ಬಿಸಿ ಬಿಸಿ ಸುದ್ದಿ

ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿರಚಿತ ಕೃತಿಗಳು ಲೋಕಾರ್ಪಣೆ

ಭಾಲ್ಕಿ: ಬಸವಾದಿ ಶರಣರ ಅನುಭಾವದ ಮಂಥನದಿಂದ ಹೊರಹೊಮ್ಮಿದ ನುಡಿಮುತ್ತುಗಳೆಂದರೆ, ವಚನಗಳು. ವಚನಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ. ವಚನಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಶರಣರ ವಚನಗಳು ಜನಸಾಮಾನ್ಯರ ಹೃದಯ ತಟ್ಟೆಗೆ ನೀಡುವ ಸದುದ್ದೇಶವನ್ನು ಹೊಂದಿದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮದೇ ಆದ ವಿಶಿಷ್ಟ್ಯ ಶೈಲಿಯಲ್ಲಿ ಸರಳ, ಸಹಜವಾದ ಭಾಷೆಯಲ್ಲಿ ವಚನಗಳಿಗೆ ಭಾವಾರ್ಥವನ್ನು ಬರೆದಿದ್ದಾರೆ. ಅವರ ಅನುಭಾವದ ಬರವಣಿಗೆಯಿಂದ ವಚನ ಸ್ಫೂರ್ತಿ, ವಚನ ಪರಿಮಳ ಮತ್ತು ವಚನ ವಚನ ಸಂಜೀವಿನಿ ಮೂರು ಗ್ರಂಥಗಳು ಪ್ರಕಟಗೊಂಡಿವೆ. ಈ ಮೂರು ಗ್ರಂಥಗಳ ಲೋಕಾರ್ಪಣೆಯನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ಮಾಡಲಾಯಿತು.

ಸಾನಿಧ್ಯ ವಹಿಸಿದ ಪೂಜ್ಯರು ವಚನಗಳ ಹಿರಿಮೆಯನ್ನು ಹೇಳಿದರು. ವಚನಗಳು ನಮ್ಮ ನಿಜವಾದ ಸಂಪತ್ತು. ವಚನಗಳೇ ನಮಗೆ ದಾರಿದೀಪ. ನಾವು ಶರಣರ ದರ್ಶನವನ್ನು ವಚನಗಳಲ್ಲಿ ಮಾಡಬೇಕು. ದಿನನಿತ್ಯ ವಚನಪಠಣ ಮಾಡುವ ಮೂಲಕ ಬಸವತತ್ವವನ್ನು ಮೈಗೂಡಿಸಿಕೊಳ್ಳಬೇಕು.

ವಚನಗಳಲ್ಲಿ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. ನಮ್ಮ ಜೀವನ ಭೌತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತವಾಗಬೇಕಾದರೆ ನಾವು ಶರಣರ ವಚನಗಳಿಗೆ ಮೊರೆಹೋಗಬೇಕು. ವಚನಗಳು ನಮ್ಮ ಜೀವನವನ್ನು ಎತ್ತರ ಎತ್ತರಕ್ಕೆ ಒಯ್ಯುತ್ತವೆ. ನಮ್ಮ ಜೀವನ ಭವ್ಯದಿವ್ಯವಾಗುತ್ತದೆ ಎಂದು ನುಡಿದರು.

ಶರಣ ಜೀವಿಗಳಾದ ವಿಶ್ವನಾಥಪ್ಪ ಬಿರಾದಾರ, ಶರಣ ಸೋಮನಾಥಪ್ಪ ಅಷ್ಟೂರೆ, ಶರಣ ರಾಜಶೇಖರ ಅಷ್ಟೂರೆ ಇವರ ಹಸ್ತದಿಂದ ಮೂರು ಕೃತಿಗಳ ಲೋಕಾರ್ಪಣೆ ಜರುಗಿತು. ದೀಪಕ ಥಮಕೆ ನಿರೂಪಿಸಿದರು. ರಾಜು ಜುಬರೆ ಗ್ರಂಥ ಪರಿಚಯ ಮಾಡಿಕೊಟ್ಟರು. ಅಕ್ಕನಬಳಗದಿಂದ ವಚನ ಸಂಗೀತವನ್ನು ನಡೆಯಿತು.

emedialine

Recent Posts

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

12 mins ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

27 mins ago

ಸೇವಾ ಮನೋಭಾವದ ಮನಸ್ಸು ಹೆಚ್ಚಾಗಲಿ: ಜ್ಯೋತಿ ಪಾಟೀಲ್

ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…

31 mins ago

ಕಲಬುರಗಿ: ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಜುಲೈ 5 ರಿಂದ 6 ವರೆಗೆ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ: ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕಲಬುರಗಿ ಮತ್ತು ಬೀದರ್ ಕಂದಾಯ ವಿಭಾಗದ ಜಿಲ್ಲೆಗಳ ಕಾರ್ಮಿಕ ಆಯುಕ್ತಾಲಯ ಹಾಗೂ ಇಲಾಖೆಗೆ ಸಂಬಂಧಿಸಿದ…

2 hours ago

ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಕ್ಕಾಗ ಸಾಧನೆ ಸಾಧ್ಯ

ವಾಡಿ: ಪ್ರತಿಯೊಬ್ಬರಿಗೂ ಗುರಿ ಇರಬೇಕು. ಆ ಗುರಿ ಸಾಧನೆಗೆ ಸಮರ್ಥ ಗುರುಗಳು ಬೇಕು ಅಂದಾಗ ಮಾತ್ರ ನಮ್ಮ ಗುರಿ ಈಡೇರಲು…

2 hours ago

ಡಿಸಿಸಿ ಅಧ್ಯಕ್ಷರನ್ನಾಗಿ ಮುಕ್ತಾರ್ ಪಟೇಲ್ ನೇಮಕಕ್ಕೆ ವಸೀಂ ಖಾನ್ ಒತ್ತಾಯ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಕಾಂಗ್ರೆಸ್‌ ಪಕ್ಷದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾಂಗ್ರೆಸ್ ಪಕ್ಷದ…

2 hours ago