ಬಿಸಿ ಬಿಸಿ ಸುದ್ದಿ

ಚಂಪಾ ಕನ್ನಡ ಸಾಹಿತ್ಯದ ಬಂಡಾಯ ಸಂಪತ್ತು: ಯುವ ಸಾಹಿತಿ ಮರಲಿಂಗ ಯಾದಗಿರಿ

ವಾಡಿ: ಬಂಡಾಯ ಸಾಹಿತ್ಯದ ಕೊಂಡಿಯಾಗಿದ್ದ ಕವಿ ಚಂದ್ರಶೇಖರ ಪಾಟೀಲರು ಕನ್ನಡ ಬರಹ ಲೋಕದ ಸಂಪತ್ತಾಗಿದ್ದರು. ಚಂಪಾ ನಿಧನದಿಂದ ಕನ್ನಡ ನಾಡು-ನುಡಿ ಹೋರಾಟದ ದನಿಯೊಂದು ಇಂಗಿದಂತಾಗಿದೆ ಎಂದು ಶಿಕ್ಷಕ, ಯುವ ಸಾಹಿತಿ ಮರಲಿಂಗ ಯಾದಗಿರಿ ಕಳವಳ ವ್ಯಕ್ತಪಡಿಸಿದರು.

ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಅಗಲಿದ ನಾಡಿನ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಚಂದ್ರಶೇಖರ ಪಾಟೀಲ (ಚಂಪಾ) ಅವರ ನುಡಿ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅಕ್ಷರಗಳನ್ನೂ ಹೋರಾಟದ ಮೆರವಣಿಗೆಯಲ್ಲಿ ನಿಲ್ಲಿಸುವ ಸಾಮಾರ್ಥ್ಯ ಪ್ರಗತಿಶೀಲ ಲೇಖಕನಿಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ ಜನಪರ ಕವಿ ಚಂಪಾ, ಇಂದಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದಾರೆ.

ಬದುಕಿದಂತೆ ನೇರವಾಗಿ ಬರೆದು ಜನರಿಗೆ ಸತ್ಯ ಹೇಳುವ ಎದೆಗಾರಿಕೆ ಎಲ್ಲರಲ್ಲೂ ಇರುವುದಿಲ್ಲ. ಹೋರಾಟದ ಜತೆಗೆ ಚಳುವಳಿಗೆ ಶಕ್ತಿಯಾಗಬಲ್ಲ ಸಾಹಿತ್ಯದ ಕೊಡುಗೆ ನೀಡಿರುವುದು ಅವರಿಗಿರುವ ಸಮಾಜದ ಮೇಲಿನ ಕಾಳಜಿ ಎತ್ತಿ ತೋರಿಸುತ್ತದೆ. ಸಾಹಿತ್ಯ ಸಮ್ಮೇಳನಗಳು ನೃತ್ಯ ಸಮ್ಮೇಳನಗಳಾಗದೆ ಜನರ ನೋವಿಗೆ ಸ್ಪಂದಿಸುವ ದನಿಯಾಗಬೇಕು ಎನ್ನುತ್ತಿದ್ದರು. ಅಂತಹ ಮೇರು ಸಾಹಿತಿಯ ಅಗಲಿಕೆಯಿಂದ ವೈಚಾರಿಕ ಸಾಹಿತ್ಯದ ಕೊಂಡಿಯೊಂದು ಕಳಚಿದಂತಾಗಿದೆ ಎಂದರು.

