ಬಿಸಿ ಬಿಸಿ ಸುದ್ದಿ

ಗ್ರಾಮ ಪಂಚಾಯತ ಚುನಾವಣೆ: ಮುಗಿದ ಮತದಾನ

ಕಲಬುರಗಿ: ಜಿಲ್ಲೆಯ ಅವಧಿ ಮುಗಿದ 3 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ 8 ಗ್ರಾಮ ಪಂಚಾಯಿತಿಗಳ ತಲಾ ಒಂದೊಂದು ಸದಸ್ಯ ಸ್ಥಾನಗಳ ಉಪ ಚುನಾವಣೆಯ ಮತದಾನ ಸೋಮವಾರ ನಡೆಯಿತ್ತು.

ಈ ತಿಂಗಳ ಅಂತ್ಯಕ್ಕೆ ಅವಧಿ ಮುಕ್ತಾಯಗೊಳ್ಳಲಿರುವ ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯಿತಿಯ 13 ಸ್ಥಾನಗಳು. ಚಿಂಚೋಳಿ ತಾಲೂಕಿನ ಕರ್ಚಖೇಡ್ ಗ್ರಾಮ ಪಂಚಾಯಿತಿ 13 ಸ್ಥಾನಗಳು ಹಾಗೂ ಗರಗಪಲ್ಲಿ ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯಿತ್ತು.

ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯತಗಳ ಸದಸ್ಯ ಸ್ಥಾನಗಳ ಉಪ ಚುನಾವಣೆಯ ಕಲಬುರಗಿ ತಾಲೂಕಿನ ಕಿರಣಗಿ ಹಾಗೂ ಶ್ರೀನಿವಾಸ ಸರಡಗಿ ಪಂಚಾಯಿತಿಗಳ ತಲಾ ಒಂದೊಂದು ಸ್ಥಾನ. ಅಫಜಲಪೂರ ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯಿತಿಯ ಚಿಣಮಗೇರಾ ಗ್ರಾಮದ ಒಂದು ಸ್ಥಾನ. ಸೇಡಂ ತಾಲೂಕಿನ ಮಳಖೇಡ್ ಗ್ರಾಮ ಪಂಚಾಯಿತಿಯ ನೃಪತುಂಗ ನಗರ, ಮದನಾ ಗ್ರಾಮ ಪಂಚಾಯಿತಿಯ ಜಿಲ್ಲೆಡಪಳ್ಳಿ ಹಾಗೂ ಮುಧೋಳ ಗ್ರಾಮ ಪಂಚಾಯತ ಸೇರಿದಂತೆ 3 ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದೊಂದು ಸ್ಥಾನ. ಚಿತ್ತಾಪೂರ ತಾಲೂಕಿನ ದಂಡೋತಿ ಪಂಚಾಯಿತಿ ಒಂದು ಸ್ಥಾನ. ಯಡ್ರಾಮಿ ತಾಲೂಕಿನ ಕಾಚಪೂರ ಗ್ರಾಮ ಪಂಚಾಯತನ ಒಂದು ಸ್ಥಾನ ಸೇರಿದಂತೆ ಒಟ್ಟು 8 ಸ್ಥಾನಗಳಿಗೆ ಉಪ ಚುನಾವಣೆಯ ಮತದಾನ ನಡೆಯಿತು.

ಚಿತ್ತಾಪೂರ್ ತಾಲೂಕಿನ ಡೊಂಣಗಾವ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 72.75 ರಷ್ಟು ಮತದಾನವಾಯಿತು. ಚಿಂಚೋಳಿ ತಾಲೂಕಿನ ಕರ್ಚಖೇಡ್ ಗ್ರಾಮ ಪಂಚಾಯಿತಿಯ 13 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 82.37 ರಷ್ಟು ಮತದಾನವಾಯಿತು. ಗರಗಪಲ್ಲಿ ಗ್ರಾಮ ಪಂಚಾಯಿತಿಯ16 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 84.17 ರಷ್ಟು ಮತದಾನವಾಯಿತು.

ಖಾಲಿ ಸದಸ್ಯ ಸ್ಥಾನಗಳ ಉಪ ಚುನಾವಣೆಗೆ ನಡೆದ ಮತದಾನದಲ್ಲಿ ಕಲಬುರಗಿ ತಾಲೂಕಿನ ಕಿರಣಗಿ ಯಲ್ಲಿ ಶೇಕಡಾ 56.15 ರಷ್ಟು, ಶ್ರೀನಿವಾಸ ಸರಡಗಿಯಲ್ಲಿ ಶೇಕಡಾ 61.79%. ಅಫಜಲಪೂರ ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯಿತಿಯ ಚಿಣಮಗೇರಾದಲ್ಲಿ ಶೇಕಡಾ 64.16 ರಷ್ಟು. ಸೇಡಂ ತಾಲೂಕಿನ ಮಳಖೇಡ್ ಗ್ರಾಮ ಪಂಚಾಯಿತಿಯ ನೃಪತುಂಗ ನಗರದಲ್ಲಿ 49.24%, ಮದನಾ ಗ್ರಾಮ ಪಂಚಾಯಿತಿಯ ಜಿಲ್ಲೆಡಪಳ್ಳಿಯಲ್ಲಿ 87.77% ಹಾಗೂ ಮುಧೋಳದಲ್ಲಿ ಶೇಕಡಾ 67.8 ರಷ್ಟು. ಚಿತ್ತಾಪೂರ ತಾಲೂಕಿನ ದಂಡೋತಿಯಲ್ಲಿ ಶೇಕಡಾ 63.57 ರಷ್ಟು. ಯಡ್ರಾಮಿ ತಾಲೂಕಿನ ಕಾಚಪೂರದಲ್ಲಿ ಶೇಕಡಾ 75.09 ರಷ್ಟು ಮತದಾನಯಿತ್ತು.

ಮತದಾನ ನಡೆದ ಚುನಾವಣೆ ಮತ ಎಣಿಕೆಯು ಡಿ.30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

13 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

13 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

15 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

15 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago