ಬಿಸಿ ಬಿಸಿ ಸುದ್ದಿ

ಗೋಪಾಳ ಕಾವಲಿ ಮೂಲಕ ಆಷಾಡ ಉತ್ಸವಕ್ಕೆ ಸಂಭ್ರಮದ ತೆರೆ

ಸುರಪುರ: ಕಳೆದ ನಾಲ್ಕುದಿನಗಳಿಂದ ಸುಪ್ರಸಿದ್ದ ರುಕ್ಮಾಯಿ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿದ ಆಷಾಡ ಉತ್ಸವಕ್ಕೆ ಸೋಮವಾರ ರಂಗು ಪಡೆದುಕೊಂಡಿತು. ಉತ್ಸವದ ಮುಖ್ಯ ಆಕರ್ಷಣೆಯಾದ ಗೋಪಾಳ ಕಾವಲಿ ವೀಕ್ಷಸಲು ನೂರಾರು ಭಕ್ತರು ಮತ್ತು ಮಕ್ಕಳು ನೆರೆದಿದ್ದರು.

ಬೆಳ್ಳಿಗ್ಗೆ ವಿಶೇಷ ಪೊಜೆ ನಡೆದ ನಂತರ ಶ್ರೀ ರುಕ್ಮಾಯಿ ಪಾಂಡುರಂಗ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿ ಯಲ್ಲಿ ಹೊತ್ತು ನಗರದ ಪ್ರದಕ್ಷಿಣೆ ಮಾಡಿದರು ಮುಖ್ಯ ಅರ್ಚಕ ಗುರುರಾಜ ಪಾಲ್ಮೂರ ಪಲ್ಲಕ್ಕಿಯ ಪೂಜಾ ಕಂಕೈರ್ಯ ನೇರವೆರಿಸಿದರು. ಪ್ರತಿ ಮನೆ ಮುಂದೆ ಮಹಿಳೆಯರು ಉತ್ಸವ ಮೂರ್ತಿಗೆ ಕಾಯಿ,ಕರ್ಪೂರ ಅರ್ಪಿಸಿ ಭಕ್ತಿ ಸರ್ಮಪಿಸಿದರು. ಮೆರವಣಿಗೆಯೂದ್ದಕ್ಕೂ ಭಜನೆ ಆಕರ್ಷಕವಾಗಿತ್ತು. ಭಜನೆಗೆ ತಕ್ಕಂತೆ ಚಿಣ್ಣರ ಕುಣಿತವು ನೋಡುಗರ ಗಮನ ಸೆಳೆದವು ಹರೇ ವಿಠಲನ ಮಂತ್ರಘೋಷ ಮುಗಿಲು ಮುಟ್ಟಿತ್ತು.

ಪಲ್ಲಕ್ಕಿ ಉತ್ಸವ ಮತ್ತೆ ದೇವಸ್ಥಾನಕ್ಕೆ ಬಂದ ನಂತರ ವಿಶೇಷ ಮಂಗಳಾರತಿ ನೆರವೇರಿಸಲಾಯಿತು. ಬಣ್ಣಗಳಿಂದ ಚಿತ್ತರಿಸಿದ ಮಡಿಕೆಯನ್ನು ಪೂಜಿಸಿ ದೇವಸ್ಥಾನದ ನವರಂಗದಲ್ಲಿ ಇಡಲಾಯಿತು. ಮಹಿಳೆಯರು ಆಗಮಿಸಿ ಮೊಸರು ಮಡಿಕೆಯಲ್ಲಿ ಭಕ್ತಿಯಿಂದ ದೇವರಿಗೆ ಮೊಸರು ಹಾಕುವ ದೃಷ್ಯ ಕಂಡುಬಂತು. ನಂತರ ಮಡಿಕೆನ್ನು ದೇವಸ್ಥಾನದ ಮುಂದುಗಡೆ ಎತ್ತರದ ಸ್ಥಳದಲ್ಲಿ ಎರಡು ಕಡೆಯಿಂದ ಹಗ್ಗಬಿಗಿದು ಹಿಡಿಯಲಾಯಿತು ಗೋಪಾಳ ಕಾವಲಿಗೆ ಮುಂಚೆಯೆ ಯುವಕರು ರಂಗಿನಾಟ ಆಡುತ್ತಿದ್ದರು. ಸೂಮಾರು ಅರ್ಧಗಂಟೆಗಳ ಕಾಲ ಯುವಕರು ಒಬ್ಬರ ಮೇಲೂಬ್ಬರ ಹತ್ತಿ ಮಡಿಕೆ ಒಡೆಯಲು ಪ್ರಯತ್ನಿಸಿ ಮಡಿಕೆಯನ್ನು ಒಡೆಯುವ ದೃಷ್ಯ ನೇರೆದಿದ್ದ ಭಕ್ತಾದಿಗಳ ಮನಸೋರ್ಯಗೊಂಡಿತು.
ನಂತರ ದೇವರ ಉತ್ಸವ ಮೂರ್ತಿಗಳಿ ಪುಷ್ಕರ್ಣೀಯಲ್ಲಿ ಅವಭೃತ ಸ್ನಾನ ಕಾರ್ಯಕ್ರಮಗಳು ಜರುಗಿದವು.

ಶ್ರೀಪಾದಭಟ್ಟ್ ಗಡ್ಡದ್, ತಿಮ್ಮಣ್ಣ ಗುತ್ತೇದಾರ, ಶ್ರೀನಿವಾಸ ದೇವರು, ರಾಘವೇಂದ್ರ ಭಕರಿ, ಶ್ರೀಪಾದ ದೇಶಪಾಂಡೆ, ಶ್ರೀನಿವಾಸ ಪ್ರತಿನಿಧಿ, ನಗರಸಭೆ ಮಾಜಿಸದಸ್ಯ ಪಾರಪ್ಪ ಗುತ್ತೆದಾರ, ರವಿ ಗುತ್ತೆದಾರ, ಪ್ರಕಾಶ ಕುಲ್ಕರ್ಣೀ, ಪ್ರವೀಣ ಕುಲ್ಕರ್ಣಿ, ಸೂರಜ್ ವರ್ಮಾ, ಶ್ರೀನಿವಾಸ ದೇವಡಿ, ಪ್ರಕಾಶ ಕುಲ್ಕರ್ಣಿ, ರಮೇಶ ಕುಲ್ಕರ್ಣಿ, ಕೃಷ್ಣಪಾಟಿಲ್, ಅರುಣ ಜೈನ್, ವಿರೇಶ ಕೋಸ್ಗಿ, ವೆಂಕಟೇಶ ಹುದ್ದಾರ, ಪವನ ವಿಶ್ವಕರ್ಮಾ, ಶ್ರೀಕರ ಐ.ಜಿ, ಮಿಥುನ ಬಾಡಿಹಾಳ, ಕೇಶವಾಚಾರ ಗುಡಿ, ಶಿವುಕುಮಾರ ಬಿರಾದರ್, ವಿಶಾಲ ಮಸ್ಕಿ, ಅವಿನಾಶ ಕುಲ್ಕರ್ಣಿ, ರಾಘವೇಂದ್ರ ಗುತ್ತೆದಾರ, ಸೇರಿದಂತೆ ಇತರರಿದ್ದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

2 hours ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

3 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

3 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

3 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

3 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420