ಕಲಬುರಗಿ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲು,ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಬಿಜೆಪಿ ಯುವ ಮುಖಂಡರಾದ ಪ್ರೊ ಯಶವಂತರಾಯ್ ಅಷ್ಠಗಿ ವ್ಯಾಖ್ಯಾನಿಸಿದರು.
ತಾಲೂಕಿನ ಸುಕ್ಷೇತ್ರ ಕಲಮೂಡ ಗ್ರಾಮದಲ್ಲಿ ಹಮ್ಮಿಕೊಂಡಿರುವ ದತ್ತ ದಿಗಂಬರ ಮಾಣಿಕೇಶ್ವರರ ಲಕ್ಷ ದೀಪೊತ್ಸವ ಕಾರ್ಯಕ್ರಮ ಅಂಗವಾಗಿ ಜರುಗುತ್ತಿರುವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣದ ಧಾರ್ಮಿಕ ಸಮಾರಂಭವದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದ ಜೊತೆ ಅತ್ಯುತ್ತಮವಾದ ಸಂಸ್ಕಾರ ನೀಡುವ ಮೂಲಕ ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಸಮೃದ್ಧ, ಸುಸಂಸ್ಕೃತ ಹಾಗೂ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸೋಂತ ಶ್ರೀಮಠದ ಬಾಲಯೋಗಿ ಅಭಿನವ ಶ್ರೀ ಶಂಕರಲಿಂಗ ಮಹಾರಾಜರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಪುಂಡಲೀಕರಾವ ಚಿರಡೆ, ಎಪಿಎಮಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ, ಬಿಜೆಪಿ ಮುಖಂಡರಾದ ಜಗದೀಶ ಪಾಟೀಲ ಸಣ್ಣೂರ, ಬಸವರಾಜ ಕಲಶೇಟ್ಟಿ, ಶರಣು ಕೋರಿ ಸೊಂತ, ಶೋಭಾ ಡಂಬಳ, ಉಮಾದೇವಿ ಶಾಲಿವಾಹನ ಪಾಟೀಲ ದಿನಸಿ, ಪತ್ರಕರ್ತ-ಸಾಹಿತಿಗಳಾದ ಸುರೇಶ ಲೇಂಗಟಿ, ಯುವ ಪತ್ರಕರ್ತ ಸುಧಾಕರ ಲೇಂಗಟಿ, ಪುರಾಣಕಾರ ಶಿವಬಸವಯ್ಯ ಶಾಸ್ತ್ರಿ, ಸೇರಿದಂತೆ ಬೀದರ ಹಾಗೂ ಕಲಬುರಗಿ ಜಿಲ್ಲೆಯ ಸಹಸ್ರ ಸಹಸ್ರ ಸಂಖ್ಯೆಯ ಮಾಣಿಕೇಶ್ವರ ಮಹಾರಾಜರ ಭಕ್ತವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬರುವ ಮಹಾದಾಸೋಹಿ ಶರಣಬಸವೇಶ್ವರ ಮದುವೆ ನ್ನಿವೇಶದ ಪ್ರಯುಕ್ತ ಬಂದಂತಹ ಭಕ್ತಾದಿಗಳಿಗೆ ಮಹಾ ಪ್ರಸಾದ (ಹೋಳಿಗೆ-ತುಪ್ಪ) ದಾಸೋಹವನ್ನು ರಾಜಕುಮಾರ ಕೋಟೆ ದಂಪತಿಯಗಳು ನಡೆಸಿಕೊಟ್ಟರು.
ಪ್ರಕಾಶ ರೆಡ್ಡಿ, ಜಗನ್ನಾಥ ಕೋಟಿ, ರವೀಂದ್ರ ರೆಡ್ಡಿ ಮಾಸ್ಟರ್,ರವೀಂದ್ರ ಕರಿಕಲ್, ರಾಚಪ್ಪ ಕಲಕೋರಿ, ಮಲ್ಲಿಕಾರ್ಜುನ ಚಿಮ್ಮನಚೋಡ,ಮಾಣಿಕರಾವ ಡೋಣಿ,ಚಂದಾರೆಡ್ಡಿ,ಸಂಗಪ್ಪ ಕೂಡಂಗಲ್, ಉಮೇಶ ಪರೀಟ,ಅಶೋಕ ಜಲಸಂಗಿ,ಸುಭಾಷ ತಂಗಾ,ರೇವಣಸಿದ್ದಪ್ಪ ಚಕ್ರಕರ್,ಭೀಮರಾವ ಜಮಾದಾರ ಸೇರಿದಂತೆ ಇನ್ನೂ ಅನೇಕ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಅಶೋಕ ಕೋಟೆ ನಿರ್ವಹಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…