ಟ್ರೆಂಡ್ ಆಯ್ತು ‘ಮನೆಗೊಂದು ಮರ, ಊರಿಗೊಂದು ವನ’..! ಮಕ್ಕಳು ಹಾಡಿ ಕುಣಿಯುವಂತೆ ಮಾಡಿತು ,”ನಾಡಪ್ರಭು ಕೆಂಪೇಗೌಡ” ಗೀತೆ. ಈಗ “ಕೌದಿ ಗೀತೆ” ಹೊಸ ಪೀಳಿಗೆಗೆ ಹಿರಿಯರ ಕ್ರಿಯಾಶೀಲತೆಯನ್ನು ನೆನಪಿಸಿಕೊಡುತ್ತಿದೆ.
( ಚಿತ್ರ — ಗೀತಾ ಶಿಂಧೆ (ಬಲದಿಂದ ಮೊದಲನೇಯವರು) ಮತ್ತು ತಂಡ… )
ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಜೂನ್ 5 ರಂದು ತನ್ನ ಪೋರ್ಟಲ್ನಲ್ಲಿ ‘ಮನೆಗೊಂದು ಮರ, ಊರಿಗೊಂದ ವನ, ಉಳಿಸಿ ಬೆಳೆಸೋಣ’ ಎಂಬ ಪರಿಸರ ಗೀತೆ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಎರಡೇ ದಿನಗಳಲ್ಲಿ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತ ಭಾರಿ ಜನಪ್ರಿಯವಾಗಿತ್ತು.
ಗೀತಾ ಶಿಂಧೆ ಬೆನಗಿ ಬೆಂಗಳೂರಿನ ಬಿಇಎಲ್ ಪದವಿಪೂರ್ವ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ .. ಸದಾ ಲವಲವಿಕೆಯ ಪಾಠ, ಕ್ರಿಯಾಶೀಲ ಚಟುವಟಿಕೆಗಳು ಇರುವುದರಿಂದ ಸದಾ ಯುವ ವಿದ್ಯಾರ್ಥಿ ಮಕ್ಕಳಿಗೆ ಅಚ್ಚುಮೆಚ್ಚಿನ ಸ್ಪೂರ್ತಿದಾಯಕ ವ್ಯಕ್ತಿತ್ವ ..!
ಸರ್ಕಾರಿ ಶಾಲಾ ಮಕ್ಕಳಲ್ಲಿ ಕಲೆ ,ಸಂಸ್ಕೃತಿ ಪರಿಸರ ಜಾಗೃತಿ, ಕನ್ನಡ ಭಾಷಾ ಜಾಗೃತಿ ಮೂಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಸಾಕಷ್ಟು ಹಾಡುಗಳನ್ನು ಬರೆದು ಮಕ್ಕಳಿಂದ ಹಾಡಿಸಿ ಸಮಾಜವನ್ನು ಸುಧಾರಿಸುವ ಯೋಚನೆಯ ಫಲವಾಗಿ ಹುಟ್ಟಿಕೊಂಡಿವೆ ಅವರ ಹಾಡುಗಳು..
ಸರ್ಕಾರಿ ಶಾಲೆಯ ಮಕ್ಕಳ ನಡುವೆ ಕಳೆದು ಹೋಗಬೇಕಿದ್ದ ಹಾಡು ಈಗ ಹೊಸಟ್ರೆಂಡ್ ಸೃಷ್ಟಿಸಿದೆ ಎಂದು ಗೀತಾ ಬೆನಗಿ ಖುಷಿಯನ್ನು ಹಂಚಿಕೊಂಡರು.ಡಿಜಿಟಲ್ ಪ್ಲಾಟ್ಫಾರ್ಮ್ ಮತ್ತು ಸೋಷಿಯಲ್ ಮೀಡಿಯಾ ಈಗ ಹೆಚ್ಚು ಜನಪ್ರಿಯ ಮಾಧ್ಯಮವಾಗುತ್ತಿವೆ.
ಲಾಕ್ಡೌನ್ ಸಮಯದಲ್ಲಿ ಹಸಿ ಮತ್ತು ಒಣ ಕಸ ವಿಂಗಡನೆ ,ಶಾಲೆ ಸ್ವಚ್ಛ ಮಾಡುವ, ಊರು ಸ್ವಚ್ಛ ಮಾಡುವ ದೇಶ ಸ್ವಚ್ಛ ಮಾಡುವ… ಎಂಬ ಹಾಡು ಸೇರಿದಂತೆ ಉತ್ತಮ ಸಂದೇಶ ಸಾರುವ ಹಾಡುಗಳನ್ನು ಬರೆದಿದ್ದಾರೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗಾಗಿ ಎಲೆಕ್ಟ್ರಾನಿಕ್ ರ್ಯಾಪ್ ಸಾಂಗ್ ರೆಕಾರ್ಡಿಂಗ್ ಕೂಡ ಆಗಿ ಸರ್ಕಾರದ ದೀಕ್ಷಾ ಆಪ್ ನಲ್ಲಿ ಬಿಟ್ಟಿದ್ದಾರೆ.
