ಈ ‘ಲಕ್ವ’ ರೋಗಕ್ಕೆ ಸರಿಯಾದ ಮಧುಶ್ರೀ ರಾಗಿಯವರ ಆಯುರ್ವೇದದ ಚಿಕಿತ್ಸೆ

  • ಕೆ.ಶಿವು.ಲಕ್ಕಣ್ಣವರ

ಇತ್ತೀಚೆಗೆ ಚಿಕ್ಕ ವಯಸ್ಸಿನವರೂ ಕೂಡ ಲಕ್ವ ಅಥವಾ ಪಾರ್ಶ್ವವಾಯು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ‘ಸೈಲೆಂಟ್‌ ಸ್ಟ್ರೋಕ್‌’ ಅಥವಾ ಸದ್ದಿಲ್ಲದ ಲಕ್ವಕ್ಕೆ ಹಲವರು ಒಳಗಾಗುತ್ತಿದ್ದು, ಇದಕ್ಕೆ ಕಾರಣಗಳೇನು? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬಹುದು ಎಂಬುದನ್ನು ವಿಶ್ವ ಪಾರ್ಶ್ವವಾಯು ಜಾಗೃತಿ ದಿನ (ಅ.29)ರಂದು ಆಯುರ್ವೇದ ತಜ್ಞರಾದ ಡಾ.ಮಧುಶ್ರೀ ರಾಗಿಯವರು ವಿವರಿಸಿದ್ದಾರೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಪರಿಚಲನೆಗೆ ಅಡ್ಡಿಯಾಗುವುದು ಸೈಲೆಂಟ್ ಸ್ಟ್ರೋಕ್ ಅಥವಾ ಸದ್ದಿಲ್ಲದ ಪಾರ್ಶ್ವವಾಯುವಿಗೆ ಕಾರಣ. ಇದರಿಂದ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಪಾರ್ಶ್ವವಾಯು ಸಂಭವಿಸಬಹುದು. ಜೊತೆಗೆ ಇದರ ಸಾಧ್ಯತೆ ಮೂರು ಪಟ್ಟು ಅಧಿಕ ಎನ್ನಬಹುದು ಮತ್ತು ಮೆದುಳಿನಲ್ಲಿ ತೀವ್ರತರದ ಹಾನಿ ಉಂಟಾಗುವ ಸಾಧ್ಯತೆ ಕೂಡ ಜಾಸ್ತಿ.

ಇದು ಲಕ್ವ ಹೊಡೆಯುವುದಕ್ಕಿಂತ ಮುನ್ನ ಮತ್ತು ಈ ಆಘಾತದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಸಾಮಾನ್ಯ. ಈ ಹಿಂದಿನ ಅಧ್ಯಯನಗಳ ಪ್ರಕಾರ ಪ್ರತಿ ಐವರು ಲಕ್ಷಣರಹಿತರಾದ ವ್ಯಕ್ತಿಗಳಲ್ಲಿ ಒಬ್ಬರಿಗೆ ಈ ‘ಸೈಲೆಂಟ್‌ ಬ್ರೇನ್‌ ಸ್ಟ್ರೋಕ್‌’ ಆಗಬಹುದು ಎನ್ನುತ್ತಾರೆ ಆಯುರ್ವೇದ ತಜ್ಞೆ ಮಧುಶ್ರೀ ಇಲ್ಲಿ

ಈ ಸೈಲೆಂಟ್ ಬ್ರೇನ್ ಇನ್ಫಾರ್ಕ್ಟ್ (ರಕ್ತದ ಚಲನೆ ಸಮರ್ಪಕವಾಗಿರದೆ ಆ ಭಾಗದಲ್ಲಿ ಯಾವುದೇ ಜೀವವಿರುವುದಿಲ್ಲ, ಅದು ಮರಗಟ್ಟಿರುತ್ತದೆ) ಅನ್ನು ತಡೆಗಟ್ಟಲು ಮತ್ತು ಅದನ್ನು ನಿರ್ವಹಣೆ ಮಾಡಲು ಕೆಲವು ಕ್ರಮಗಳಿವೆ. ಈ ಮರಗಟ್ಟುವಿಕೆ ಸಾಮಾನ್ಯವಾಗಿ ಮೆದುಳು ಆವರಿಸಿಕೊಂಡಿರುವ ಜಾಗವನ್ನು ಅವಲಂಬಿಸಿರುತ್ತದೆ.

