ಬಿಜೆಪಿ ಮಹಾನಗರ ಎಸ್ ಸಿ ಮೋರ್ಚಾ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಎಸ್ ಸಿ ಮೋರ್ಚಾ ನೇತೃತ್ವದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು “ರಾಷ್ಟ್ರೀಯ ಸಂವಿಧಾನ ದಿವಸ್ ” ಕಾರ್ಯಕ್ರಮಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ ರವರು ಉದ್ಘಾಟಿಸಿದರು.

ನಂತರ ಮಾತನಾಡುತ್ತಾ ಭಾರತೀಯ ಸಂವಿಧಾನವು ಯಾವುದೇ ದೇಶದ ಲೀಖಿತ ಸಂವಿಧಾನಕ್ಕಿಂತ ಅತ್ಯಂತ ಧೀರ್ಘವಾದ ಸಂವಿಧಾನವಾಗಿದೆ, ಮತ್ತು ಭಾರತೀಯ ಸಂವಿಧಾನದ ಮೂಲಕ ಬಾಬಾಸಾಹೇಬ್ ಡಾ.ಬಿ ಆರ್ ಅಂಬೇಡ್ಕರ ರವರು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌರವ ,ಘನತೆ ಮತ್ತು ಸಮಾನತೆಯ ಸ್ವಾವಲಂಬಿಯ ಬದುಕನ್ನು ಕಟ್ಟಿಕೊಟ್ಟಿದ್ದಾರೆ, ಡಾ.ಬಿ ಆರ್ ಅಂಬೇಡ್ಕರ ರವರನ್ನು ನಾವೂ ಎಷ್ಟು ಸ್ಮರಿಸಿದರೂ ಕೂಡ ಕಡಿಮೆ ಅವರ ತ್ಯಾಗದಿಂದ ನಾವೂ ನೀವೆಲ್ಲರೂ ಪುನೀತರಾಗಿದ್ದೇವೆ ಮತ್ತು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಸಂವಿಧಾನವನ್ನು ರಾಷ್ಟ್ರೀಯ ಸಂವಿಧಾನ ದಿವಸ್ ಎಂದು ಆಚರಣೆ ಮಾಡುವ ಮೂಲಕ ಸಂವಿಧಾನದ ಹಿರಿಮೆಯನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿದ್ದಾರೆ ಎಂದು ಹೇಳಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಕೆ ಎಸ್ ಬಂಧು ರವರು ಮಾತನಾಡಿ ಈ ದೇಶದ ಸಂವಿಧಾನವು ಪ್ರತಿಯೊಬ್ಬನ ಮೂಲ ಧರ್ಮವಾಗಿದೆ, ಎಲ್ಲ ವರ್ಗಗಳ ಧರ್ಮಗ್ರಂಥವು ಸಂವಿಧಾನದ ಆಶಯದಲ್ಲಿ ಒಳಗೊಂಡಿದೆ, ಸಂವಿಧಾನವು ನಮ್ಮ ಬದುಕಿನ ನರನಾಡಿಯಾಗಿದೆ, ಶೋಷಿತ ವರ್ಗವನ್ನು ಸಮಾನತೆಯ ಹಕ್ಕನ್ನು ನೀಡಿದೆ .ಡಾ.ಬಿ ಆರ್ ಅಂಬೇಡ್ಕರ ರವರು ಈ ದೇಶಕ್ಕೆ ಮಹಾನ ನಾಯಕ್ ಎಂದು ಸ್ವವಿಸ್ತಾರವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದಾಜೀ ಪಾಟೀಲ, ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ ,ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ದೇವಿಂದ್ರ ಸಿನ್ನೂರ, ಪ್ರಧಾನ ಕಾರ್ಯದರ್ಶಿ ದಿನೇಶ ದೊಡ್ಡಮನಿ, ಮಹಾನಗರ ಪಾಲಿಕೆ ಸದಸ್ಯ ವಿಶಾಲ ಧರ್ಗಿ, ರಾಜ್ಯ ನಾಯಕ ಧರ್ಮಣ್ಣಾ ಇಟಗಾ, ಮಹಾದೇವ ಬೆಳಮಗಿ, ಮಹೇಶ ರೆಡ್ಡಿ, ವಿಜಯಲಕ್ಷ್ಮಿ ಗೊಬ್ಬುರ ,ಲಕ್ಷ್ಮಣ ಮೂಲಭಾರತಿ, ಹಣಮಂತ ವಚ್ಚಾ,ವಿಕಾಸ ಕರಣಿಕ, ಪ್ರಲ್ಹಾದ ಹಡಗಿಲ,ರಾಣೋಜಿ ದೊಡ್ಡಮನಿ, ಮಲ್ಲಿಕಾರ್ಜುನ ಗಾಯಕವಾಡ, ಶ್ರೀಧರ ಉಪಾಧ್ಯಯ, ಗುಂಡು ಸೊಂಗಾರೆ,ಆನಂದರಾವ್ ಚಿಂಚೋಳಿ,ರಾಜಾರಾಮ ಮಾತೋಳ್ಳಿ, ಗೌತಮ ಪುಟಗಿ,ದತ್ತು ಡೋಲಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

5 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

5 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

5 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

5 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420