ಸಾಂಸ್ಕೃತಿಕ ಸಂಘಟಕ, ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, ಕನ್ನಡ ಅಸ್ಮಿತೆಗೆ ಧಕ್ಕೆ ಬಂದಾಗಲೊಮ್ಮೆ ಚಂಪಾ ಹೋರಾಟದ ಹಾದಿ ತುಳಿಯುತ್ತಿದ್ದರು. ಗೋಕಾಕ್ ಚಳುವಳಿಯ ಮುಂಚೂಣಿಯಲ್ಲಿದ್ದರು. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಗುಡುಗಿದ್ದರು. ಸಾಹಿತ್ಯ ಪರಿಷತ್ತು ಚಿಂತಕರ ಚಾವಡಿಯಾಗಬೇಕು ಎಂದು ಬಯಸಿದ್ದರು. ಅವರು ಕಸಾಪ ರಾಜ್ಯಾಧ್ಯಕ್ಷರಾಗಿದ್ದಾಗ ಅದೇ ರೀತಿ ನಡೆದುಕೊಂಡರು. ಅವರು ಹೊರ ತಂದ ಸಂಕ್ರಮಣ ಪತ್ರಿಕೆಯ ಮೂಲಕ ನಾಡಿನ ಅನೇಕ ಯುವ ಬರಹಗಾರರನ್ನು ಬೆಳೆಸಿದರು. ನೇರ ನಡೆಯ ದಿಟ್ಟ ನುಡಿಯ ವ್ಯಕ್ತಿತ್ವದ ಚಂಪಾ ನಮಗೆಲ್ಲರೀಗೂ ಆದರ್ಶ ಎಂದು ಹೇಳಿದರು.

ಸಂಚಲನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ದಯಾನಂದ ಖಜೂರಿ, ನಿಕಟಪೂರ್ವ ಅಧ್ಯಕ್ಷ ವಿಕ್ರಮ ನಿಂಬರ್ಗಾ ಮಾತನಾಡಿದರು. ಮಡಿವಾಳಪ್ಪ ಹೇರೂರ, ರವಿ ಕೋಳಕೂರ, ವೀರಣ್ಣ ಯಾರಿ, ಬಸವರಾಜ ಗುಳೆ, ಯಶ್ವಂತ ಧನ್ನೇಕರ, ರಾಜು ಒಡೆಯರಾಜ, ಸಂಗಮೇಶ ರೆಡ್ಡಿ ಸೇರಿದಂತೆ ಮತ್ತಿತರgರು ಪಾಲ್ಗೊಂಡಿದ್ದರು.

emedialine

Recent Posts

ನಾಳೆ ದಿವಂಗತ ಡಾ. ಎಸ್.ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯಸ್ಮರಣೆ: ಪ್ರಶಸ್ತಿ ಪ್ರದಾನ

ಕಲಬುರಗಿ:  ನಾಳೆ ಕರ್ಮಯೋಗಿ ದಿವಂಗತ ಡಾ. ಎಸ್ ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯ ಸ್ಮರಣೆಯ ಪ್ರಯುಕ್ತ ಕರ್ಮಯೋಗಿ ಪ್ರಶಸ್ತಿ…

14 hours ago

ರಾಜ್ಯಪಾಲರ ಅವಹೇಳನ ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಲಬುರಗಿ; ರಾಜ್ಯಪಾರಿಗೆ ಅವಮಾನ ಮಾಡಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಹಾಗೂ ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ…

14 hours ago

ಶಕ್ತಿ ಯೋಜನೆ: ಕಲಬುರಗಿಯಲ್ಲಿ 757.87 ಲಕ್ಷ ಮಹಿಳೆಯರ ಉಚಿತ ಪ್ರಯಾಣ | ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕಾಂಗ್ರೆಸ್…

15 hours ago

ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವಂತೆ ಡಿ.ಸಿ. ಸೂಚನೆ

ಕಲಬುರಗಿ: ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಿ.ಓ.ಪಿ ಗಣಪನನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವನ್ನು…

16 hours ago

ಮಹಿಳೆಯರ ಸುರಕ್ಷತೆಗೆ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು: ಡಾ. ಸುಧಾ ಆರ್ ಹಾಲಕಾಯಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು…

16 hours ago

ಮಲ್ಲಿಕಾರ್ಜುನ್ ಜಿನಕೇರಿಗೆ ಸನ್ಮಾನ

ಕಲಬುರಗಿ: ಬಿಜೆಪಿ ಎಸ್ಸಿ ಮೋರ್ಚದ ನಗರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಜಿನಕೇರಿ ಅವರಿಗೆ ನೇಮಕ ಮಾಡಿದಕ್ಕೆ  ಮಾದಿಗ ಸಮಾಜದ ಯುವ ಹೋರಾಟಗಾರರ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420