ಒಂದು ವೇಳೆ ಇದು ಪ್ರಮುಖ ಅಂಗಗಳು ಅಥವಾ ಜಾಗವನ್ನು ಒಳಗೊಳ್ಳದಿದ್ದರೆ ರೋಗಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರಮುಖ ಅಂಗಾಂಗಗಳಿರುವ ಜಾಗವು ಮರಗಟ್ಟಿದ್ದರೆ ಪಾರ್ಶ್ವವಾಯುವಿನ ಪ್ರಮಾಣ ಹೆಚ್ಚಾಗಿರುತ್ತದೆ. ಅಂತಹ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ ಎನ್ನುತ್ತಾರೆ ಆರ್ಯುವೇದ ತಜ್ಞೆ ಮಧುಶ್ರೀ ರಾಗಿ.

# ಎಂಆರ್‌ಐ ಮೂಲಕ ಪತ್ತೆ —

ಈ ಸದ್ದಿಲ್ಲದ ಲಕ್ವವನ್ನು ಸಾಮಾನ್ಯವಾಗಿ ಮೆದುಳಿನ ಸಿ.ಟಿ. ಮತ್ತು ಎಂ.ಆರ್‌.ಐ. ಸ್ಕ್ಯಾನ್ ಮೂಲಕ ಪತ್ತೆ ಮಾಡಲಾಗುತ್ತದೆ. ಸಿಟಿ ಸ್ಕ್ಯಾನ್‌ಗಿಂತ ಎಂ.ಆರ್‌.ಐ. ಉತ್ತಮವಾಗಿದೆ. ಇದು ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳನ್ನೂ ಪತ್ತೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ವಿಧಾನ ಹಾಗೂ ಮೆದುಳಿನ ಕ್ಷೀಣತೆ ಮೊದಲಾದ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬಹುದು.

ಮೆದುಳಿನಲ್ಲಿ ಉಂಟಾಗುವ ಈ ಲಕ್ವ ವಯಸ್ಸು ಮತ್ತು ಇತರ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಹಿಂದಿನ ಹಲವಾರು ಅಧ್ಯಯನಗಳ ಪ್ರಕಾರ ವಿವಿಧ ರೋಗಗಳಲ್ಲಿ ಈ ಲಕ್ವದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ರಕ್ತನಾಳಕ್ಕೆ ರಕ್ತ ಪೂರೈಕೆ ಸಮಸ್ಯೆ ಹೊಂದಿರುವ ಶೇ 30ರಷ್ಟು ರೋಗಿಗಳು ಈ ಲಕ್ವದ ಸಮಸ್ಯೆಯಿಂದ ಬಳಲುತ್ತಾರೆ ಎನ್ನುತ್ತಾರೆ ಆಯುರ್ವೇದ ತಜ್ಞೆ ಮಧುಶ್ರೀ ರಾಗಿ.

# ಡೆಮೆನ್ಶಿಯ ಸಾಧ್ಯತೆ —

ಇಲ್ಲಿ ಪ್ರಮುಖವಾದ ಆತಂಕವೆಂದರೆ ಪಾರ್ಶ್ವವಾಯು ಮರುಕಳಿಸಬಹುದು ಮತ್ತು ಸ್ಮರಣಶಕ್ತಿ ನಾಶವಾಗುವ ಡೆಮೆನ್ಶಿಯ ಕಾಣಿಸಿಕೊಳ್ಳಬಹುದು. ಈ ಹಿಂದಿನ ಹಲವಾರು ಅಧ್ಯಯನಗಳು ಮೆದುಳಿನಲ್ಲಿ ರಕ್ತ ಪರಿಚಲನೆಯಿಲ್ಲದೇ ಇರುವ ರೋಗಿಗಳ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತದೆ ಎಂಬುದನ್ನು ದೃಢಪಡಿಸಿವೆ. ಅಂದರೆ ಅವರಲ್ಲಿ ಗ್ರಹಣಶಕ್ತಿ, ನೆನಪಿನ ಶಕ್ತಿ ಗಣನೀಯವಾಗಿ ಕುಸಿಯುತ್ತದೆ ಎನ್ನುತ್ತಾರೆ ಡಾಕ್ಟರ್ ಮಧುಶ್ರೀ ರಾಗಿಯವರು.

