ವಾಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ಅಧಿಕಾರಕ್ಕೇರಿದ್ದು ಪ್ರಜೆಗಳ ಹೋರಾಟದ ದನಿಯೇ ಹೂತು ಹೋಗಿದೆ. ಅನ್ಯಾಯದ ವಿರುದ್ಧ ಯಾರು ಏನೇ ಪ್ರಶ್ನೆ ಮಾಡಿದರೂ ನಗಣ್ಯವಾಗುತ್ತಿದೆ ಎಂದು ಬರಹಗಾರ, ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಕಳವಳ ವ್ಯಕ್ತಪಡಿಸಿದರು.
ಕೊಲ್ಲೂರು ಗ್ರಾಮದ ಐತಿಹಾಸಿಕ ಕೋಟೆ ಪರಿಸರದ ಭೀಮಾನದಿ ದಡದಲ್ಲಿ ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ “ಮೌನ ಸಾಕು ಮಾತಾಡು ಭಾರತ” ಶಿರ್ಷಿಕೆಯಡಿಯ ಬಯಲು ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಜನಪರ ಮುಖವಾಡದ ಕೋಮುವಾದಿ ಸರ್ಕಾರ ದೇಶದಲ್ಲಿ ಪ್ರಗತಿಪರ ಲೇಖಕರ ಹತ್ಯೆಗಳಾಗುತ್ತಿವೆ. ಜಾತಿ, ಧರ್ಮ, ಭಾಷೆಗಳ ವಿಷ ಬೀಜವನ್ನು ಬಿತ್ತಿ ಜನರ ಐಕ್ಯತೆಯನ್ನು ಮುರಿಯಲಾಗುತ್ತಿದೆ. ಚಳುವಳಿಗಳನ್ನೇ ಸಹಿಸದ ಈ ವ್ಯವಸ್ಥೆ ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಜನ ವಿರೋಧಿ ನೀತಿಗಳ ವಿರುದ್ಧ ಮಾತನಾಡುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತಿದೆ.
ಆಂತರಿಕ ಧಾರ್ಮಿಕ ಭಯೋತ್ಪಾದನೆ ಚೈತನ್ಯ ಪಡೆದುಕೊಂಡಿದೆ ಎಂದು ಆಪಾದಿಸಿದ ಹಿಂದಿನಕೇರಿ, ಮುಂದಿನ ಪೀಳಿಗೆಯ ನೆಮ್ಮದಿಗಾಗಿ ಹೋರಾಟಗಾರರು ತಮ್ಮ ದನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಬರಹಗಾರರು ಸತ್ಯವನ್ನು ಬಯಲಿಗೆಳೆಯಲು ಹಿಂದೇಟು ಹಾಕಬಾರದು. ಸಾಹಿತ್ಯ ಆಳುವ ವರ್ಗದ ವರ್ಣನೆಗೆ ನಿಲ್ಲಬಾರದು. ಬಂಡಾಯದ ಸಾಹಿತ್ಯ ಮತ್ತಷ್ಟು ಪ್ರಬಲವಾಗಿ ಜನರ ಎದೆತಾಕಬೇಕು ಎಂದರು.
ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿ, ಜನಸಾಮನ್ಯರ ಬದುಕು ಬೀದಿಗೆ ತರುವ ಕಾಯ್ದೆಗಳು ಜಾರಿಗೆ ಬರುತ್ತಿದ್ದರೂ ಮಾತನಾಡದಂತಹ ಸ್ಥಿತಿಗೆ ಭಾರತೀಯರು ತಲುಪಿರುವುದು ವಿಷದನಿಯ. ಈ ಕುರಿತು ಸಾಹಿತಿಗಳು ಬಹಿರಂಗವಾಗಿ ಮಾತನಡುವ ಧೈರ್ಯ ಬೆಳೆಸಿಕೊಳ್ಳಬೇಕು. ಅಮೂಲಕ ಜನತೆಯಲ್ಲಿ ಹೋರಾಟದ ಮನೋಭಾವ ಸೃಷ್ಠಿಸಬೇಕು ಎಂದು ಹೇಳಿದರು.
ಸಂಚಲನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ದಯಾನಂದ ಖಜೂರಿ, ಕನ್ನಡ ಸಾಹಿತ್ಯ ಪರಿಷತ್ ವಾಡಿ ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಬರಹಗಾರರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ಮಲ್ಲೇಶ ನಾಟೀಕಾರ, ರವಿಕುಮಾರ ಕೋಳಕೂರ, ರವಿಕುಮಾರ ಮುತ್ತಗಿ, ವಿಕ್ರಮ ನಿಂಬರ್ಗಾ, ಮಲಿಕ್ಪಾಶಾ ಮೌಜನ್, ತುಕಾರಾಮ ರಾಠೋಡ ಸೇರಿದಂತೆ ಇತರರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…