ಸಗರ ನಾಡು ಕಲಾ ವೇದಿಕೆ ರುಕ್ಮಾಪುರ ಸಂಗೀತ ಮಂದಾರ ಕಾರ್ಯಕ್ರಮ

ಸುರಪುರ: ಸಗರ ನಾಡು ಕಲಾ ವೇದಿಕೆ ರುಕ್ಮಾಪುರ ವತಿಯಿಂದ ನಗರದ ಶೆಟ್ಟಿ ಮೊಹಲ್ಲಾದ ಶ್ರೀ ಸುಗೂರೇಶ್ವರ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ ಸಂಗೀತ ಮಂದಾಯ-೨೦೨೨ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿ ಶಿವಾನಂದ ಆವಂಟಿ ಮಾತನಾಡಿ,ಸಂಗೀತ ಮನಸ್ಸೀಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ.ಹಿಂದಿನ ಕಾಲದಲ್ಲಿ ಸಂಗೀತಕ್ಕೆ ರಾಜಾಶ್ರಯವಿತ್ತು ಆದರೆ ಇಂದು ಸಂಘ ಸಂಸ್ಥೆಗಳು ಮತ್ತು ಮಠ ಮಾನ್ಯಗಳು ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದುದು ಎಂದರು.ಆದ್ದರಿಂದ ಎಲ್ಲರು ಸಂಗೀತವನ್ನು ಮತ್ತು ಸಂಗೀತಗಾರರನ್ನು ಗೌರವಿಸುವ ಮತ್ತು ಬೆಳೆಸುವ ಕೆಲಸ ಆಗಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾದ ನ್ಯಾಯವಾದಿ ಜಯಲಲಿತ ಪಾಟೀಲ್ ಮಾತನಾಡಿ,ಸಂಗೀತವು ವೇದಗಳ ಕಾಲದಿಂದಲು ಜನರ ಮನಸ್ಸು ಸೊರೆಗೊಳ್ಳುತ್ತಾ ಬಂದಿದ್ದು ಅಂದು ಋಷಿ ಮುನಿಗಳು ಮತ್ತು ಅರಸರು ಸಂಗೀತವನ್ನು ಉಳಿಸಿ ಬೆಳೆಸಿದ್ದಾರೆ.ಆದರೆ ಇಂದಿನ ಹೆಚ್ಚಿನ ಯುವ ಸಮೂಹ ಟಿ.ವಿ,ಮೊಬೈಲ್ ಗೀಳನ್ನು ಹಚ್ಚಿಕೊಂಡು ಯುವ ಜನತೆಯ ಆರೋಗ್ಯ ಕ್ಷೀಣಿಸುತ್ತಿದೆ,ಶಾಸ್ತ್ರಿಯ ಸಂಗೀತವನ್ನು ಆಲಿಸುವುದರಿಂದ ರೋಗಿಯು ಗುಣಮುಖನಾಗುತ್ತಾನೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ,ವೈದ್ಯರು ಸಹ ಮಾನಸಿಕ ಆಸ್ವಸ್ಥರಿಗೆ ಸಂಗೀತ ಕೇಳುವಂತೆ ಸಲಹೆ ನೀಡುತ್ತಾರೆ ಅಂತಹ ಸಂಗೀತದ ಕಾರ್ಯಕ್ರಮವನ್ನು ಸಗರನಾಡು ಕಲಾ ವೇದಿಕೆ ನಡೆಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ:ಸಂಜಯ್ ಕುಲಕರ್ಣಿ ಮಾತನಾಡಿದರು.ಸೂಗೂರೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ಸಾನಿಧ್ಯವಹಿಸಿದ್ದರು.ಸುನೀಲ ಸರ್ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ಕಲಾವಿದರಾದ ಶಿವಶರಣಯ್ಯ ಸ್ವಾಮಿ ಬಳೂಂಡಗಿಮಠ,ಮೋಹನರಾವ್ ಮಾಳದಕರ್,ಸಿದ್ದಲಿಂಗಯ್ಯಸ್ವಾಮಿ ಬಳೂಂಡಗಿಮಠ,ಯಲ್ಲಪ್ಪ ಹುಲಿಕಲ್,ಪ್ರಾಣೇಶ ಕುಲಕರ್ಣಿ,ಸುಧಾ ದಾಯಫುಲೆ,ನರಸಿಂಹ ಬಂಡಿ,ಗೋಪಾಲರಾವ್ ಗುಳೆದ,ಶ್ರೀನಿವಾಸ ದಾಯಫುಲೆ,ಚಂದ್ರಹಾಸ್ ಮಿಠ್ಠಾ,ತಿಮ್ಮಯ್ಯ ಪೋತಲ್ಕರ್,ಶಂಕರ ಆಲೂರು,ಗುರುನಾಥರಡ್ಡಿ ಶೀಲವಂತ,ಜಗದೀಶ ಮಾನು,ಮಹಾಂತೇಶ ಹಸನಾಪುರ ಸೇರಿದಂತೆ ಜೀವ್ಹೇಶ್ವರ ಭಜನಾ ಮಂಡಳಿ ಸದಸ್ಯರು ಹಾಗು ಸಗರನಾಡು ಕಲಾ ವೇದಿಕೆ ಅಧ್ಯಕ್ಷರಾದ ರಾಜಶೇಖರ ಗೆಜ್ಜೆ,ಸುರೇಶ ಬಾಯಿ ಅಂಬುರೆ,ರಮೇಶ ಕುಲಕರ್ಣಿ ಇವರುಗಳಿಂದ ಸಂಗೀತ ದರ್ಬಾರ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಸಿದ್ದಲಿಂಗಯ್ಯ ಸ್ವಾಮಿ ಕಡ್ಲೆಪ್ಪನವರ ಮಠ,ಸೂಗೂರೇಶ ಮಡ್ಡಿ,ಚೆನ್ನಪ್ಪ ಗುಂಡಾನೂರ,ಎಸ್.ಬಿ ಜೈನ್,ರಾಮಣ್ಣ ಚಾರು,ಭೀಮಣ್ಣ ಹುದ್ದಾರ,ವಿನೋದ ಬಳುಂಡಗಿಮಠ,ಅನ್ವರ ಜಮಾದಾರ,ಓಂಪ್ರಕಾಶ ಗಡಗಡೆ,ಶರಣಬಸಪ್ಪ ಯಳವಾರ ಭಾಗವಹಿಸಿದ್ದರು.ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು, ದೇವು ಹೆಬ್ಬಾಳ ನಿರೂಪಿಸಿದರು,ಶಿಕ್ಷಕ ಹೆಚ್.ರಾಠೋಡ ಸ್ವಾಗತಿಸಿದರು.ವೆಂಕಟೇಶಗೌಡ ಪಾಟೀಲ್ ವಂದಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 hour ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420