ಈ ಸಮಸ್ಯೆ ಇರುವ ರೋಗಿಗಳಲ್ಲಿ ಯಾವುದೇ ಪ್ರಮುಖ ಲಕ್ಷಣ ಕಾಣಿಸಿಕೊಳ್ಳದಿರುವುದರಿಂದ ಪತ್ತೆ ಮಾಡುವುದು ಕಷ್ಟ. ಸಮಸ್ಯೆ ಅಂದರೆ ಮೆದುಳಿನಲ್ಲಿ ಮರಗಟ್ಟುವಿಕೆ ಜಾಸ್ತಿಯಾದಂತೆ ವ್ಯಕ್ತಿಯ ಗ್ರಹಣಶಕ್ತಿ, ನೆನಪಿನ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಅದನ್ನು ಪತ್ತೆ ಹಚ್ಚಿ ತಡೆಗಟ್ಟುವುದರಿಂದ ಈ ನೆನಪಿನ ಶಕ್ತಿ ಕಡಿಮೆಯಾಗುವುದನ್ನೂ ನಿಲ್ಲಿಸಬಹುದೇ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಕಾರಣದಿಂದಾಗಿ ಎಲ್ಲಾ ರೋಗಿಗಳಲ್ಲಿ ಸೈಲೆಂಟ್ ಸ್ಟ್ರೋಕ್‌ಗೆ ಮೆದುಳಿನ ಎಂ.ಆರ್‌.ಐ. ಮಾಡಿಸುವುದು ಕಡ್ಡಾಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ತಪಾಸಣೆ ಮಾಡುವಾಗ ಹಲವಾರು ಸವಾಲುಗಳು ಎದುರಾಗುತ್ತವೆ.

ಪ್ರಮುಖ ಕಾರಣವೆಂದರೆ ಇದಕ್ಕೆ ಸಮರ್ಪಕವಾದ ಚಿಕಿತ್ಸೆಯ ಕೊರತೆ. ಕೇವಲ ವಯಸ್ಕರಲ್ಲಿ ಮಾತ್ರವಲ್ಲದೇ, ಸಿಕಲ್ ಸೆಲ್ (ಅನುವಂಶಿಕ ಕಾಯಿಲೆ– ತೀವ್ರತರದ ರಕ್ತಹೀನತೆಯಿದ್ದು, ಜೀವಕೋಶಗಳು ಕುಡುಗೋಲಿನಾಕಾರದಲ್ಲಿರುತ್ತವೆ) ಕಾಯಿಲೆ ಇರುವ ಮಕ್ಕಳಲ್ಲಿ ಕೂಡ ಈ ಸದ್ದಿಲ್ಲದ ಲಕ್ವ ಸಂಭವಿಸುತ್ತಿದೆ.

ಧೂಮಪಾನ ನಿಲ್ಲಿಸಿ, ವ್ಯಾಯಾಮ ಮಾಡಿ
ಅನಿಯಮಿತವಾದ ಹೃದಯಬಡಿತ ಇರುವ 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ಸದ್ದಿಲ್ಲದ ಲಕ್ವದ ಅಪಾಯ ಹೆಚ್ಚು. ಅಂದರೆ ಉಳಿದವರಿಗಿಂತ ಎರಡು ಪಟ್ಟು ಅಧಿಕವಾಗಿರುತ್ತದೆ. ಅಧಿಕ ರಕ್ತದೊತ್ತಡ, ಹೆಚ್ಚು ಕೊಬ್ಬು, ಮಧುಮೇಹ, ಧೂಮಪಾನ, ಅತಿಯಾದ ಮದ್ಯ ಸೇವನೆಯಂತಹ ಚಟಗಳು ಇದ್ದರೆ ಈ ಲಕ್ವದ ಅಪಾಯದ ಪ್ರಮಾಣ ಹೆಚ್ಚು ಆಗಿರುತ್ತದೆ.

