ಬಿಸಿ ಬಿಸಿ ಸುದ್ದಿ

ಅಮ್ಮಾ ಕ್ಯಾಂಟೀನ್ ಸೇವೆ ಶ್ಲಾಘನೀಯವಾದದ್ದು: ಶ್ರೀಮತಿ ಲೀಲಾ ಕಾರಟಗ

ಶಹಾಪುರ: ಮಣಿಕಂಠನ್ ಚಾರಿಟೇಬಲ್ ಟ್ರಸ್ಟ್ ಶಹಾಪುರ ವತಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಅಮ್ಮ ಕ್ಯಾಂಟೀನ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಯುವ ಮುಖಂಡರಾದ ಅಮರೇಶಗೌಡ ದರ್ಶನಾಪುರ ಉದ್ಘಾಟಿಸಿದರು.

ಗುರು ಮಣಿಕಂಠನ್ ಅವರ ತಾಯಿಯಾದ ಲಿಂಗೈಕ್ಯ ಶ್ರೀಮತಿ ಲಕ್ಷ್ಮೀ ದೇವಿಯವರ ೩೫ ನೇ ಸ್ಮರಣೋತ್ಸವದ ಅಂಗವಾಗಿ ಬಡವರಿಗೆ, ದುರ್ಬಲ ವರ್ಗದವರಿಗೆ, ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ತಾಯಿ ನೆನಪಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮ್ಮ ಕ್ಯಾಂಟೀನಿನ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಉಪನ್ಯಾಸಕಿ ಲೀಲಾ ಕಾರಟಗಿ ಹೇಳಿದರು.

ಕೇವಲ ೧೦ ರೂಪಾಯಿಯಲ್ಲಿ ಊಟ ಮತ್ತು ಉಪಹಾರ ರುಚಿಕಟ್ಟಾಗಿ ಹಾಗೂ ಸ್ವಚ್ಛತೆಯಿಂದ ಅಮ್ಮಾ ಕ್ಯಾಂಟೀನ್ ಸೇವೆ ಮಾಡುತ್ತಾ ಬಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಕ್ತದಾನ, ಅನ್ನದಾನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ವೇದಿಕೆ ಮೇಲೆ ಸೂಗುರೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು ಹಾಗೂ ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀಗಳು ಜೊತೆಗಿದ್ದರು.ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಡಾ ಚಂದ್ರಶೇಖರ ಸುಬೇದಾರ ಬಸನಗೌಡ ಮರ್ಕಲ್ ಅವು ಇತರರು ಉಪಸ್ಥಿತರಿದ್ದರು.

ಈ ಸಮಾರಂಭದ ಘನತೆ ಅಧ್ಯಕ್ಷತೆಯನ್ನು ಮಣಿಕಂಠನ್ ಚಾರಿಟೆಬಲ್ ಟ್ರಸ್ಟಿನ ಉಪಾಧ್ಯಕ್ಷರಾದ ರವಿ ಕಿರಣ್ ಅವರು ವಹಿಸಿಕೊಂಡಿದ್ದರು ಶ್ರೀಮತಿ ಕವಿತಾ ಪತ್ತಾರ ಪ್ರಾರ್ಥಿಸಿದರು ಗುರು ಮಣಿಕ೦ಟನ ಪ್ರಾಸ್ತಾವಿಕವಾಗಿ ಮಾತನಾಡಿದರು ಮಲ್ಲಿಕಾರ್ಜುನ್ ಚಾಮನಾಳ ಸ್ವಾಗತಿಸಿದರು ಬಸವರಾಜ ಸಿನ್ನೂರ ನಿರೂಪಿಸಿ ವಂದಿಸಿದರು.

ಉತ್ತರ ಕರ್ನಾಟಕದ ಪ್ರಖ್ಯಾತ ಕಲಾವಿದ ಸರಿಗಮಪ ಜೀ ಕನ್ನಡದ ವಿಜೇತ ಮೈಬೂಸಾಬ್ ಹಾಗೂ ಉತ್ತರ ಕರ್ನಾಟಕದ ಗಾಯಕರಾದ ಬಾಷಾ ಕಿನಾಳ ಮಲೆನಾಡಿನ ಗಾಯಕಿ ಶ್ರೀಮತಿ ಶರಾವತಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.

emedialine

Recent Posts

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

9 mins ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

16 mins ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

18 mins ago

ಕಲಬುರಗಿ ಹಾಲಿಗೆ ಮಹಾರಾಷ್ಟ್ರ ದಲ್ಲಿ ಬೇಡಿಕೆ: ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ

ಕಲಬುರಗಿ: ಕಲಬುರಗಿ-ಯಾದಗಿರಿ-ಬೀದರ್‌ ಸಹಕಾರಿ ಹಾಲು ಒಕ್ಕೂಟದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಇದಕ್ಕೆ ಭಾರಿ ಜನಮನ್ನಣೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಹಾಗೂ…

36 mins ago

ಆರೋಗ್ಯ ಮೇಳ: ಉಚಿತ ಆರೋಗ್ಯ ತಪಾಸಣೆ ಮಾಡಿಕೊಂಡ 1,227 ಜನ

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ…

39 mins ago

ಕಾಯಕದಲ್ಲಿನ ಮೇಲು ಕೀಳುಲುಗಳನ್ನು ಅಲ್ಲಗಳೆದವರು ಬಸವಾದಿ ಶರಣರು: ಪ್ರೊ. ಆರತಿ ಕಡಗoಚಿ

ಚಿಂಚೋಳಿ: 12 ನೆಯ ಶತಮಾನದ ಬಸವಾದಿ ಶರಣರು ಕಾಯಕದಲ್ಲಿನ ಅಸಮಾನತೆಯನ್ನು ತೊಡೆದು ಹಾಕಿ, ಸರ್ವ ಕಾಯಕ ವರ್ಗದವರಿಗೂ ಸಮಾನವಾದ ಗೌರವವನ್ನು…

44 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420