ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಕಲಬುರಗಿಯ ಪಿ.ಡಿ.ಎ. ಇಂಜನಿಯರಿಂಗ ಕಾಲೇಜಿನಲ್ಲಿ ಸಿ.ಇ.ಟಿ. ಕೌನ್ಸಲಿಂಗ ಮತ್ತು ಮೂಲ ದಾಖಲಾತಿಗಳ ಪರಿಶೀಲನೆ (ಡಾಕ್ಯೂಮೆಂಟ ವೆರಿಫಿಕೇಶನ) ಕಾರ್ಯ ಇಂದು ದಿನಾಂಕ ೩೦ ಸೆಪ್ಟೆಂಬರ್ ೨೦೨೧ ರಂದು ಆರಂಭಗೊಂಡಿತು.
ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸೋಮನಾಥ ನಿಗ್ಗುಡಗಿ ರವರು ಉದ್ಘಾಟನೆಗೊಳಿಸುತ್ತಾ, ಸಿ.ಇ.ಟಿ. ಕೌನ್ಸಲಿಂಗ್ ಸೆಲ್ಗೆ ಬೇಕಾದ ಎಲ್ಲಾ ಸಹಕಾರವನ್ನು ನಮ್ಮ ಸಂಸ್ಥೆಯು ಪಿ.ಡಿ.ಎ. ಕಾಲೇಜ ಪರವಾಗಿ ನೀಡುತ್ತೇವೆ ಎಂದು ನುಡಿದರು. ಉಪ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ಅತಿಥಿಗಳಾಗಿ ಕಾಲೇಜಿನ ಡೀನ್ ಅಕಾಡೆಮಿಕ್ ಡಾ. ಸಿದ್ರಾಮ ಆರ್. ಪಾಟೀಲ ರವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕೆ.ಇ.ಎ. (ಸಿ.ಇ.ಟಿ) ಕಲಬುರಗಿ ಸಹಾಯ ಕೇಂದ್ರದ ನೊಡಲ್ ಅಧಿಕಾರಿಯಾದ ಶ್ರೀ ಡಿ.ಆರ್. ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಅತ್ಯನ್ನತ ರ್ಯಾಂಕ ಹೊಂದಿದ ವಿದ್ಯಾರ್ಥಿ ನಾಗರಾಜ ಅವಂತಗಿ (ರ್ಯಾಂಕ್ ೧೯೩ ಇಂಜನಿಯರಿಂಗ) ಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಿ.ಇ.ಟಿ. ಸಹಾಯ ಕೇಂದ್ರದ ಸಿಬ್ಬಂದಿ ಶ್ರೀ ರಾಜೇಂದ್ರ ಬಡಿಗೇರ ರಾನಗರಾಜ ಎಂ. ಗುರುರಾಜ ಮಹಾಗಾಂವಕರ್ ಡಾ. ಬಾಬುರಾವ ಎನ್. ಶೇರಿಕಾರ, ಕಾಂತರಾಜ ಉಪಸ್ಥಿತರಿದ್ದರು.
೩೦ ರಿಂದ ದಿನಾಂಕ : ೨೮-೧೦-೨೦೨೧ ರ ರವರೆಗೆ ಇಂಜನೆಯರಿಂಗ ಸಿ.ಇ.ಟಿ. ರ್ಯಾಂಕ್ ಆಧಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ವಿದ್ಯಾರ್ಥಿಗಳು ತಮ್ಮ ತಮ್ಮ ರ್ಯಾಂಕಿಗೆ ಅನುಗುಣವಾಗಿ ಕೇಂದ್ರ ಅಗಲಿಸಿ ದಾಖಲೆಗಳ ಪರಿಶೀಲನೆ ಮಾಡಿಕೊಳ್ಳಬೇಕು ಮೂಲ ದಾಖಲೆಗಳ ಜೊತೆಯಲ್ಲಿ ಎಲ್ಲ ಪ್ರಮಾಣ ಪತ್ರಗಳ ಒಂದು ಪ್ರತಿಯನ್ನು ಗೆಜೆಟೆಡ್ ಅಧಿಕಾರಿಯಿಂದ ಅಟೆಸ್ಟೆಶನ್ ಮಾಡಿಸಿಕೊಂಡು ಸಲ್ಲಿಸವುದು ಕಡ್ಡಾಯವಾಗಿದೆ ಎಂದು ಈ ಮೂಲಕ ನೂಡಲ್ ಅಧಿಕಾರಿ ಡಿ.ಆರ್. ಶಿಂಧೆ ತಿಳಿಸಿರುತ್ತಾರೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…