ಸಾಂಸ್ಕೃತಿಕ ಕಲೆಗಳ ಕುಣಿತ ಗೊರವರ ಕುಣಿತ..!

ಕರ್ನಾಟಕ ಸಾಂಸ್ಕೃತಿಕ ಕಲೆಗಳ ತವರೂರು ಎಂದೇ ಪ್ರಸಿದ್ಧಿ. ಅದಕ್ಕೆ ಮೂಲ ಕಾರಣ ಜಾನಪದ ಕಲೆಗಳಾದ ಹಾಡು, ನೃತ್ಯ, ಕ್ರೀಡೆಗಳು.

ಜಾನಪದ ನೃತ್ಯಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆ, ಗೊರವರ ಕುಣಿತಗಳು ಹೆಸರುವಾಸಿ. ಆದರೆ ಕರ್ನಾಟಕದ ಕೆಲವು ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ ಕಂಡುಬರುವಂತಹ ಸ್ಥಿತಿ ಇಂದು ಜಾನಪದ ಕಲೆಗಳಿಗೆ ಒದಗಿ ಬಂದಿದೆ. ಅಂತಹವುಗಳಲ್ಲಿ ಗೊರವರ ಕುಣಿತವೂ ಒಂದು.

ಗೊರವರ ಕುಣಿತ ಕರ್ನಾಟಕದ ಕುರುಬ ಗೌಡ ಜನಾಂಗದ ಒಂದು ಸಾಂಪ್ರದಾಯಿಕ ನೃತ್ಯ ಕಲೆಯಾಗಿದೆ. ಕುರುಬ ಗೌಡರು ಮೈಲಾರಲಿಂಗ ದೇವರ ಭಕ್ತರಾಗಿದ್ದು, ಪುರುಷರು ದೀಕ್ಷೆಯನ್ನು ಪಡೆದಿರುತ್ತಾರೆ ಅಥವಾ ಗೊರವ ಸಂಪ್ರದಾಯವನ್ನು ಅನುಸರಿಸುವ ಪಣ ತೊಟ್ಟಿರುತ್ತಾರೆ. ಇಂತಹ ದೀಕ್ಷೆಯನ್ನು ಮದುವೆ ಮುಂಚಿತವಾಗಿ ನೀಡಿರುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಮೈಲಾರಲಿಂಗನಿಗೆ ಮತ್ತು ಗೊರವ ನೃತ್ಯಕ್ಕೆ ಮುಡಿಪಾಗಿಡುತ್ತಾರೆ.

ಗೊರವರು ಧರಿಸುವ ವಸ್ತ್ರಗಳು ವಿಚಿತ್ರ ಎನಿಸಿದರೂ ಆಕರ್ಷಕವಾದವು. ತಲೆಯ ರುಮಾಲಿನ ಮೇಲೆ ಕರಡಿ ಚರ್ಮ, ಬಿಳಿ ಅಥವಾ ಹಳದಿ ಬಣ್ಣದ ಪಂಚೆ ಮತ್ತು ಕಚ್ಚೆ, ತುಂಬು ತೋಳಿನ ಜುಬ್ಬ ಧರಿಸಿ, ಬಲಗೈಯಲ್ಲಿ ನಾಗಬೆತ್ತ ಮತ್ತು ಎಡಗೈಯಲ್ಲಿ ಡಮರು ಹಿಡಿದು, ಹಣೆಗೆ ವಿಭೂತಿಯನ್ನು ಹಚ್ಚಿ ಕಣ್ಣಿನ ಸುತ್ತ ಬಿಳಿ ಮತ್ತು ಕೆಂಪು ವರ್ಣದ ವೃತ್ತಗಳನ್ನು ಬಳಿದುಕೊಂಡು, ಕಣ್ಣನ್ನು ಅರಳಿಸುತ್ತಾ, ಹುಬ್ಬೇರಿಸುತ್ತ ಕುಣಿವ ಇವರು ನೋಡುಗರಲ್ಲಿ ಭಯಭೀತಿಯನ್ನು ಹುಟ್ಟಿಸುತ್ತಾರೆ. ಮೈಲಾರಲಿಂಗ, ಮಂಟೇಸ್ವಾಮಿ ಮತ್ತು ಮಹದೇಶ್ವರನ ಕತೆಗಳನ್ನು ಇವರು ಹಾಡುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಮೂಲ ಜಾನಪದ ಕುಣಿತಗಳು ಕಣ್ಮರೆಯಾಗುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯ ಆಗಮನದಿಂದಾಗಿ ಜಾನಪದ ಕಲಾವಿದರಿಗೆ ಮನ್ನಣೆಯೇ ಇಲ್ಲದಂತಾಗಿದೆ.

ಪಾರಂಪರಿಕ ಉತ್ಸವ, ದಸರಾ ಉತ್ಸವಗಳಲ್ಲಿ ಮಾತ್ರ ಕಾಣಸಿಗುವ ಈ ಗೋರವರ ಕುಣಿತವನ್ನು ನೋಡುವುದೇ ಖುಷಿ. ಏನೇ ಆದರೂ, ಈ ಜಾನಪದ ಕಲೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ ಶಾಸ್ತ್ರೀಯ ನೃತ್ಯಗಳಂತೆ ಜಾನಪದ ನೃತ್ಯಗಳಿಗೂ ಮನ್ನಣೆ ಸಿಗಲಿ ಎಂಬುದೇ ನಮ್ಮ ಆಶಯ…!

# ಕೆ.ಶಿವು.ಲಕ್ಕಣ್ಣವರ
emedialine

Recent Posts

ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…

6 hours ago

ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…

6 hours ago

ಲಿಂಗರಾಜ ಶಾಸ್ತ್ರಿ ಪುಣ್ಯಸ್ಮರಣೋತ್ಸವ: ಬಹುಮುಖ ವ್ಯಕ್ತಿತ್ವದ ಶಾಸ್ತ್ರಿ

ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್‌ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…

6 hours ago

ಕಲಬುರಗಿ: ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯಧಿಕಾರಿಗೆ‌ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…

6 hours ago

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

7 hours ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420