ಕಲಬುರಗಿ : ರಾಜ್ಯದ ಪರಿಶಿಷ್ಟ ಜಾತಿಯ ಪಟಿ ಯಲ್ಲಿರುವ ೧೦೧ ಜಾತಿಗಳ ಪೈಕಿ ೧೯೮೦ ರಲ್ಲಿ ಸಂವಿಧಾನದ ಅನುಚ್ಛೆ ೩೪೧ (೨)ನ್ನು ಉಲ್ಲಂಘಿಸಿ ಸ್ಪರ್ಶ ಜಾತಿಗಳನ್ನು ಸೇರಿಸಿರುವುದು ಅಕ್ಷಮ್ಯ ಇದರಿಂದಾಗಿ ಮೂಲ ಅಶ್ಪೃಶ್ಯ ಜಾತಿಗಳಿಗೆ ಸಾಕಷ್ಟು ನಷ್ಟವಾಗಿದೆ ಆದ್ದರಿಂದ ಅವುಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್ಸಿ ಪಟ್ಟಿಯಲ್ಲಿರುವ ಸ್ಪರ್ಶ ಜಾತಿಗಳಾದ ಬಂಜಾರ್/ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಕೂಡಲೇ ತಗೆದುಹಾಕಲು ಪರಿಶಿಷ್ಟ ಜಾತಿಗಳ ಆಯೋಗ ನಿರ್ದೇಶನ ನೀಡಿ ಸರಕಾರಕ್ಕೆ ಪ್ರಸ್ತಾವ ಹೊರಡಿಸಿದೆ.
ಆದರೂ ಸರಕಾರ ರಾಜಕೀಯ ಒತ್ತಡಕ್ಕೆ ಮಣಿದು ವಿಳಂಬ ಮಾಡುತ್ತಿರುವುದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿದೆ ಸರಕಾರದ ಈ ನೀತಿ ತೀವ್ರವಾಗಿ ಖಂಡಿಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಮಾಜದ ಪ್ರಮುಖ ಬೇಡಿಕೆಗಳಾದ ನಿಜಶರಣ ಬಸವಮೂರ್ತಿ ಮಾದರ ಚನ್ನಯ್ಯನವರ ಜಯಂತಿಯನ್ನು ಸರಕಾರ ಮಾಡಬೇಕು, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಮತ್ತು ಡಾ. ಬಾಬು ಜಗಜೀವನ್ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೆಕವಾಗಿ ಸಾವಿರಕೋಟಿ ಅನುದಾನ ಹೆಚ್ಚಿಸಿ ಹಿಂದಿನಂತೆ ೩.೫ ಲಕ್ಷ ಸಬ್ಸಿಡಿ ಮತ್ತು ೧ ಲಕ್ಷಕ್ಕೆ ನೇರ ಸಾಲಗಳನ್ನು ಹೆಚ್ಚಿಸಿ ಐರಾವತ ಸ್ಕೀಂ ಜಾರಿಗೊಳಿಸಬೇಕೆಂದು ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಜುನಾಥ ಎಸ್, ಮಹೇಶ ಅಗರಖೇಡ, ಚಂದ್ರಕಾಂತ ನಾಟೀಕರ್, ಬಾಬುರಾವ ಸುಂಟಣ, ಕುಮಾರ ಹಳಕಲ್ಲ, ಗಣೇಶ ಚಿಕ್ಕೋಡಿ, ನಂದಕಿಶೋರ ಕಾಂಬಳೆ, ವಿಠ್ಠಲ ವಾಲೀಕಾರ, ಶಿವಾಜಿ ಪಟ್ಟಣ, ಧರ್ಮಣ್ಣ ಪಟ್ಟಣ, ಸುದರ್ಶನ, ನಭಿ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…