ಕಲಬುರಗಿ: ಮನುಷ್ಯನು ತನ್ನ ಒಳ್ಳೆಯ ಕಾರ್ಯದೊಂದಿಗೆ ಉತ್ತಮ ವಿಚಾರಗಳನ್ನು ಎತ್ತರಿಸಬೇಕೆ ವಿನಃ ನಮ್ಮ ಧ್ವನಿಯಲ್ಲಾ ಏಕೆಂದರೆ ಮಳೆ ನೀರಿನಿಂದ ಮರಗಳು ಬೆಳೆಯುತ್ತವೆ ಹೊರತು ಗುಡುಗು ಸಿಡಿಲಿನಿಂದಲ್ಲಾ ಎಂದು ಖ್ಯಾತ ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಷಾಳ ಹೇಳಿದರು.
ನಗರದ ಚನ್ನವೀರ ನಗರದಲಿೢ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಮಹಾನವಮಿ ಹಬ್ಬದ ನಿಮಿತ್ಯ ಜೈ ಭವಾನಿ ನವ ಯುವಕ ತರುಣ ಸಂಘ ಆಯೋಜಿಸಿದ ಸೊಲ್ಲಾಪುರದ ಸಿದ್ದರಾಮೇಶ್ವರ ಮಹಾಪುರಾಣವನ್ನು ಹೇಳುತ್ತಾ ಪುರಾಣ, ಪ್ರವಚನ, ಆಧ್ಯಾತ್ಮಿಕದ ಕಾರ್ಯಕ್ರಮಗಳಿಂದ ನಯ, ವಿನಯ, ಪ್ರೀತಿ, ಪ್ರೇಮ ಒಬ್ಬರಿಗೊಬ್ಬರ ಆತ್ಮೀಯತೆ ಬೆಳೆದು ಸಂಸ್ಕಾರ ಸಮಾಜ ನಿರ್ಮಿಸಬಹುದು ಆದರೆ ಸಿಟ್ಟು, ಮೋಸ, ವಂಚನೆ ಹಾಗೂ ತಿರಸ್ಕಾರಗಳಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಪುರಾಣದಲ್ಲಿ ಬರುವ ಹಲವಾರು ಅದ್ಭುತ ವಿಚಾರಗಳು ತಮ್ಮ ಜೀವನದಲಿೣ ಅಳವಡಿಸಿಕೊಂಡು ಮಕ್ಕಳಿಗೆ, ಹಿರಿಯರು ಆದರ್ಶವಾಗಬೇಕೆಂದು ಮಾರ್ಮಿಕವಾಗಿ ನುಡಿದರು. ಗವಾಯಿಗಳಾದ ಶಾಂತಕುಮಾರ ಸಾವಳಗಿ ಹಾಗೂ ಶಂಭುಲಿಂಗ ಪಾಟೀಲ ದುಧನಿ ತಬಲಾ ಸಾಥ ನೀಡಿದರು.ಕಲಾವಿದರಾದ ರಾಜು ಹೆಬ್ಬಾಳ, ಮಹೇಶ ತೆಲೆಕುಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರೇಶ ಹನಗುಡಿ, ಯುವ ಮುಖಂಡರಾದ ಚನ್ನು ಲಿಂಗನವಾಡಿ,ಸಭೆ ಸಂಚಾಲಕರಾದ ಶಿವರಾಜ ರೇವೂರ, ಬಸವರಾಜ ಹೊಡಲ, ಶೇಖರ ಗರಡನ, ಗೌರಿಶ೦ಕರ ಕುಂಬಾರ, ರೇವಣಸಿದ್ದಪ್ಪ ಕುಂಬಾರ,ಶರಣು ಬಡದಾಳ, ಶರಣು ಮುನ್ನಳ್ಳಿ, ಶರಣು ಹರಸುರ, ಶರಣು ಸಾಲ೦ಕಿ, ವಿಶ್ವನಾಥ ತಾಂಬಾ, ಚಂದಣ್ಣ ಬಶೆಟ್ಟಿ, ಮಲ್ಲಿನಾಥ ರೇವುರ, ಸಾಗರ ಜಿಡಗಾ, ಅನಿಲ ಸ್ವಾಮಿ, ಅರುಣ ಸಲಗರ, ಹಣಮಂತರಾಯ ಗೋಳಾ, ಭಗವಂತ ಹೇರೂರ, ಶರಣು ರೇವೂರ ಹಾಗೂ ಬಡಾವಣೆಯ ಹಿರಿಯರಾದ ಹಿರಗಣ್ಣಾ ಪೂಜಾರಿ, ಪುಂಡಲೀಕ ಶಿಂಧೆ, ಬಸವರಾಜ ಭೈರಾಮಡಗಿ,ಮಡಿವಾಳಯ್ಯ ಸ್ವಾಮಿ ಶ್ರೀಚ೦ದ, ಹಣಮಂತರಾಯ ಉಮ್ಮರಗಿ, ಚಂದ್ರಕಾಂತ ಘಾಣೂರೆ, ಬಸವರಾಜ ರೇವೂರ, ಮಲ್ಲಿಕಾರ್ಜುನ ಸುರಪೂರ, ಯಶವಂತರಾವ ರೇವೂರ, ಮಹಾದೇವಪ್ಪ ಬಡದಾಳ, ಅಣ್ಣಪ್ಪ ಮುನ್ನಳ್ಳಿ,ಅಪ್ಪಾರಾವ ಮುನ್ನಳ್ಳಿ, ನಾಗಣ್ಣ ಕುಂಬಾರ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.
ಕಲಬುರಗಿ: ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜುಲೈ…
ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…
ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…
ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್ಓ ವತಿಯಿಂದ…
ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…
ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…