ಆಳಂದ: ಹಲವು ಭಾಷೆ ಧರ್ಮಗಳಿಂದ ಕೂಡಿದ ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರದ ಭಾವೈಕ್ಯತೆ ರಾಷ್ಟ್ರೀಯತೆಯನ್ನು ಕಾಪಾಡಲು ಗೃಹ ರಕ್ಷಕರ ಗುರಿಯಾಗಬೇಕು ಎಂದು ಗೃಹ ರಕ್ಷಕದಳದ ಪ್ರಭಾರಿ ಘಟಕಾಧಿಕಾರಿ ಶ್ರೀಮಂತ ಟಿ. ಬರಮಣೆ ಅವರು ಹೇಳಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಗೃಹ ರಕ್ಷಕದಳ ಘಟಕದ ಆಶ್ರಯದಲ್ಲಿ ಕಚೇರಿಯ ಮುಂದೆ ಹಮ್ಮಿಕೊಂಡ ರಾಷ್ಟ್ರೀಯ ಏಕತಾದಿನ ಅಂಗವಾಗಿ ಪ್ರತಿಜ್ಞಾ ವಿಧಿಸಿ ಬೋಧಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಗೃಹ ರಕ್ಷದಳ ಸಮಾಜ ದೇಶ ಸೇವೆಗೆ ಸದಾ ಬದ್ಧವಾಗಿ ನಡೆದುಕೊಳ್ಳುತ್ತದೆ. ಇದಕ್ಕೆ ಸಿಬ್ಬಂದಿಗಳು ಸಹ ನಮ್ಮ ಕರ್ತವ್ಯ ಮತ್ತು ಪ್ರಾಣಿಕತೆ ಮರೆಯುವ ಮೂಲಕ ಜನ ಮೆಚ್ಚಿಗೆ ಪಡೆದುಕೊಳ್ಳಲು ಮುಂದಾಅಗಬೇಕು ಎಂದು ಹೇಳಿದರು.
ನಿಕಟಪೂರ್ವ ಘಟಕಾಧಿಕಾರಿ ಪಿಎಲ್ಸಿ ಶ್ರೀಶೈಲ ಎಂ. ಅಚಲೇರಿ ಅವರು ಮಾತನಾಡಿ, ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡಲು ಗೃಹ ರಕ್ಷದಳದ ಪ್ರತಿಜ್ಞೆಯಂತೆ ನಡೆದುಕೊಂಡು ರಾಷ್ಟ್ರದ ಅಂತರಿಕ ಭದ್ರತೆಯನ್ನು ಖಾತ್ರಿಪಡಿಸಲು ನಾವುಗಳು ನಮ್ಮದೆಯಾದ ಕೊಡುಗೆಯನ್ನು ನೀಡಲು ಬದ್ಧರಾಗೋಣ ಎಂದು ಹೇಳಿದರು.
ಸಿಬ್ಬಂದಿ ಚಂದ್ರಕಾಂತ ಎಸ್. ಜವಳಿ, ಅಮೂಲಕುಮಾರ ಜಿ. ಜೈನ್, ಚೌಡಪ್ಪ ಮಾಡಿಯಾಳ, ಸಂತೋಷ ಮೇತ್ರೆ, ವೀರೇಂದ್ರ ಕಾಲೇಕರ್, ಸುನೀಲಕುಮಾರ ಬಟಗೇರಿ, ಬಸವರಾಜ ಎಂ. ಅಚಲೇರಿ, ಹುಸೇನಿ ಮುಲ್ಲಾ, ರವೋಫ್ ಅನ್ಸಾರಿ, ನಜಮೋದ್ದೀನ್ ಹಿರೋಳಿ, ಲಕ್ಷ್ಮೀಕಾಂತ ಕೋಣೆ, ಮಲ್ಲಿನಾಥ ಮಗಿ, ರಾಜಕುಮಾರ ಗೊಳೆ ಮತ್ತು ಇತರ ಸಿಬ್ಬಂದಿಗಳು ಸೇರಿ ನಾಗರಿಕರು ಪಾಲ್ಗೊಂಡಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…