ಆಳಂದ: ಜಿಡಗಾ ನವಕಲ್ಯಾಣ ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಮಠದ ಪೀಠಾಧಿಪತಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರ ೩೭ನೇ ಜನ್ಮದಿನಾಚರಣೆ ಅಂಗವಾಗಿ ಸಂಜೆ ಆಯೋಜಿಸಿದ್ದ ಶ್ರೀಗಳಿಗೆ ಗುರುವಂದನ ಹಾಗೂ ಸ್ವರಸಂಗೀತ ಝೇಂಕಾರದಲ್ಲಿ ನಾಡಿನ ಸಾವಿರಾರು ಭಕ್ತರು, ಗಣ್ಯರು, ಮಠಾಧೀಶರು ಪಾಲ್ಗೊಂಡು ಬೃಹತ್ ಸಮಾರಂಭಕ್ಕೆ ಸಾಕ್ಷಿಯಾದರು.
ಸುಮಾರು ಒಂದು ತಿಂಗಳಿಂದಲೂ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿದ್ದ ಶ್ರೀಮಠದ ಭಕ್ತ ಸಮೂಹ ಗುರುವಾರ ಗುರುವಿನ ೩೭ನೇ ಜನ್ಮೋತ್ಸವ ಅದ್ಧೂರಿಯಾಗಿ ಆಚರಿಸುವ ಮೂಲಕ ಗುರುವಂದನೆ ಸಲ್ಲಿಸಿ ಸಂಭ್ರಮಿಸಿದರು.
ಅಲ್ಲದೆ, ಚಿತ್ರನಟ ದಿ| ಪುನಿತರಾಜಕುಮಾರ ಅವರಿಗೆ ಮರಣೋತ್ತರ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪುನಿತ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರು ಲೈವಮೂಲಕ ಸ್ವೀಕರಿಸಿದರು. ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಬರಲಾಗಿಲ್ಲ. ಅನ್ಯತಾ ಭಾವಿಸದೆ. ಶ್ರೀಮಠದ ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ಪಡೆಯುತ್ತೇನೆ. ಪುನಿತರ ಪತ್ನಿ, ಮಕ್ಕಳ ಸೇರಿ ರಾಜ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಸದಾ ಇರಲಿ ಎಂದು ಅವರು ಆಶೀಸಿದರು.
ಇದೇ ವೇಳೆ ಹಲವು ಕ್ಷೇತ್ರದ ಸಾಧಿಕರಿಗೆ ಪ್ರಶಸ್ತಿ ನೀಡಿ ಶ್ರೀಗಳಿಂದ ಗೌರವಿಸಲಾಯಿತು. ಸಮಾರಂಭದ ಆಕರ್ಶಕನಾಗಿದ್ದ ಗಾನಗಾರುಡಿಗ ವಿಜಯಪ್ರಕಾಶ ಅವರ ಕಲಾ ತಂಡವು ಗುರುಮುರುಘರಾಜೇಂದ್ರ ಹಾಡಿನ ರಚನೆ, ಕಾಣದ ಗುರು ಸಾರ್ವಭೋಮ ಗುರು ಸಿದ್ಧರಾಮ, ಗೊಂಬೆ ಹೇಳತೈತ್ತಿ ನೀನೇ ರಾಜಕುಮಾರ, ಓಂ ನಮ: ಶಿವಾಯ ಹೀಗೆ ಹಲವು ಭಕ್ತಿಯ ಹಾಡಿಗೆ ಹಾಡಿಗೆ ಜನಸ್ತೂಮವೇ ತಲೆದೂಗಿ ಮುಗಿಲು ಮುಟ್ಟುವಂತೆ ಕರತಾಡನಗಳ ಮೊಳಗಿಸಿದರು.
ನಿರಗುಡಿಯ ಮಲ್ಲಯ್ಯಾ ಮುತ್ತ್ಯಾ, ಮಾದನಹಿಪ್ಪರಗಾ ಶ್ರೀ, ಚಿಣಮಗಿರಿ ಶ್ರೀ ಸೇರಿದಂತೆ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ. ಪಾಟೀಲ, ಶಾಸಕ ಡಾ| ಅಜಯಸಿಂಗ್, ಮಾಜಿ ಎಂಎಲ್ಸಿ ಅಲಂಪ್ರಭು ಪಾಟೀಲ ಸೇರಿದಂತೆ ಅಪಾರಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕಲಬುರಗಿ: ಬಸವೇಶ್ವರ ಸೇವಾ ಸಮಜಾ ಟ್ರಸ್ಟ್ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಅನುಭವ ಮಂಟಪದಲ್ಲಿ ರವಿವಾರ ಬೆಳೆಗ್ಗೆ 10 ಗಂಟೆಗೆ…
ಕಲಬುರಗಿ: ಭೋವಿ ಅಭಿವೃದ್ಧಿ ನಿಗಮ ಕಲಬುರಗಿ ಶಾಖೆಯನ್ನು ಪ್ರತ್ಯೇಕವಾಗಿ ನಿರ್ವಹಿಸುವ ಮತ್ತು ಪ್ರತ್ಯೇಕವಾಗಿ ಜಿಲ್ಲಾ ವ್ಯವಸ್ಥಾಪಕರನ್ನು ನೇಮಕ ಮಾಡಬೇಕೆಂದು ಕ್ರಾಂತಿವೀರ…
ಕಲಬುರಗಿ; ನಗರದಲ್ಲಿ ಕಳೆದ ಜೂನ್ 28 ರಂದು 14 ವರ್ಷದ ಅಪ್ರಾಪ್ತ ಬಾಲಕಿ 8 ತಿಂಗಳ ಗರ್ಭಿನಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…
ಸುರಪುರ: ಚಿತ್ರದುರ್ಗದಲ್ಲಿ ನಡೆಸಲಾದ 2022-23ನೇ ಸಾಲಿನ ವಚನ ಕಮ್ಮಟ ಪರೀಕ್ಷೆಯಲ್ಲಿ ಪಟ್ಟಣದ ಸರಕಾರಿ ಕನ್ಯಾ ಮಾಡದರಿಯ ಹಿರಿಯ ಪ್ರಾಥಮಿಕ ಶಾಲೆ…
ಸುರಪುರ: ತಾಲೂಕ ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನದಲ್ಲಿನ ಸಹಕಾರಿ ಸಂಘದ ಕಚೇರಿಯಲ್ಲಿ…
ಸುರಪುರ: ರಾಜಕೀಯಕ್ಕಾಗಿ ಇಂದು ಕೆಲವು ಮಠಾಧೀಶರು ಮುಖ್ಯಮಂತ್ರಿ ಹುದ್ದೆ ತಮ್ಮ ಜಾತಿ ಅಥವಾ ತಮ್ಮ ಸಮುದಾಯದವರಿಗೆ ನೀಡುವಂತೆ ಬಹಿರಂಗವಾಗಿ ಹೇಳಿಕೆ…