ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವ ಟ್ಯಾಂಕ್ನ್ನು ಸ್ವಚ್ಚಗೋಳಿಸದ ಕಾರಣ ಕುಡಿಯುವ ನೀರು ಕಲುಶಿತಗೊಂಡು ಗ್ರಾಮದಲ್ಲಿನ ಸುಮಾರು ೨೦೦ರಕ್ಕೂ ಹೆಚ್ಚು ಜನರು ವಾಂತಿ, ಬೆದಿಯಿಂದ ನರಳಿ ಸುರಪುರ ನಗರದ ಸಾರ್ವಜನಿಕ ಆಸ್ಪತ್ರೇಯಲ್ಲಿ ಚೀಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಮಾಜಿ ಶಾಸಕರಾದ ರಾಜಾ ವೆಂಟಕಪ್ಪ ನಾಯಕರವರು ಆಸ್ಪತ್ರೇಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು, ಇದೆ ಸಮಯದಲ್ಲಿ ತಾಲ್ಲೂಕು ವೈಧ್ಯಾಧಿಕಾರಿಗಳಾದ ಡಾ. ಆರ್.ವಿ.ನಾಯಕ ಮತ್ತು ಡಾ. ಓಂಪ್ರಕಾಶ ಅಂಬುರೇ ಅವರ ಜೊತೆ ರೋಗಿಗಳ ಯೋಗ ಕ್ಷೇಮ ಮತ್ತು ಆಸ್ಪತ್ರೇಯಲ್ಲಿನ ಔಷದಿಯ ಸೌಲಭ್ಯಗಳ ಬಗ್ಗೆ ಚರ್ಚಿಸಿ ಸೌಲಭ್ಯಗಳ ಕೋರತೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಔಷದಿಯ ಸರಬರಾಜು ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಎರಡು ದಿನಗಳಿಂದ ಮಾಚಗುಂಡಾಳ ಗ್ರಾಮಸ್ಥರು, ಆರೋಗ್ಯ ಸಂಕಷ್ಟದಲ್ಲಿರುವ ಬಗ್ಗೆ ಗಮನದಲ್ಲಿದ್ದರೂ ಕೂಡಾ ಬಾದ್ಯಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷವಹಿಸಿರುತ್ತಾರೆ. ಸದರಿ ಅಭಿವೃದ್ಧಿಕಾರಿಯವರಿಗೆ ಮಾಚಗುಂಡಾಳ ಗ್ರಾಮಸ್ಥರು ಹಾಗೂ ಗ್ರಾಮ ಪಂಚಯಾತ ಸದಸ್ಯರು ಅನೇಕ ಬಾರಿ ನೀರಿನ ಟ್ಯಾಂಕ್ನ್ನು ಸ್ವಚ್ಚಗೋಳಿಸಬೇಕು ಮತ್ತು ಕಾಲಕಾಲಕ್ಕೆ ಬ್ಲಿಚಿಂಗ್ ಪೌಡರ ಹಾಕಬೇಕು ಹಾಗೂ ಫಾಗಿಂಗ್ ಕೂಡ ಮಾಡಬೇಕೆಂದು ಮನವಿ ಮಾಡಿದರು.
ಪಂಚಾಯತಿಯವರು ನಿರ್ಲಕ್ಷವಹಿಸಿರುತ್ತಾರೆಂದು ಮಾಚಗುಂಡಾಳ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ ಸದಸ್ಯರು ನನಗೆ ಖುದ್ದಾಗಿ ಬಂದು ಹೇಳಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿಯು ನಿರ್ಲಕ್ಷವಹಿಸಿರುವುದರ ಬಗ್ಗೆ ಪರೀಶಿಲಿಸಿ ಅವರ ಮೇಲೆ ಕ್ರಮ ಕೈಗೋಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಾದಗಿರವರಿಗೆ ಒತ್ತಾಯಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಸಾಹು ನರಸಿಂಗಪೇಟ, ಮಾನಪ್ಪ ಕವಲ್ದಾರ ಬಾದ್ಯಾಪೂರ, ಬಸವರಾಜ ಶ್ರೀನಿವಾಸಪೂರ, ಯಂಕೋಬ ದೊಡ್ಡಿ, ದೇವು ದೊಡ್ಡಿ, ನಾಗರಾಜ, ಬಾಲದಂಡಪ್ಪ ಇನ್ನಿತರರಿದ್ದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…