ಅಂಕಣ ಬರಹ

ರಾಜಕಾರಣಿಗಳ ಐಲಾಗಳೂ ಮತ್ತು ಸಮಾಜವೂ

ಎಮ್ಮೆಗೊಂದು ಚಿಂತೆ;
ಸಮಗಾರಗೊಂದು ಚಿಂತೆ.
ಧರ್ಮಿಗೊಂದು ಚಿಂತೆ;
ಕರ್ಮಿಗೊಂದು ಚಿಂತೆ.
ಎನಗೆ ಎನ್ನ ಚಿಂತೆ,
ತನಗೆ ತನ್ನ ಕಾಮದ ಚಿಂತೆ.
ಒಲ್ಲೆ ಹೋಗು, ಸೆರಗ ಬಿಡು ಮರುಳೆ.
ಎನಗೆ ಚೆನ್ನಮಲ್ಲಿಕಾರ್ಜುನದೇವರು
ಒಲಿವರೊ ಒಲಿಯರೊ ಎಂಬ ಚಿಂತೆ !

ಎಂಬ ಅಕ್ಕಮಹಾದೇವಿಯ ವಚನದಂತೆ ಕರ್ನಾಟಕದ ಸಮಗ್ರ ಜನತೆಗೆ ಮಳೆ ಆಗುತ್ತಿಲ್ಲ ಎಂಬ ಚಿಂತೆ ಇದ್ದರೆ ಈ ಹಡಬಿ ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಚಿಂತೆ ಹತ್ತಿದೆ. ಯಾರು ಖರೀದಿ ಮಾಡುತ್ತಾರೋ ! ಇನ್ನಾರು ಖರೀದಿಸುತ್ತಾರೋ ? ಎಂಬುದು ಮುಖ್ಯವಲ್ಲ. ಯಾವ ಪಕ್ಷ ಅಧಿಕಾರದಿಂದ ಕೆಳಗೆ ಇಳಿಯುತ್ತದೋ ಇನ್ನಾವುದು ಅಧಿಕಾರಕ್ಕೆ ಏರುತ್ತಾರೋ ? ಎಂಬುದು ಜನ ಸಾಮಾನ್ಯರಿಗೆ ಅಮುಖ್ಯ.

ಮಳೆಗಾಲದಲ್ಲಿ ಮಳೆ ಅಪೇಕ್ಷಿಸಿದರು ಬರುತ್ತಿಲ್ಲ. ಬೀಜಗಳನ್ನು ಭೂಮಿಗೆ ಬಿತ್ತಬೇಕೆಂದರೆ ಅದು ಕನಿಷ್ಠ ತೇವಾಂಶವೂ ಹೊಂದಿಲ್ಲ. ಬೀಜ ಬಿತ್ತದೆ ಬೆಳೆಯದೆ ಫಲ ನಿರೀಕ್ಷಿಸಲು ಸಾಧ್ಯವೆ ? ರೈತ ನಿತ್ಯ ಮೋಡ ನೋಡುತ್ತ ಕುಳಿತ್ತಿದ್ದಾನೆ. ತುಂಬು ಬಸುರಿಯಂತೆ ಕಡುಗಪ್ಪಗೆ ಮುಗಿಲಲ್ಲಿ ಓಡಾಡುವ ಮೋಡ ಇನ್ನೇನೋ ನೆಲಕ್ಕೆ ಸುರಿದೆ ಬಿಟ್ಟಿತು ಎಂದು ನಿರೀಕ್ಷಿಸುವಂತೆ, ಸುಯ್ಯನೆ, ಬರ್ರನೆ ಬೀಸುವ ಗಾಳಿ ಆ ಮೋಡಗಳನ್ನು ಹೊತ್ತುಕೊಂಡು ಹೋಗುತ್ತದೆ.

ರೈತ ನಿರಾಶೆಯಿಂದ ಕೈಚೆಲ್ಲುತ್ತಾನೆ. ಹತಾಶೆಯಿಂದ ನಿಡುಸುಯ್ಯುತ್ತಾನೆ. ಮಗಳ ಮದುವೆಗೆಂದು ಹೋದ ವರ್ಷ ಮಾಡಿದ ಸಾಲ ಹೇಗೆ ತೀರಿಸಬೇಕು ? ಬೆಳೆ ಬರಬಹುದೆಂಬ ಭರವಸೆಯಿಂದ ಬಟ್ಟೆ ಅಂಗಡಿಯಲ್ಲಿ ಮಾಡಿದ ಉದ್ರಿ ಕೊಡುವುದು ಯಾವಾಗ ? ನಿತ್ಯದ ದಿನಸಿ ಅಂಗಡಿಯ ಮಾಲಿಕ‌ಹೋಗಿತ್ತ ಬರುತ್ತ ಹಣ ಕೇಳುತ್ತಾನೆ ! ಇವರೆಲ್ಲರಲ್ಲಿ ಬಾಕಿ ಇದೆ. ಕೊಡುವುದು ಯಾವಾಗ ? ಎಂಬ ಚಿಂತೆ ಹಗಲು ರಾತ್ರಿ ಬೇತಾಳದಂತೆ ಕಾಡಿ ರಾತ್ರಿ ನಿದ್ದೆ ಮಾಡಿ ಎಷ್ಟೋ ವರ್ಷಗಳಾದವು.

