ಬಿಸಿ ಬಿಸಿ ಸುದ್ದಿ

ಬಯಲುಡುಗೆಯ ಬೋಂತಾದೇವಿ

ನಮ್ಮ ಶರಣರು ಸಾಹಿತ್ಯಾಗಸದ ಮಿನುಗುವ ಚುಕ್ಕೆಗಳು. ೯೦೦ ವರ್ಷಗಳಿಂದ ದಿದೇಪ್ಯಮಾನವಾಗಿ ಬೆಳಗಿದ ದೃವತಾರೆಗಳು. ಅವರ ಮನೋಗಂಗೆಯಿಂದ ಓತಪ್ರೋತವಾಗಿ ಹರಿದು ಬಂದ ಜ್ಞಾನದ ಕಿರಣಗಳು. ಶರಣರಿಗೆ ಮನೆಗಳಿರಲಿಲ್ಲ. ಅವರು ಹಣದಿಂದ ಶ್ರೀಮಂತರಲ್ಲ. ಆದರೆ ಅವರಷ್ಟು ಶ್ರೀಮಂತರೂ ಯಾರೂ ಇಲ್ಲ. ಅವರದು ಕಹಿಯಿಲ್ಲದ ನುಡಿ, ಕಪ್ಪಿಲ್ಲದ ನಡೆ. ಗುಣದಿಂದ ಕೂಡಿದ ಆಚಾರವಂತಿಕೆಯ ಶರಣರ ಹೃದಯ ಕರುಣಾ ಸಾಗರ. ಒಡಲಲ್ಲಿ ಒಲಮೆಯ ದೇವರನ್ನು ನೆಲೆಸಿಕೊಂಡ ಅಂಕಿತದಲ್ಲಿ ಬಚ್ಟಿಟ್ಟುಕೊಂಡು ಸ್ವ ನಾಮಾಂಕಿತಗಳನ್ನೇ ಬಳಸಿದವರು ನಮ್ಮ ಶರಣರು.

ಪಂಪ, ರನ್ನರ ಬಗ್ಗೆ ತಿಳಿಯದವರು, ಕನ್ನಡದ ಆಳ ಜ್ಞಾನವಿಲ್ಲದೆಯೇ ಆಡುಭಾಷೆ ಕನ್ನಡದಲ್ಲಿಯೇ , ತಾಯಿನುಡಿಯಲ್ಲಿ ವಚನ ರಚಿಸಿದವರು. ಅಧ್ಯತ್ಮಾವನ್ನು ತುಂಬಿದವರು ನಮ್ಮ ಶರಣರು. ಅವರು ಬರೆದದ್ದೇ ಅಧ್ಯಾತ್ಮವಯಿತು. ಅಟ್ಟದ ಮೇಲೆ ನಗುತ್ತಿದ್ದ, ಅಟ್ಟದ ಮೇಲೆ ಕುಣಿಯುತ್ತಿದ್ದ ಧರ್ಮವನ್ನು ಮನೆಯ ಅಂಗಳಕ್ಕೆ ತಂದವರು. ಅಂತರಂಗದಲ್ಲಿ ಯಾರಿಗೂ ಕಾಣಬಾರದೆಂದು ಅವಿತುಕೊಂಡ ದೇವರನ್ನು ಅಂಗೈಕ್ಕೆ ತಂದು ಕೊಟ್ಟವರು. ಶರಣರು ಸ್ತ್ರೀ ಸಮಾನತೆಯ ಆಂದೋಲನಕ್ಕೆ ಕಹಳೆ ಊದಿದವರು. ಮಹೋನ್ನತ ಸಾಧನೆಗೆ ಮುನ್ನುಡಿ ಬರೆದವರು. ಸ್ತ್ರೀ ಸಮಾನತೆಗಾಗಿಯೇ ವಚನಾಂದೋಲನದ ನೇತೃತ್ವ ವಹಿಸಿದ್ದ ಬಸವಣ್ಣನವರು ಸಹ ಮನೆ ಬಿಟ್ಟು ಬಂದವರು.
ಕಲ್ಯಾಣದ ಕ್ರಾಂತಿಯಲ್ಲಿ ನೆನಪಿಟ್ಟುಕೊಳ್ಳಬೇಕಾದ ಎರಡು ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಒಬ್ಬರು ಅಕ್ಕಮಹಾದೇವಿ. ಇನ್ನೊಬ್ಬರು ಬೋಂತಾದೇವಿ.

