ಕಲಬುರಗಿ: ಸರಕಾರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ರೈತ ದಿನಾಚರಣೆ ಸಂದರ್ಭದಲ್ಲಿ ಸಂಸದ ಡಾ. ಉಮೇಶ ಜಾಧವ ಅವರು ರೈತ ಸಮಾಚಾರ ಮಾಸಪತ್ರಿಕೆಯ ಕ್ಯಾಲೆಂಡರ ಮತ್ತು ಒಂದು ಲಕ್ಷ ರೈತರಿಗೆ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲು ರೈತ ಸಮಾಚಾರ ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಕೃಷಿ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ೭೫ ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತ ಸಮಾಚಾರ ಮಾಸಪತ್ರಿಕೆ ಕರ್ನಾಟಕದ ೩೧ ಜಿಲ್ಲೆಯಲ್ಲಿ ಬರುವ ಒಂದು ಲಕ್ಷ ರೈತರಿಗೆ ರೈತ ಸಮಾಚಾರ ಕನ್ನಡ ಮಾಸಪತ್ರಿಕೆ ಒಂದು ವರ್ಷದ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲಾಗುವುದು ಎಂದು ಸಂಪಾದಕರಾದ ಗಿರೀಶಗೌಡ ಇನಾಮದಾರ ಅವರು ತಿಳಿಸಿದರು.
ಆಸಕ್ತ ರೈತ ಬಾಂದವರು ತಮ್ಮ ಮೊಬೈಲ್ ನಂ. ವಿಳಾಸವನ್ನು ಕನ್ನಡ ರೈತ ಸಮಾಚಾರ ಕನ್ನಡ ಮಾಸ ಪತ್ರಿಕೆ ಮೊ.ನಂ. 9916664444 ಸಂಖ್ಯೆಗೆ ರೈತ ಬಾಂದವರು ತಮ್ಮ ಮೊಬೈಲ್ ಸಂಖ್ಯೆಯನ್ನು ಕಳಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ ಕಳುಹಿಸಿದ ರೈತರಿಗೆ ಒಂದು ವರ್ಷದ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಧಂಗಾಪೂರ, ಜಂಟಿ ನಿರ್ದೇಶಕರಾದ ಡಾ. ರಿತೇಂದ್ರನಾಥ ಸುಗೂರ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಲೋಖಂಡ, ಡಾ. ಎಸ್.ಎ. ಪಾಟೀಲ್, ಡಾ. ರಾಜು ತೆಗ್ಗೆಳ್ಳಿ, ಶರಣಪ್ಪ ತಳವಾರ, ಚಂದ್ರಶೇಖರರೆಡ್ಡಿ ನಾಲವಾರ, ಮಹಾದೇವಯ್ಯ ಸೇರಿದಂತೆ ಅನೇಕ ಕೃಷಿ ತಜ್ಞರು ಭಾಗವಹಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…