ನಿರಾಶೆಯ ಬದುಕು ದೂಡಬಾರದೆಂದು ಬತ್ತಾಯದ ನಗುವಿನ ಮುಖ ತಂದುಕೊಂಡು ಆ ಈ ದೇವರಿಗೂ ಹೋಗಿ ಬಂದದ್ದೂ ಇದೆ. ಆದರೆ ಯಾವ ದೇವರೂ ಫಲ ಕೊಡಲಿಲ್ಲ. ಇದ್ದಷ್ಟು ಆತನು ಕಿತ್ತುಕೊಂಡ. ಆಕಾಶ ನಿರಾಶೆ ಮೂಡಿಸಿದರೆ, ವಾಸ್ತವ ಚೈತನ್ಯವನ್ನು ಕಿತ್ತು ತಿನ್ನುತ್ತಿದೆ. ಹೊಲದಲ್ಲಿ ಕೆಲಸ ಮಾಡಿದ ಕೂಲಿಕಾರರಿಗೂ ಕೂಲಿ ಹಣ ಕೊಡದ ದೈನಸಿ ಸ್ಥಿತಿಗೆ ರೈತ ಇಳಿದಾಗಿದೆ.

ರೈತನನ್ನು ಆಶ್ರಯಿಸಿದ ಕೂಲಿಕಾರರು, ಸಣ್ಣ ಪುಟ್ಟ ದಿನಸಿ ವ್ಯಾಪಾರಿಗಳ ಸ್ಥಿತಿ ವರ್ಣಿಸಲಾಗದು. ಪಟ್ಟದಲ್ಲಿಯೂ ಕೂಡ ಮಳೆ ಇಲ್ಲದೆ ಬೋರಗಳು ಬತ್ತಿ ಹೋಗಿವೆ ! ಹನಿ ನೀರಿಗೂ ತತ್ವಾರದ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿದ್ದ ಇದ್ದ ಬದ್ದ ಕೆರೆಗಳು ಯಾರು ಇನ್ನಾರದೋ ಒತ್ತಡದಿಂದ ಲೇ ಔಟ್ ಗಳಾಗಿವೆ. ಹಲವು ಕೆರೆಗಳಲ್ಲಿ ಊಳು ತುಂಬಿ, ನೀರೇ ಇಲ್ಲ. ವಿಚಿತ್ರವೆಂದರೆ ಕೆರೆಯನ್ನು ನಾಲ್ಕಾರುಬಾರಿ ಊಳೆತ್ತಿದ್ದು ಸರಕಾರಿ‌ ಕಡತಗಳಲ್ಲಿ ದಾಖಲೆಯಾಗಿದೆ ! ಎಲ್ಲರೂ ಕಳ್ಳರು, ಖದೀಮರು ಸೇರಿಯೇ ಸರಕಾರದ ಖಜಾನೆಗೆ ಖನ್ನ ಹಾಕಿದ್ದಾರೆ.

ಯುವಕರು ನೈತಿಕತೆ ಬಿಟ್ಟು ಅನೈತಿಕ ಚಟುವಟಿಕೆಗಳಲ್ಲಿ ಪಾಲುದಾರಾಗುತ್ತಿದ್ದಾರೆ. ಮೊಬೈಲ್ ಎಂಬ ಅಲಾವುದ್ಧಿನನ ಅದ್ಭುತ ದೀಪ ಅವರನ್ನು ದಾರಿ ತಪ್ಪಿಸುತ್ತಿದೆ. ಹುಸಿ ದೇಶ ಭಕ್ತಿಯ ರೋಗ ಇವರನ್ನು ಆವರಿಸಿದೆ, ಭ್ರಾಮಕ ಲೋಕದಲ್ಲಿ ಓಲಾಡುತ್ತಿದ್ದಾರೆ. ಇವರಿಗೆ ಪರಿಸರದ, ಸಮಾಜದ, ಧಾರ್ಮಿಕ, ರಾಜಕೀಯ ಪ್ರಜ್ಞೆ ಇಲ್ಲದೆ ಜೀವಂತ ಶವವಾಗುತ್ತಿದ್ದಾರೆ.

