ಆಳಂದ: ಹಿಂದೂ ಮತ್ತು ಮುಸ್ಲಿಂರು ಸೇರಿಕೊಂಡು ಆಚರಿಸುವ ಹಬ್ಬವೇ ಮೋಹರಂ ಹಬ್ಬವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅಭಿಪ್ರಾಯಪಟ್ಟರು.
ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಜರುಗಿದ ಮೋಹರಂ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋಹರಂ ಹಬ್ಬವು ಸಾಮರಸ್ಯದ ಸಂಕೇತವಾಗಿದೆ. ಹಬ್ಬ ಮುಸ್ಲಿಂರದಾಗಿದ್ದರೂ ಹಿಂದೂಗಳೂ ಕೂಡಾ ಭಕ್ತಿಯಿಂದ ಭಾಗವಹಿಸಿ ಆಚರಿಸುತ್ತಾರೆ ಇದಕ್ಕೆ ಇಲ್ಲಿರುವ ಸಾಮರಸ್ಯದ ಜೀವನವೇ ಕಾರಣ ಎಂದು ಹೇಳಿದರು.
ನಿಂಬರ್ಗಾ ಗ್ರಾಮದಲ್ಲಿ ಆಚರಿಸಿದ ಮೋಹರಂ ಹಬ್ಬದಲ್ಲಿ ಮುಸ್ಲಿಂ ಧರ್ಮದವರ ಹಬ್ಬದಲ್ಲಿ ಹಿಂದೂ ಧರ್ಮದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದು, ಹಿಂದೂಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಿಂಬರ್ಗಾ ಗದಗೇಶ್ವರ ಮಠದ ಶ್ರೀಗಳಾದ ನೀಲಕಂಠ ಶಿವಾಚಾರ್ಯರು, ಬಡದಾಳ ಶ್ರೀಗಳು, ಜೈ ಭವಾನಿ ಪೂಜಾರಿ ಜಗದೇವಪ್ಪಾ ಹಿತ್ತಲ ಶಿರೂರ, ಮುಖಂಡರಾದ ಮೈಹಿಬೂಬ್ ಆಳಂದ ತಾಲೂಕು ಪಂಚಾಯತ್ ಮಾಜಿ ಸದಸ್ಯ ದತ್ತಾ ದುರ್ಗದ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಾಂತಣ್ಣಾ ಮಂಟಗಿ, ಮೂಹರಂ ಸಮಿತಿಯ ಸದಸ್ಯರಾದ ಹುಸೇನಿ ಸಾಬ್ ಅಲ್ಲಾ, ರಾಮಚಂದ್ರ ಬುಳ್ಳಾ, ಶಿವಪುತ್ರಪ್ಪ ಮಾಳಿಗೆ, ಶ್ರೀ ಶೈಲ ಪಾಟೀಲ, ರುಕ್ಮೋದ್ದೀನ, ಶ್ರೀಮಂತ ಸವಳೇಶ್ವರ, ಮಹಾದೇವ ಕೊರಭಾ, ಮಲ್ಲಿನಾಥ ಒಡೇಯರ,ನ ಶರಣಪ್ಪಾ ಹೂಗೊಂಡ, ರಾಜು ಸಿಂಗೆ, ಉಪನ್ಯಾಸಕರಾದ ಶ್ರೀ ಧರ್ಮರಾಜ ಜವಳಿ, ಶಿಕ್ಷಕರಾದ ಅನೀಲ ಸೇರಿದಂತೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…