ಈ ಅಪಾಯವನ್ನು ಕಡಿಮೆ ಮಾಡಲು ಆ್ಯಂಟಿಪ್ಲೇಟ್‌ಲೆಟ್ ಔಷಧಿಗಳನ್ನು ತೆಗೆದುಕೊಳ್ಳಬೇಕು. ತಂಬಾಕು ಸೇವನೆಯನ್ನು ನಿಲ್ಲಿಸಬೇಕು, ವ್ಯಾಯಾಮ ಆರಂಭಿಸಬೇಕು ಮತ್ತು ಆರೋಗ್ಯಕರವಾದ ತೂಕವನ್ನು ಹೊಂದುವತ್ತ ಗಮನಹರಿಸಬೇಕು..! ಹಿಗೆಲ್ಲಾ ಎನ್ನುತ್ತಾರೆ ಆಯುರ್ವೇದ ಡಾಕ್ಟರ್ ಮಧುಶ್ರೀ ರಾಗಿಯವರು..!

ಇಲ್ಲಿ ವಿಡಿಯೋದಲ್ಲಿ ತೋರಿಸಲಾದ ‘ಲಕ್ವ’ ಹೊಡೆದ ರೋಗಿಯನ್ನು ಈ ಮಧುಶ್ರೀ ರಾಗಿಯವರು ಮೊದಲು ಆ 82 ವರ್ಷದ ವಯೋವೃದ್ದೆಗೆ ಒಟ್ಟು 25 ದಿನಗಳ ಕಾಲ ತಮ್ಮ ಈ ಆಯುರ್ವೇದ ಚಿಕಿತ್ಸೆ ಕೊಟ್ಟರು ಡಾ.ಮಧುಶ್ರೀ ರಾಗಿಯವರು.

ಮೊದಲ 5 ದಿನಗಳ ಕಾಲ ರಕ್ತದೊತ್ತಡ ನಿಯಂತ್ರಿಸಲು ಶಿರೋಧಾರಾ ಚಿಕಿತ್ಸೆ, ನಂತರ 8 ದಿನಗಳ ಕಾಲ ಸರ್ವಾಂಗ ಹಿಬ್ಯಂಗ ಹಾಗೂ ನಾಡಿ ಸ್ವೇದ ಚಿಕಿತ್ಸೆ ಕೊಟ್ಟರು ಡಾಕ್ಟರ್ ಮಧುಶ್ರೀ ರಾಗಿಯವರು, ಅಲ್ಲಿಗೇ ಆ 25 ದಿನಗಳಲ್ಲಿ ಆ ‘ಲಕ್ವ’ ಹೊಡೆದ ರೋಗಿಯು ನಡೆದಾಡುವಂತೆ ಆಯಿತು. ಅದು ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದದ ಚಿಕಿತ್ಸೆಯ ಪವಾಡ ಎನ್ನುತ್ತಾರೆ ಆ ವಯೋವೃದ್ದೆಯ ಪೋಷಕರು..!

ಹೀಗಿದೆ ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದ ಚಿಕಿತ್ಸೆಯ ಪವಾಡವೂ..!ಈಗ ಹೇಳಿ ಅಲೋಪೆತಿಕ್ ಚಿಕಿತ್ಸೆಗಿಂತ ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದಿಕ್ ಚಿಕಿತ್ಸೆ ಗುಣವಲ್ಲವೇ..!

# ಡಾ.ಮಧುಶ್ರೀ ರಾಗಿಯವರ ಸಂಪರ್ಕಾಗಿ…–
ಫೋನ್ ನಂಬರ್ — 6361321848

emedialine

Recent Posts

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

48 mins ago

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

3 hours ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

4 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

5 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

5 hours ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420