ಕಲಬುರಗಿ: ಕಲಬುರಗಿ ಜಿಲ್ಲೆಯ ಶ್ರೀನಿವಾಸ ಸರಡಗಿ ಗ್ರಾಮದ ಹಾಗೂ ಸುತ್ತಮುತ್ತಲ್ಲಿನ ಗ್ರಾಮ ರೈತರಿಗೆ ನಕಲಿ ಬೀಜ ವಿತರಣೆ ಮಾಡಿರುವ ದೀಪಕ ಗಿಲ್ಡಾ ರವರ ಕಂಪನಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯೂ ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಮನವಿ ಮಾಡಿರುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಸರಡಗಿ ಮಾತನಾಡಿ ದೀಪಕ್ ಗಿಲ್ಡಾ ಬಳಿ ರೈತ ಸಿದ್ದಪ್ಪ ಪೂಜಾರಿ ಕಂಟಿಕಾರ ಅವರು ೯೦ ಕೆಜಿ ಹಾಗೂ ಶ್ರೀನಿವಾಸ ಸರಡಗಿ ಗ್ರಾಮದ ಸುಮಾರು ೮೦ ರಿಂದ ೧೦೦ ಎಕರೆ ಜಮೀನಿನಲ್ಲಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ದೀಪಕ್ ಗಿಲ್ಡಾ ಅವರ ಹತ್ತಿರ ಹೆಸರು ಬೀಜ ಖರೀದಿಸಿ ಹೆಸರು ಬೀಜ ಬಿತ್ತನೆ ಮಾಡಿರುತ್ತಾರೆ ರೈತರು ಬಿತ್ತನೆ ಮಾಡಿ ೬೦ ದಿನ ಕಳೆದರು ಇನ್ನೂ ಮಗ್ಗಿ ಹೂವು ಬಿಡುವ ಹಂತದಲ್ಲಿ ಇರುವುದಿಲ್ಲ.
ಎಲ್ಲಾ ರೈತರು ತಮ್ಮ ಜಮೀನುಗಳಿಗೆ ಹೋಗಿ ನೋಡಿ ಗಾಬರಿಗೊಂಡು ನಿಸ್ಸಾಹಕರಾಗಿ ಏನು ತೋಚದೇ ಕಂಗಲಾಗಿದ್ದಾರೆ. ಈ ಹೆಸರು ಬೀಜ ನಂಬರ ಒಂದು ಇರುತ್ತದೆ ಎಂದು ಹೇಳಿ ಈಗ ರೈತರು ಹೆಸರು ಬೀಜ ಖರೀದಿಸಿ ಮಾಲೀಕರನ್ನು ಕೇಳಲು ಹೋದಾಗ ಲೋಕಲ್ ಬೀಜ ಇರುತ್ತವೆ ಎಂದು ಹೇಳತ್ತಾರೆ. ಆದ್ದರಿಂ ೬೦ ದಿವಸಗಳಾದರೂ ಮಗ್ಗಿ ಹೂವು ಬಿಡದೇ ಗೊಡ್ಡು ಹೂವು ಹೋಗಿರುವುದರಿಂದ ಸರಕಾರದ ವತಯಿಂದ ಬೆಳೆ ಪರಿಹಾರ ಧನ ಒದಗಿಸಿಕೊಡಬೇಕು ಮತ್ತು ನಕಲಿ ಬೀಜ ವಿತರಣೆ ಮಾಡಿದ ದೀಪಕ ಗಿಲ್ಡಾ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸರಡಗಿ ಅವರು ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಮತಕ್ಷೇತ್ರದ ಸಂಯೋಜಕ ಶಿವಾನಂದ ಆರ್ ಕಿಳ್ಳಿ, ಕುರುಬ ಸಮಾಜದ ಅಧ್ಯಕ್ಷ ಸಿದ್ದಪ್ಪ ಪೂಜಾರಿ ಕಂಟಿಕಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಶ್ರೀಗನ್, ರಮೇಶ್ ಮೀಸಿ, ಶರಣಪ್ಪ ವಗ್ಯಾ, ಅನಿಲ್ ಹರಸೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…