ಕಲಬುರಗಿ: ಗೌತಮ ಬುದ್ಧ ವಿಶ್ವದ ಜ್ಞಾನದ ಬೆಳಕು.ಆ ಜ್ಞಾನದ ಬೆಳಕಿನಲ್ಲಿ ರಾಜಕೀಯ ರಹಿತ,ಸ್ವಾರ್ಥ ರಹಿತ,ಜಾತಿ ರಹಿತವಾದ ಸಮಾಜ ಕಟ್ಟುವ ಸಂಕಲ್ಪ ಮಾಡುವುದರ ಮೂಲಕ ಬುದ್ಧನನ್ನು ಸ್ಮರಿಸುವ ಕೆಲಸ ಮಾಡೋಣ ಎಂದು ಬಿಜೆಪಿ ರಾಜ್ಯ ಯುವ ಮುಖಂಡ ಭೀಮಾಶಂಕರ ಪಾಟೀಲ್ ಹೇಳಿದರು.
ತಾಲೂಕಿನ ನಿಂಬರ್ಗಾ ಗ್ರಾಮದ ಬುದ್ಧ ನಗರದಲ್ಲಿ ಗೌತಮ ಬುದ್ಧರ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೀಮಾಶಂಕರ ಪಾಟೀಲ್ ಅವರು ಬುದ್ಧ,ಬಸವ,ಅಂಬೇಡ್ಕರ್ ಈ ಜಗದ ಹೆಮ್ಮೆ.ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಪ್ರತಿಮೆಗಳನ್ನು ಸ್ಥಾಪಿಸಿದಕ್ಕೆ ಸಾರ್ಥಕವಾಗುತ್ತದೆ.ಆಳಂದ ತಾಲೂಕಿನ ದಲಿತ ಸಮಾಜವನ್ನು ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತಿದ್ದು ಅಂಥವರಿಂದ ಸಮುದಾಯದ ಜನ ಜಾಗೃತವಾಗಿರಬೇಕು ಎಂದರು.
ಮತಗಳಿಗಾಗಿ ದಲಿತ ಸಮುದಾಯವನ್ನು ಬಳಸಿಕೊಂಡು ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೆಲಸ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ.ಇಂಥಹ ಅನ್ಯಾಯದ ಪರಮಾವಧಿ ನಿಲ್ಲಬೇಕು ಎನ್ನುವುದಾದರೆ ಸಮುದಾಯದ ಜನ ಜಾಗೃತರಾಗಬೇಕು.ಬುದ್ಧನ ಜ್ಞಾನದ ಬೆಳಕು ಜಗವ ಬೆಳಗಿದಂತೆ ಆಳಂದ ತಾಲೂಕಿನಾದ್ಯಂತ ಬೆಳಗಲಿ ಎಂದು ಭಗವಾನ ಬುದ್ಧನಲ್ಲಿ ಪ್ರಾರ್ಥಿಸುವೆ ಎಂದರು.
ಪ್ರತಿಮೆಗಳನ್ನು ಸ್ಥಾಪಿಸಿ ಅವುಗಳಿಗೆ ರಾಜಕೀಯ ಬಣ್ಣ ಬಳಿದು ಅವಮಾನಿಸುವ ಕೆಲಸ ಯಾರೂ ಕೂಡಾ ಮಾಡಬಾರದು. ತಾಲೂಕಿನ ದಲಿತ ಸಮುದಾಯದ ಅಭಿವೃದ್ಧಿಗೆ ರಾಜಕೀಯ ರಹಿತನಾಗಿ,ಜಾತಿ ರಹಿತವಾಗಿ ನಾನು ಸದಾ ಸಿದ್ಧ ಎಂದು ಭೀಮಾಶಂಕರ ಪಾಟೀಲ್ ಹೇಳಿದರು.ನಿಂಬರ್ಗಾ ಗ್ರಾಮದ ಭೀಮನಗರ,ಬುದ್ಧನಗರದ ವಿದ್ಯಾರ್ಥಿಗಳಿಗೆ ಓದಲು ಸಹಾಯ ಧನ ನೀಡುವುದಾಗಿ ಘೋಷಿಸಿದರು.
ಬೌದ್ಧ ಧರ್ಮಗುರು ಅಮರ ಜ್ಯೋತಿ ಭಂತೇಜಿ, ತಾಲೂಕಿನ ಹಿರಿಯ ದಲಿತ ಹೋರಾಟಗಾರ ದಯಾನಂದ ಶೇರಿಕಾರ್,ನಿಂಬರ್ಗಾ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೆಹಬೂಬ್ ಆಳಂದ,ಯುವ ಬಿಜೆಪಿ ಮುಖಂಡ ಮಲ್ಲಿನಾಥ ಒಡೆಯರ್,ದಲಿತ ಸಂಘರ್ಷ ಸಮಿತಿಯ ವಿಠಲ್ ಕೋನೆಕರ್ ,ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರಮೇಶ ಜಗತಿ,ತಾಲೂಕಾಧ್ಯಕ್ಷ ಮಹೇಶ ಹಿರೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಹಾಪುರ ತಾಲೂಕಿನ ಸಗರ ಗ್ರಾಮ ಆಡಳಿತ ಅಧಿಕಾರಿ ರಮೇಶ್ ರಾಠೋಡ್ ಶಹಾಪುರ : ರೈತರು ಬೆಳೆವಿಮೆ, ಪರಿಹಾರ,ಸಾಲ ಮನ್ನಾ,ಇತರೆ ಸೇರಿದಂತೆ…
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…