ನಮಗೆ ಅರ್ಥಮನೆ (ಸಂಪತ್ತಿನ) ಬೇಡ, ನಮಗೆ ಗುರುಮನೆ (ಅರಿವಿನ) ಬೇಕು ಎಂದು ಸಿರಿವಂತಿಕೆಯ ರಾಜಾಶ್ರಯವನ್ನು ತೊರೆದು ಕಾಯಕ ಸಿದ್ಧಾಂತವನ್ನು ಒಪ್ಪಿಕೊಂಡು ಕಲ್ಯಾಣಕ್ಕೆ ಬಂದವರು ಈ ಶರಣೆಯರು. ಬೋಂತಾದೇವಿಯ ಮೂಲ ಹೆಸರು ನಿಜದೇವಿ. ಬೋಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ತೊಟ್ಟವರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡಗುತ್ತಿದ್ದ ವೃದ್ಧೆಗೆ ತಾನುಟ್ಟ ಬಿಚ್ಚಿಕೊಟ್ಟು ಬಡಜನರ ಸೇವೆಯಲ್ಲಿ ಕಾರ್ಯತತ್ಪರರಾದವರು. ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯೆನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತ ಉಳಿದುಕೊಂಡ ಇವರನ್ನು ದಿವ್ಯಜ್ಞಾನಿಯಾದ ಅಲ್ಲಮರು ಗುರಿತಿಸುತ್ತಾರೆ. ಬಿಡಾಡಿ ಅಂಕಿತನಾಮದಲ್ಲಿ ಇವರು ರಚಿಸಿದ ಐದು ವಚನಗಳು ಮಾತ್ರ ಲಭ್ಯವಿದ್ದು, ಏಕದೇವೋಪಾಸನೆ ಇವರ ವಚನಗಳ ಅಂತರಂಗ. ಅಂತರ‍್ಗಂಗೆ.

ಅರಿವೆ ಬಿಡಾಡಿ, ಅರಿಯದೆ ಬಿಡಾಡಿ
ಮರವೆ ಬಿಡಾಡಿ, ಮರೆಯದೆ ಬಿಡಾಡಿ
ಅರಿತವರು ಕುರಿಹಿಲ್ಲದಾತ ನೀನೆ ಬಿಡಾಡಿ

ಪರಮಾತ್ಮನು ಯಾವ ನಿರ್ಭಂಧಕ್ಕೊಳಗಾಗದ ಸರ್ವತಂತ್ರ ಸ್ವತಂತ್ರ ಎಂಬಂರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದು ಆತನ ಅನಂತತೆ, ಸರ್ವಂತರ್ಯಾಮಿತ್ವನ್ನು ತಮ್ಮ ವಚನಗಳಲ್ಲಿ ವರ್ಣಿಸಿದ್ದಾರೆ.

ಊರ ಒಳಗಣ ಬಯಲು, ಊರ ಹೊರಗಣ
ಬಯಲೆಂದುಂಟೇ?
ಊರೊಳಗೆ ಬ್ರಾಹ್ಮಣ ಬಯಲು, ಊರ
ಹೊರೆಗೆ ಹೊಲೆ ಬಯಲುಂಟೆ?
ಎಲ್ಲಿ ನೋಡಿದೊಡೆ ಬಯಲೊಂದೆ
ಬಿತ್ತಿಯಿಂದ ಹೊರ ಹೊಳಗೆಂಬ ನಾಮವೈಸೆ
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೇ ಬಿಡಾಡಿ.

ಮನುಷ್ಯ ತನ್ನ ಸ್ವಾರ್ಥತನದಿಂದ ಹಲವು ಕುಲ,ಗೋತ್ರ, ಜಾತಿಗಳನ್ನು ಸೃಷ್ಟಿ ಮಾಡಿದ್ದಾನೆ. ಎಲ್ಲರಿಗೂ ಒಂದೇ ಬಯಲು ಇರುವಂತೆ ಎಲ್ಲರಿಗೂ ಒಂದೇ ಕುಲ. ಊರ ಹೊರಗಿನ ಗಾಳಿ, ಊರ ಒಳಗಿನ ಗಾಳಿ ಬೇರೆ ಇರದಂತೆ ಎಲ್ಲಡೆಯೂ ಆತನ ವಾಸಸ್ಥಾನ ಎಂದು ಹೇಳುವ ಬೋಂತಾದೇವಿ, ಮಾನವರ ಮರ್ಧಯೆ ಅಡ್ಡಗೋಡೆ ಕಟ್ಟಿ ಓಲಗೆ-ಹೊರಗೆ ಎಂದು ಹೆಸರುಕೊಡುವುದುಂಟೇ? ಎಂದು ಪ್ರಶ್ನಿಸುವ ಮೂಲಕ ವರ್ಣ, ವರ್ಗ, ಜಾತಿ ಮತ್ತು ಉಪಜಾತಿಗಳಿಂದ ಕೂಡಿದ ಶ್ರೇಣಿಕೃತ ಸಮಾಜದ ಅತಾರ್ಕಿಕತೆಯ ಮೇಲೆ ಬೆಳಕು ಚೆಲ್ಲುತ್ತಾರೆ.
ಅದ್ಯಾತ್ಮದ ತುತ್ತ ತುದಿಯನ್ನು ಮುಟ್ಟಿದ ಬೋಂತಾದೇವಿಯ ಮನಸ್ಸು ಸಮತಾಭಾವದಿಂದ ಹಾಗೂ ಸಮಾಜ ಕಾಳಜಿಯಿಂದ ಕೂಡಿದ್ದಾಗಿದೆ.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

10 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420