ಗದಗ: ಕೋವಿಡ್-19 ಸಾಂಕ್ರಾಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಜನರಲ್ಲಿ ಹೆಚ್ಚು ಆಸಕ್ತರನ್ನಾಗಿ ಮಾಡಿದೆ. ಫಿಟ್ನೆಸ್, ಉತ್ತಮ ಆರೋಗ್ಯಕ್ಕಾಗಿನ ಕ್ರಮಗಳು ಕೇವಲ ನಗರಪ್ರದೇಶಗಳಲ್ಲಿರುವ ಮಂದಿಗಷ್ಟೇ ಅಲ್ಲದೇ ಸಣ್ಣ ಪಟ್ಟಣಗಳಲ್ಲೂ ಹೆಚ್ಚಾಗುತ್ತಿದೆ.

ಈ ನಡುವೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾಂಪ್ರದಾಯಿಕ ಗರಡಿ ಮನೆಗಳೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿದೆ. ಗದಗದ ಗರಡಿಮನೆಗಳಿಗೆ ತೆರಳಿ ವ್ಯಾಯಾಮ ಮಾಡುವವರ ಸಂಖ್ಯೆ ಕಳೆದ 2 ತಿಂಗಳಿನಿಂದ ಹೆಚ್ಚತೊಡಗಿದ್ದು, ಗ್ರಾಮೀಣ ಭಾಗದಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಾಯಾಮಶಾಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಗದಗ ನಗರದ ಗರಡಿ ಮನೆಗಳಲ್ಲಿ ಕಳೆದ ವರ್ಷ ಕೇವಲ 11 ಸದಸ್ಯರಿದ್ದರು, ಅದು ಈ ವರ್ಷ 26 ಕ್ಕೆ ಏರಿಕೆಯಾಗಿದೆ. ಲಕ್ಕುಂಡಿಯ ಗರಡಿ ಮನೆ ಹೊಸದಾಗಿ 9 ಮಂದಿಯನ್ನು ಸ್ವಾಗತಿಸಿದ್ದರೆ, ಹತಲಗೇರಿಯ ಗರಡಿಮನೆಗೆ 6 ಮಂದಿ ಸೇರ್ಪಡೆಯಾಗಿದ್ದಾರೆ ಹಾಗೂ ಜಕ್ಕಲಿಯಲ್ಲಿ 18 ಮಂದಿ ಹೊಸದಾಗಿ ಸೇರಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಗರಡಿಮನೆಗಳು ಮರುಜೀವ ಪಡೆಯಲು ಪ್ರಾರಂಭಿಸಿವೆ.

ಭಾರತದಲ್ಲಿ ಈ ಸಾಂಪ್ರದಾಯಿಕ ಜಿಮ್ ಗಳಿಗೆ ಶ್ರೀಮಂತ ಇತಿಹಾಸವಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 1650 ರಿಂದಲೂ ಅಂದರೆ ಕಂಠೀರವ ನರಸರಾಜ ಒಡೆಯರ್ ಅವಧಿಯಿಂದ ಪ್ರಾರಂಭಗೊಂಡು ಗರಡಿಮನೆಗಳಿಗೆ ಪ್ರಾಮುಖ್ಯತೆ ಇದೆ. ಗಜ, ಮುದ್ಗರ, ಕಲ್ಲಿನ ಬೌಲ್ಡರ್ ಗಳು, ಮಣ್ಣಿನ ನೆಲಗಳನ್ನು ಹೊಂದಿರುವ ಗರಡಿಮನೆಗಳಲ್ಲಿ ಕುಸ್ತಿ ಪಟುಗಳು ತರಬೇತಿ ನೀಡುತ್ತಾರೆ.

1960 ರಲ್ಲಿ ಗದಗದ ಜಕ್ಕಲಿ, ಮಲ್ಲಪುರ, ಸವದಿ, ರೋಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗರಡಿಮನೆಗಳು ಪ್ರಾರಂಭವಾದವು, ಈ ಗರಡಿಗಳಲ್ಲಿ ಪಳಗಿದ ಹಲವು ಪೈಲ್ವಾನ್ ಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ದಂಗಲ್ ಗಳಲ್ಲಿ ಭಾಗವಹಿಸಿ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. 90 ನೇ ದಶಕದಲ್ಲೂ ಈ ಟ್ರೆಂಡ್ ಮುಂದುವರೆದಿತ್ತು. ಆದರೆ ಇತ್ತೀಚಿನ ಹೊಸ ಟ್ರೆಂಡ್ ಅಬ್ಬರದಲ್ಲಿ ಗರಡಿಮನೆಗಳು ಮಾಯವಾಗಿದ್ದವು ಈಗ ಮತ್ತೆ ಹಳೆಯ ಟ್ರೆಂಡ್ ಮರಳುತ್ತಿದೆ.

emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

13 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

13 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

13 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

13 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

13 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420