ಸುರಪುರ: ತಾಲೂಕಿನ ರೈತರಿಗೆ ಶೇಂಗಾ ಬೀಜ ಮತ್ತು ಸ್ಪಿಂಕ್ಲರ್ ಪೈಪ್ಗಳನ್ನು ವಿತರಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯಿಂದ ನಗರದ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಮಾತನಾಡಿ,ತಾಲೂಕಿನಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಆರಂಭಗೊಂಡಿದ್ದು ರೈತರಿಗೆ ಸರಿಯಾದ ಶೇಂಗಾ ಬೀಜ ಸಿಗದೆ ಪರದಾಡುವಂತಾಗಿದೆ,ಅಲ್ಲದೆ ಅನೇಕ ರೈತರು ದುಬಾರಿ ಬೆಲೆ ನೀಡಿ ಖಾಸಗಿಯವರ ಬಳಿ ಶೇಂಗಾ ಬೀಜ ಖರಿದಿಸುವ ಪರಸ್ಥಿತಿ ನಿರ್ಮಾಣವಾಗಿದೆ,ಇದರಿಂದ ರೈತರು ತೀವ್ರ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ರೈತರಿಗೆ ಶೇಂಗಾ ಬೀಜಗಳನ್ನು ವಿತರಿಸುವಂತೆ ಒತ್ತಾಯಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಬಾಡಗೇರಾ ಮಾತನಾಡಿ,ರೈತರಿಗೆ ಉತ್ತಮವಾದ ಶೇಂಗಾ ಬೀಜಗಳಾದ ಕದ್ರಿ ಲೆಪಾಕ್ಷಿ ೧೮-೧೨ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ,ಅಲ್ಲದೆ ರೈತರಿಗೆ ಸ್ಪಿಂಕ್ಲರ್ ಪೈಪ್ಗಳು ವಿತರಣೆ ಮಾಡದಿರುವುದರಿಂದ ರೈತರು ನೀರಾವರಿಗೆ ತೊಂದರೆಯಾಗಿದೆ.ಆದ್ದರಿಂದ ಕೂಡಲೇ ಶೇಂಗಾ ಬೀಜ ಮತ್ತು ಸ್ಪಿಂಕ್ಲರ್ ಪೈಪ್ಗಳನ್ನು ವಿತರಿಸಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕೃಷಿ ಸಹಾಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮಡ್ಡಿ,ಕಾರ್ಯಾಧ್ಯಕ್ಷ ಮಲ್ಲು ಶಿಬಾರಬಂಡಿ,ಗೋಪಾಲ ನಾಯಕ ಸತ್ಯಂಪೇಟೆ,ಬಸವರಾಜ ಪಾಟೀಲ್,ನಬಿಸಾ,ಶಿವರಾಜ ವಗ್ಗರ ದಿವಳಗುಡ್ಡ,ದೇವು ನಾಯಕ,ರವಿಕಿರಣ ಸಿದ್ದಾಪುರ,ಖಾಜಾ ಕಡಾಂಡಿ,ವೆಂಕಟೇಶ ಬಿಚಗತ್ತಿ,ರಂಗನಾಥ ಶಿಬಾರಬಂಡಿ,ಅರ್ಜುನ್ ಯಕ್ಷಿಂತಿ,ಅಯ್ಯಣ್ಣ ಏವೂರ್,ಮೌನೇಶ ಶಿಬಾರಬಂಡಿ,ಚಂದಪ್ಪ ಶಿಬಾರಬಂಡಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…