ರಬಕವಿ-ಬನಹಟ್ಟಿ: ರಾಷ್ಟ್ರಕವಿ ಕುವೆಂಪು ರಚಿಸಿದ ಕಾನೂರು ಹೆಗ್ಗಡತಿ ಮತ್ತು ಮಲೆಗಳನ್ನು ಮದುಮಗಳು ವಿಶ್ವದ ಸರ್ವಕಾಲಿಕ ಶ್ರೇಷ್ಠ ಕಾದಂಬರಿಗಳಾಗಿವೆ. ಕಾನೂರು ಹೆಗ್ಗಡತಿ ಕನ್ನಡದ ಪ್ರಥಮ ಪ್ರಾದೇಶಿಕ ಕಾದಂಬರಿಯಾಗಿದೆ ಎಂದು ಸಾಹಿತಿ ಜಿ.ಎಸ್.ವಡಗಾವಿ ತಿಳಿಸಿದರು.
ಅವರು ಶುಕ್ರವಾರ ತಾಲ್ಲೂಕಿನ ರಾಮಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಕಾನೂರು ಹೆಗ್ಗಡತಿ ಕುರಿತು ಮಾತನಾಡಿದರು.
ಕಾದಂಬರಿಗಳನ್ನು ಅಂಗೈಯೊಳಗಿನ ರಂಗಭೂಮಿ ಎಂದು ಕರೆಯುತ್ತಾರೆ. ಕಾದಂಬರಿಗಳನ್ನು ತಾಳ್ಮೆಯಿಂದ ಓದಬೇಕು. ಪ್ರಕೃತಿಯ ಮುಂದೆ ಮಾನವ ಕುಬ್ಜಾನಾಗಿ ಕಾಣುತ್ತಾನೆ. ಪ್ರಕೃತಿಯ ಪ್ರಭಾವದಿಂದಾಗಿಯೇ ಕುವೆಂಪು ಅವರಲ್ಲಿಯ ಸಾಕಷ್ಟು ನಯ ವಿನಯತೆಯು ಕಂಡು ಬಂದಿದೆ. ಕುವೆಂಪು ಅವರ ಕಾದಂಬರಿಗಳು ಅನೇಕ ಪಕ್ಷಿ ಮತ್ತು ಪ್ರಾಣಿ ವಿಜ್ಞಾನಿಗಳಿಗೆ ಸಹಾಯಕವಾಗಿವೆ. ಕಾದಂಬರಿಗಳಲ್ಲಿ ಅಷ್ಟೊಂದು ಪ್ರಾಣಿ,ಪಕ್ಷಿಗಳ ಹೆಸರುಗಳನ್ನು ಅವರು ಉಲ್ಲೇಖಿಸುತ್ತಾರೆ. ಕಾದಂಬರಿಯ ಹೂವಯ್ಯ ಮತ್ತು ಕುವೆಂಪು ಅವರ ಮಧ್ಯದಲ್ಲಿ ಅನೇಕ ಸಾಮಿಪ್ಯಗಳಿವೆ ಎಂಬುದು ವಿಮರ್ಶಕರ ಮಾತುಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕುವೆಂಪು ಸ್ವಾಭಿಮಾನಿಯಾಗಿದ್ದರು ಎಂದು ಜಿ.ಎಸ್.ವಡಗಾವಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಮಾನ ಮನಸ್ಕಗಳ ಜೊತೆಗೆ ಸಮಾಧಾನ ಮನಸ್ಕರರು ಬೇಕಾಗಿದ್ದಾರೆ. ಜಾತಿ, ಮೂಢ ನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅವರ ಕವನಗಳು ನಮಗೆ ಪ್ರೇರಣೆಯಾಗಿವೆ. ಕುವೆಂಪು ಅವರ ಕೃತಿಗಳನ್ನು ಓದುವುದರ ಮೂಲಕ ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯ ಎಂದರು.ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿದರು.
ಶಿವಾನಂದ ಬಾಗಲಕೋಟಮಠ, ಶಿವಾನಂದ ದಾಶ್ಯಾಳ, ಕೊಣ್ಣೂರ, ಮಲ್ಲಿಕಾರ್ಜುನ ನಾಶಿ, ಸದಾಶಿವ ದೊಡ್ಡಪ್ಪಗೋಳ, ಬಿ.ಎಂ.ಮಟ್ಟಿಕಲ್ಲಿ, ಶ್ರೀಶೈಲ ಬುರ್ಲಿ, ಚಂದ್ರಪ್ರಭಾ ಬಾಗಲಕೋಟ ಸೇರಿದಂತೆ ಆನೇಕರು ಇದ್ದರು. ಎಂ.ಎಸ್.ಬದಾಮಿ ಸ್ವಾಗತಿಸಿದರು. ಗಂಗಾಧರ ಮೋಪಗಾರ ನಿರೂಪಿಸಿದರು. ಯಶವಂತ ವಾಜಂತ್ರಿ ವಂದಿಸಿದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…