ಶಿಕ್ಷಕರ…