ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘ ನೀಡುವ 2015 ರಲ್ಲಿಯೇ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ, ಕವಿ, ಕಥೆಗಾರ ಬಿ.ಎಂ.ಬಶೀರ್ರ ‘ಅಮ್ಮ ಹಚ್ಚಿದ ಒಲೆ’ ಕವನ ಸಂಕಲನಕ್ಕೆ ಮುಸ್ಲಿಮ್ ಸಂಘ ಲೇಖಕರು ಪ್ರಶಸ್ತಿಯನ್ನು ನೀಡಿ ಬಿ.ಎಂ.ಬಶೀರರಿಗೆ ನೀಡಿ ಗೌರವಿಸಿ ಬಹಳ ದಿನವಾಯಿತು.
ಈ ಬಿ.ಎಂ.ಬಶೀರರು ‘ವಾರ್ತಾಭಾರತಿ’ ದೈನಿಕದಲ್ಲಿ ಸುದ್ದಿ ಸಂಪಾದಕರಾಗಿ ಸುಮಾರು 30 ವರ್ಷಗಳಿಗೂ ಹೆಚ್ಚು ಅವಧಿಯಿಂದ ಪತ್ರಕರ್ತರಾಗಿ ಗುರುತಿಸಿಕೊಂಡವರು. ಇದಕ್ಕೂ ಮೊದಲು ‘ಜನ ವಾಹಿನಿ’ಯಲ್ಲಿ ಪತ್ರಕರ್ತ, ಮುಖ್ಯವಾಗಿ ಕವಿ, ಲೇಖಕ, ಜನಸ್ಪಂದನದ ಬರಹಗಾರರಾಗಿಯೂ ಹೆಸರಾದವರು.
ಇಂತಹ ಬಿ.ಎಂ.ಬಶೀರರು ಪ್ರವಾದಿಯ ಕನಸು(ಕವನ ಸಂಕಲನ), ಬಾಳೇಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲೇ ಆಕಾಶ (ಹನಿ ಹನಿ ಕಥೆಗಳು), ಬಾಡೂಟದ ಜೊತೆ ಗಾಂಧೀ ಜಯಂತಿ (ಅಂಕಣ ಬರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ -ಸೂಫಿಯ ಕಣ್ಣಲ್ಲಿ ಹನಿಗಳು (ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ (ಕವನ ಸಂಕಲನ) ಹಾಗೂ ಪರುಷಮಣಿ -ಬಿ.ಎಂ. ರಶೀದ್ರ ಸಮಗ್ರ ಬರಹಗಳು (ಸಂಪಾದನೆ). ಇವು ಬಿ.ಎಂ.ಬಶೀರ್ರ ಪ್ರಕಟಿತ ಕೃತಿಗಳು. ಈ ಬರಹಗಳ ಬಿ.ಎಂ.ಬಶೀರ್ ಅವರು ಹೆಸರಾದವರು.
ತಮ್ಮ ಸಾಹಿತ್ಯ ಸೇವೆಗೆ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರಿನ ಚದುರಂಗ ಪ್ರತಿಷ್ಠಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ ಹಾಗೂ ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಬಿ.ಎಂ.ಬಶೀರ್ ‘ಇರುವೆ ಪ್ರಕಾಶನ’ದ ಸ್ಥಾಪಕರೂ ಆದವರು. ಇದೆಲಕ್ಕೂ ಮುಖ್ಯವಾಗಿ ‘ಜಾತಿ-ಮತ-ಪಂತ’ವರಿಯದ ‘ಮಾನವ ಪೇಮಿ’ ಈ ಬಿ.ಎಂ.ಬಶೀರ್ ಅಂತ ಹೇಳಿ ನನ್ನ ಮಾತು ಮುಗಿಸುತ್ತೇನೆ..!
ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಬಿ.ಎಂ.ಬಶೀರ್ ರ ಹುಟ್ಟಿದ ದಿನ ಜೂನ್ 20. ಇಂದು ಅವರು ಹುಟ್ಟಿದ ಹಬ್ಬ. ಅದಕ್ಕಾಗಿ ಈ ಪುಟ್ಟ ಲೇಖನವು ಒಂದು ಪುಟ್ಟ ಕೊಡುಗೆಯಾಗಿ ನೀಡುತ್ತಿದ್ದೇನೆ..!ಈ ನನ್ನಿಂದ ಈ ಪುಟ್ಟ ಕೊಡುಗೆ ಮಾತ್ರ ಕೊಡಲು ಸಾಧ್ಯ. ಇಗೋ ಬಿ.ಎಂ.ಬಶೀರ್ ಎಂಬ ಅದ್ವಿತೀಯ ಲೇಖಕ ಈ ಕಾಣಿಕೆಯನ್ನು ಸ್ವೀಕರಿಸುತ್ತೀರಿ ಎಂದು ನಂಬಿದ್ದೇನೆ..!
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…