ಇವರೆಲ್ಲರಿಗೂ ಸರಿ ದಾರಿಗೆ ತರಬಹುದಾದ ಮಾಧ್ಯಮ ಇಂದು ಉದ್ಯಮಿಗಳ ಕೈಗೊಂಬೆ. “ವ್ಯಾಪಾರಂ ದ್ರೋಹ ಚಿಂತನಂ” – ಎಂಬಂತೆ ಆತ ತನ್ನ ಬಗೆಗೆ ಮಾತ್ರ ಯೋಚಿಸಬಲ್ಲ, ಇನ್ನಾರ ಗೋಳೂ ಅವನಿಗೆ ಕೇಳಿಸದು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬೋಧಿಸಬೇಕಾದ ಮಾಧ್ಯಮ ಇಂದು ಲಜ್ಜೆಗೆಟ್ಟು ವರ್ತಿಸುತ್ತಿದೆ. ನೀಚ ರಾಜಕಾರಣಿಗಳ ಬಾಲಂಗೋಸಿಯಾಗಿ, ಅಧಾರ್ಮಿಕ ಭಯೋತ್ಪಾದಕರಿಗೆ ಮಣೆ ಹಾಕಿ ತನ್ನ ಕರ್ತವ್ಯ ಮರೆತು ಬಿಟ್ಟಿದೆ. ಇದ್ದಲಿ ಮಸಿಗೆ ಬುದ್ದಿ ಹೇಳುವ ಸ್ಥಿತಿತೆ ತನ್ನನ್ನು ಒಡ್ಡಿಕೊಂಡಿದೆ.

ಬೆಂಕಿ ಬಿದ್ದ ಮನೆಯ ಬಗೆಗೆ ಯಾರಿಗೂ ಕಾಳಜಿ ಇಲ್ಲ. ಪರಿಸರದ ಕೂಸಾದ ಮಾನವ, ಪರಿಸರ ಉಳಿದರೆ ನಾವೂ ಉಳಿಯುತ್ತೇವೆ ಎಂಬ ಅರಿವು ತುಂಬುತ್ತಿಲ್ಲ. ಅರಣ್ಯವನ್ನು ಇಂಚಿಂಚು ಮುಕ್ಕಿ ಬಿಟ್ಟಿದ್ದೇವೆ. ಕಾಡಿನ ಪ್ರಾಣಿಗಳು ನಿತ್ಯವೂ ನಾಡಿನಲ್ಲಿ ಕಾಣುತ್ತಿವೆ. ಬರೀ ಕಾಂಕ್ರಿಟ್ ಕಾಡು ನಿರ್ಮಿಸುವುದೆ ನಾಗರಿಕತೆ ಎಂದು ತಿಳಿದುಕೊಂಡಿದ್ದೇವೆ.

ದುಡ್ಡು ಬೇಕು, ದುಡ್ಡೇ ಎಲ್ಲಾ ಅಲ್ಲ. ಆದರೆ ಲಜ್ಜೆಗೆಟ್ಟ ರಾಜಕಾರಣಿಗಳು ಇಂದು ಮಾಡುತ್ತಿರುವುದು ಏನು ? ಜನರ ಏಳ್ಗೆಗಾಗಿ ಪ್ರತಿನಿಧಿಯಾದ ಇವರು ಕೋಟ್ಯಂತರ ರೂಪಾಯಿಗಳಿಗೆ ತಮ್ಮನ್ನು ಮಾರಿಕೊಂಡು ಮತದಾರನಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕುರಿತು ಯಾವೊಬ್ಬ ಮಾಧ್ಯಮ ಪ್ರತಿನಿಧಿಯೂ ಕ್ಯಾಕರಿಸಿ ಉಗುಳುತ್ತಿಲ್ಲ. ಅವರ ಕುದುರೆ ವ್ಯಾಪಾರವನ್ನು ಅತಿ ರಂಜಿತವಾಗಿ ಹೊಗಳಿ, ಅವರ ಘನ ಕಾರ್ಯವನ್ನು ಬಣ್ಣಿಸುತ್ತಿವೆ.

ಉಪ್ಪು ತನ್ನ ರುಚಿ ಕಳಕೊಂಡರೆ ಏನು ಮಾಡುವುದು ?

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !

emedialine

View Comments

  • ಈ ರಾಜಕಾರಣಿಗಳಿಗೆ ಬುದ್ದಿ ಯಾವಾಗ ಬರುತ್ತೋ, ನಮ್ಮ ರೈತರು ಎಂದ ಉದ್ದಾರ ಆಗ್ತಾರೋ ....

Recent Posts

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

11 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

11 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

11 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

11 hours ago

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಸಮಾಧಾನವಿದೆ, ತೃಪ್ತಿಯಿಲ್ಲ: ಬಿಆರ್ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ…

12 hours ago

ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

ಕಲಬುರಗಿಯಲ್ಲಿ ವಕ್ಫ್ ಅದಾಲತ್ ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420