ವಾಡಿ: ದಿನಸಿ-ಕೋವಿಡ್ ಸುರಕ್ಷಾ ಕಿಟ್ ವಿತರಣೆ

ವಾಡಿ: ದೊಡ್ಡ ದೊಡ್ಡ ಬಂಗಲೆ ಮಹಲುಗಳನ್ನು ಕಟ್ಟಿ ಬೀದಿ ಬದಿಯ ಗುಡಿಸಲಲ್ಲಿ ಬದುಕುವ ಕಟ್ಟಡ ಕಾರ್ಮಿಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬಿತ್ತಿ ಬೆಳೆದು ದೇಶಕ್ಕೆ ಅನ್ನ ನೀಡುವ ರೈತರು ಹೊಟ್ಟೆಗೆ ಹಿಟ್ಟಿಲ್ಲದೆ ಹಸಿವೆಯಿಂದ ನರಳುತ್ತಿದ್ದಾರೆ. ದುಡಿಯುವ ವರ್ಗ ಸರಕಾರಕ್ಕೆ ತನ್ನ ಹಕ್ಕು ಕೇಳುವ ಸ್ವಾತಂತ್ರ್ಯವಿಲ್ಲ ಎಂದು ಹೋರಾಟಗಾರ ಆರ್.ಕೆ.ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಗೆ ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘ, ಕಾರ್ಮಿಕ ಇಲಾಖೆ ವತಿಯಿಂದ ನೀಡಲಾದ ದಿನಸಿ ಪದಾರ್ಥ ಹಾಗೂ ಕೋವಿಡ್ ಸುರಕ್ಷಾ ಕಿಟ್‍ಗಳನ್ನು ಗುರುವಾರ ನಗರದ ಎಂಪಿಎಸ್ ಶಾಲೆ ಮೈದಾನದಲ್ಲಿ ನೂರಾರು ಜನ ಕಟ್ಟಡ ಕಾರ್ಮಿಕರಿಗೆ ವಿತರಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯದ ಬಗ್ಗೆ ಬಹಳ ಜನ ಹೆಮ್ಮೆಯಿಂದ ಮಾತನಾಡುತ್ತಾರೆ. ಆದರೆ ದೇಶವನ್ನು ಕಟ್ಟಿ ಹಸಿದ ಹೊಟ್ಟೆಯಿಂದ ಬೀದಿಯಲ್ಲಿ ನಿಂತಿರುವ ನಿರಾಶ್ರಿತ ಕಾರ್ಮಿಕರ ಹೀನಾಯ ಬದುಕಿನ ಕುರಿತು ಯಾರೊಬ್ಬರೂ ಮಾತನಾಡುವುದಿಲ್ಲ.

ಬೆವರು ಸುರಿಸಿ ಆಣೆಕಟ್ಟುಗಳನ್ನು ಅರಮನೆಗಳನ್ನು ಕಟ್ಟಿದವರು ಈ ದೇಶದ ದುಡಿಯುವ ಜನರು. ಅವರಿಗೆ ಸಿಗಬೇಕಾದ ಸೌಲತ್ತುಗಳನ್ನು ನೇರವಾಗಿ ಅವರ ಮನೆಬಾಗಿಲಿಗೆ ತಲುಪಿಸುವ ಕೆಲಸ ಸರಕಾರಗಳು ಮಾಡುತ್ತಿಲ್ಲ. ಸ್ವಾಭೀಮಾನದಿಂದ ಬದುಕಬೇಕಾದ ಈ ಶ್ರಮಜೀವಿಗಳು ಇಂದಿಗೂ ದಿನಸಿ ಕಿಟ್‍ಗಳಿಗಾಗಿ ಕೈಯೊಡ್ಡಿ ನಿಲ್ಲುತ್ತಿದ್ದಾರೆ. ಇದು ಆರಳುವ ಸರಕಾರಗಳಿಗೆ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಕಟ್ಟಡ ಕಾರ್ಮಿಕ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷ ರಾಘವೇಂದ್ರ ಎಂ.ಗುಜರಾಲಕರ ಮಾತನಾಡಿ, ಸರಕರಾದ ಯಾವೂದೇ ಸೌಲಭ್ಯ ಹೋರಾಟ ಮಾಡದೆ ನಮ್ಮ ಕೈಗಳಿಗೆ ಸೇರುವುದಿಲ್ಲ. ಕಟ್ಟಡ ಕಾರ್ಮಿಕರಿಗಾಗಿ ವಿಶೇಷ ಯೋಜನೆಗಳಿವೆ ಮತ್ತು ಸೌಲಭ್ಯಗಳಿವೆ.

ಆದರೆ ಅವು ಅರ್ಹ ಫಲಾನುಭವಿಗಳಿಗೆ ತಲುಪದೆ ಮಧ್ಯವರ್ತಿಗಳ ಪಾಲಾಗುತ್ತಿವೆ. ಕಟ್ಟಡ ಕಾರ್ಮಿಕರು ಸಂಘಟಿತರಾಗುವ ಮೂಲಕ ಅನ್ಯಾಯಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಟ್ಟಡ ಕಾರ್ಮಿಕ ಸಂಘದ ನಗರ ಘಟಕದ ಸಂಚಾಲಕ ಶರಣು ಹೇರೂರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಮಿಕ ಮುಖಂಡರಾದ ಚಂದ್ರಕಾಂತ ಮಾಳಗಿ, ವಿಠ್ಠಲ ರಾಠೋಡ, ಅವಿನಾಶ ಒಡೆಯರ, ಶಿಕ್ಷಕ ಭಗವಾನ ದಂಡಗುಲಕರ, ರಾಜು ಒಡೆಯರ್, ಯೇಶಪ್ಪ ಕೇದಾರ, ಸಾಯಿನಾಥ ಚಿಟೇಲಕರ, ಗೌತಮ ಪರತೂರಕರ ಸೇರಿದಂತೆ ನೂರಾರು ಜನ ಕಟ್ಟಡ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡು ದಿನಸಿ ಕಿಟ್‍ಗಳನ್ನು ಪಡೆದುಕೊಂಡರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

10 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420