‘ಸಾಂಪ್ರದಾಯಿಕ ಕಲಿಕಾ ವಿಧಾನದ ಬದಲು ಹಾಡು, ನಾಟಕ, ನೃತ್ಯಗಳಂತಹ ಸೃಜನಾತ್ಮಕ ಮಾರ್ಗಗಳ ಮೂಲಕ ಮಕ್ಕಳು ಬೇಗ ಕಲಿಯುತ್ತಾರೆ’ ಎನ್ನುವ ಗೀತಾ ತಮ್ಮ ಹಲವು ವರ್ಷಗಳ ಅನುಭವದಿಂದ ಕಂಡುಕೊಂಡ ಸತ್ಯವಾಗಿದೆ. ಬೋಧನೆ ಜೊತೆಗೆ ವಿಮೋವ್ ಎನ್ಜಿಒ, ಬಿಇಎಲ್ ಸಂಸ್ಥೆ, ಉತ್ತರ ಕರ್ನಾಟಕ ಬಳಗ, NDJM ಟ್ರಸ್ಟ್ ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಗೀತಾ ಬೆನಗಿ ತೊಡಗಿಸಿಕೊಂಡಿದ್ದಾರೆ.
ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಕಿಸಿಕೊಡಲು ರೂಪದರ್ಶಿಗಳಿಗೆ ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಕಣ, ತೊಡಿಸಿ ಗ್ರಾಮಸ್ಫೂರ್ತಿ ರ್ಯಾಂಪ್ ವಾಕ್ ಮಾಡಿಸಿ ತಮ್ಮ ಬಿಇಎಲ್ ಕಾಲೇಜನ್ನು ,ಬೆಂಗಳೂರಿಗೆ ಮೊದಲ ಸ್ಥಾನ ಗಿಟ್ಟಿಸಿದ್ದರು.. ಮನೆಯಲ್ಲಿ ಕುಳಿತು ಬರೆದು ಹಾಡಿದ “ಬೆಳಕು” ಭಾವಗೀತೆ ಎಲ್ಲರ ಮನದಲ್ಲಿ ಬೆಳಕು ನೀಡಿತ್ತು. ಇಂತಹ ಟ್ರೆಂಡ್ ಸೃಷಿಸುವ ಸಂಗೀತ ವಿಷಾರಧೆ ಮತ್ತು ಭರತನಾಟ್ಯ ನರ್ತಕಿ, ಕಲಾ ಉಪಾಸಕಿ , ನಮ್ಮ ಕರ್ನಾಟಕ ಸರಕಾರದ ರಾಜ್ಯ ಶ್ರೇಷ್ಠ ಉಪನ್ಯಾಸಕಿ ಪ್ರಶಸ್ತಿಯನ್ನು ಗಿಟ್ಟಿಸಿದ್ದಾರೆ. ಈಗಲೂ ಅವರು ಸುಮ್ಮನೇ ಕುಳಿತಿಲ್ಲ, ಮತ್ತೇ ದಿನಕ್ಕೊಂದು ತರಹದ ಕಲೆಯ ತಾಲೀಮು ಮಾಡುತ್ತಲೇ ಇರುತ್ತಾರೆ. ಹ್ಯಾಂಡ್ಸ್ ಆಫ್ ಗೀತಾ ಬೆಣಗಿ..!
ಗೀತಾ ಬೆನಗಿ ಅಷ್ಟೇ ಕಲೆಗೆ ಸೀಮಿತವಾಗಿಲ್ಲ. ಇವರ ಇಡೀ ಕುಟುಂಬ ಕಲಾಪೋಷಕರೆ. ತಂದೆ ರಾಮಕುಮಾರ ಶಿಂಧೆ ಉತ್ತಮ ಸಂಗೀತ ಹಾಡುಗಾರಿಕೆಗೆ ಹೆಸರುವಾಸಿಯಾದವರು. ಮಗಳು ಶ್ರದ್ಧಾ ಬೆಣಗಿ ಚಲನಚಿತ್ರ, ಮತ್ತು ಶಾಸ್ತ್ರೀಯ ಭರತ ನಾಟ್ಯಕ್ಕೆ ಹೆಸರುವಾಸಿಯಾದವಳು..! ಪತಿ ವಿಜಯಕುಮಾರ ಅವರ ಪ್ರೋತ್ಸಾಹ ಹಾಗೂ ಇಡೀ ಕುಟುಂಬ ಒಟ್ಟಾರೆ ಕಲೆಯ ಆರಾಧಕರು..!
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…