ಶಹಾಬಾದ: ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಹೂಗಾರ ಮಾದಯ್ಯ ಉತ್ತಮ ನಿದರ್ಶನವಾಗಿದ್ದರು ಎಂದು ಹೂಗಾರ ಸಮಾಜದ ಅಧ್ಯಕ್ಷ ಕಾಶಿರಾಯ ಹೂಗಾರ ಹೇಳಿದರು.
ಅವರು ಸೋಮವಾರ ತಾಲೂಕಿನ ದೇವನತೆಗನೂರ ಗ್ರಾಮದಲ್ಲಿ ಆಯೋಜಿಸಲಾದ 12ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
12 ನೇ ಶತಮಾನದಲ್ಲಿ ಕ್ರಾಂತಿ ಕಾರ್ಯಕಗಳಿಗೆ ಶ್ರಮಿಸಿದ ಶರಣರೊಂದಿಗೆ ಹೂಗಾರ ಮಾದಣ್ಣನವರ ಸೇವೆ ಕೂಡ ಅಪಾರವಾಗಿದೆ. ಮನುಷ್ಯ ಹುಟ್ಟಿನಿಂದ ಸಾಯುವತನಕ ಹೂಗಾರನ ಸೇವೆ ಅವಶ್ಯವಾದದ್ದು.ಹೂವು ಇಲ್ಲದ ಕಾರ್ಯ ಯಾವುದು ಇಲ್ಲ.
ಹೂಗಾರ ನೀಡುವ ಹೂಗಳು ದೇವರ ಶಿರಕ್ಕೆ ರ್ಪಣೆಯಾದರೆ, ಗುರುವಿನ ಕಾಲಿಗೆ ಶೋಭೆ ನೀಡುತ್ತವೆ.ಅಲ್ಲದೇ ಮಹಿಳೆಯರಿಗೆ ಶೃಂಗಾರ ನೀಡುವ ಶಕ್ತಿ ಹೂವಿಗಿದೆ.ಶರಣರ ಪೂಜೆಗಳಿಗೆ ಹೂವುಗಳನ್ನು ಪೂರೈಸುತ್ತಾ ವನಚಗಳನ್ನು ರಚಿಸಿದ ಕೀರ್ತಿ ಮಾದಣ್ಣನವರಿಗಿದೆ ಎಂದು ಹೇಳಿದರು.
ಮರತೂರ ಗ್ರಾಪಂ ಸದಸ್ಯ ಶಿವಾನಂದ ಮಕಾಶಿ ಮಾತನಾಡಿ, ಹೂವಾಡಿಗ ಸಮುದಾಯದಲ್ಲಿ 28 ಉಪನಾಮಗಳಿವೆ. ಹೂಗಾರ ಸಮಾಜ ಚಿಕ್ಕದಲ್ಲ. ಎಲ್ಲ ಸಮುದಾಯಗಳಿಗಿಂತ ಉನ್ನತ ಸ್ಥಾನದಲ್ಲಿದೆ. ದೇವರ ತಲೆ ಮೇಲೆ ಕೈಯಿಟ್ಟು ಪೂಜೆ ಮಾಡುವ ಸಮುದಾಯ ನಮ್ಮದು. ಈ ಸಮಾಜ ದೊಡ್ಡ ಮನಸ್ಸು ಹೊಂದಿದೆ ಎಂದರು.
ಮಹಾಂತೇಶ ಬಿರಾದಾರ, ನಾಗೇಂದ್ರ ಹೂಗಾರ, ಲಿಂಗಣ್ಣ ಪಾಟೀಲ, ಶಿವು ಹೂಗಾರ, ಪರಮೇಶ್ ಪಾಟೀಲ, ಮಹೇಶ್ ಯರಗಲ್, ಅಣ್ಣಾರಾವ ಮಕಾಶಿ, ಕಾಶಿನಾಥ ಬಿರಾದಾರ ಇತರರು ಇದ್ದರು.
ಕಲಬುರಗಿ: ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ…
ಕಲಬುರಗಿ: ಬಿಜೆಪಿ ಮಹಾನಗರ ಜಿಲ್ಲೆಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಶಿವಲಿಂಗ ಪಾಟೀಲ್ ಸಾವಳಗಿ ಅವರನ್ನು ನೇಮಕ ಮಾಡಿದ ಕಾರಣೀಭೂತರಾದ ದಕ್ಷಿಣ…
ಕಲಬುರಗಿ: ವಿಶ್ವ ಕರ್ಮಾ ಸಮಾಜ ವತಿಯಿಂದ ಬಿಜೆಪಿ ಮಹಾ ನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್…
ಕಲಬುರಗಿ: ಸಾಯಿ ರಾಮ್ ನಗರದಲ್ಲಿರುವ ವಿ ಎಲ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮಾಜಿ ಉಪಮೇಯರ್ ಮಹೇಶ್…
ಕಲಬುರಗಿ: ಇತ್ತೀಚೆಗೆ ಜರುಗಿದ ರಿಪಬ್ಲಿಕನ ಪಾರ್ಟಿ ಆಫ್ ಇಂಡಿಯಾ (ಆಕದಲೆ) ಕಲಬುರಗಿ ಜಿಲ್ಲಾ ಘಟಕದ ಸಭೆಯಲ್ಲಿ ರಾಜಕುಮಾರ ಪಿ.ನಡಗೇರಿ ಇವರನ್ನು…
ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ವೆಂಕಟೇಶ ಪುರಾಣವನ್ನು ಅರ್ಚಕರಾದ ಗುಂಡಾಚಾರ್ಯ ನರಿಬೊಳ…
View Comments
Superb