ಸುರಪುರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಗ್ರಾಮಶಾಖೆ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಇಂದು ದೇಶದಲ್ಲಿನ ದೀನ ದಲಿತರ ಸ್ಥಿತಿ ಅಯೋಮಯವಾಗಿದೆ.ನಮ್ಮ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ.ನಮ್ಮ ಹಕ್ಕನ್ನು ನಾವು ಪಡೆಯಲು ಸಂಘಟಿತರಾಗುವುದು ಮುಖ್ಯವಾಗಿದೆ ಎಂದರು.ಅಲ್ಲದೆ ಎಲ್ಲರು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆಯುಳ್ಳ ಮಹಾನಾಯಕ ಧಾರವಾಹಿಯನ್ನು ನೋಡುತ್ತಿದ್ದೇವೆ.ಅವರು ನಮಗಾಗಿ ಪಟ್ಟಿರುವ ಕಷ್ಟವನ್ನು ಎಲ್ಲರು ನೋಡುತ್ತಿದ್ದೇವೆ,ಅವರು ನಮಗಾಗಿ ಪಟ್ಟಿರುವ ಕಷ್ಟವನ್ನು ಅರಿತುಕೊಂಡು ನಾವೆಲ್ಲರು ಎಚ್ಚರಗೊಳ್ಳಬೇಕಿದೆ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ.ಅದಕ್ಕಾಗಿ ಎಲ್ಲರು ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ನೀಡಿದರು.
ಮಾಲಗತ್ತಿ ಗ್ರಾಮ ಪಂಚಾಯತಿ ಸದಸ್ಯ ರೇವಣಸಿದ್ದಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯಅತಿಥಿಗಳಾಗಿ ರಾಮಣ್ಣ ಶೆಳ್ಳಗಿ,ದಸ್ತಗೀರಸಾಬ್ ಚಿಕ್ಕನಹಳ್ಳಿ,ಬಸವರಾಜ ಡೀಲರ್,ನಂದಪ್ಪ ,ಪತ್ರಕರ್ತ ಮಲ್ಲಿಕಾರ್ಜುನ ತಳ್ಳಳ್ಳಿ,ಮಹೇಶ ಯಾದಗಿರ್ ದೇವಿಂದ್ರಪ್ಪ ಚಿಕ್ಕನಹಳ್ಳಿ,ಬಸವಲಿಂಗಪ್ಪ ಪಥಮ ದರ್ಜೆ ಗುತ್ತೇದಾರರು ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಚಿಕ್ಕನಹಳ್ಳಿ ಗ್ರಾಮ ಶಾಖೆಯ ವಿವಿಧ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳು: ಯಲ್ಲಪ್ಪ ಚಿಕ್ಕನಹಳ್ಳಿ ಸಂಚಾಲಕರು,ಅವಿನಾಶ ಹೊಸ್ಮನಿ,ಮಲ್ಲಿಕಾರ್ಜುನ ಛಲವಾದಿ,ಅಂಬ್ರೇಶ ಮೇಲಿಮನಿ ಸಂಘಟನಾ ಸಂಚಾಲಕರು ಹಾಗು ಮಲ್ಲಪ್ಪ ಎಸ್.ಚಿಕ್ಕನಹಳ್ಳಿಯವರನ್ನು ಖಜಾಂಚಿಯನ್ನಾಗಿ ಹಾಗು ಕಾರ್ಯಕಾರಿ ಸಮಿತಿಗೆ ಬಸವರಾಜ ಡೀಲರ್,ಹಣಮಂತ ಹೊಸ್ಮನಿ,ಚನ್ನಪ್ಪ ಚಿಕ್ಕನಹಳ್ಳಿ ಹಾಗು ನಂದಪ್ಪ ಮಾಜಿ ಇವರನ್ನು ನೇಮಕಗೊಳಿಸಲಾಯಿತು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…