ಬಿಸಿ ಬಿಸಿ ಸುದ್ದಿ

ಸುರಪುರ:ಗೋಲ್ಡನ್ ಕೇವ್ ಬುದ್ಧ ವಿಹಾರ ಧಮ್ಮ ವಂದನಾ ಕಾರ್ಯಕ್ರಮ

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಹುಣ್ಣಿಮೆ ದಿನವಾದ ಸೋಮವಾರ ನಾಡಿನ ಶಾಂತಿಗಾಗಿ ತ್ರಿಸರಣ ಪಂಚಶೀಲ ಪಠಣ ಹಾಗು ಧಮ್ಮ ವಂದನೆ ಕಾರ್ಯಾಕ್ರಮ ನಡೆಸಲಾಯಿತು. ಬೌದ್ಧ ಅನುಯಾಯಿಗಳು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು, ಬೌದ್ಧ ಉಪಾಸಕರು, ಹಾಗೂ ಉಪಾಸಿಕಾ ರವರು ಮಕ್ಕಳೋಂದಿಗೆ ಹೂ, ಹಣ್ಣು ಮೇಣದ ಬತ್ತಿಯೊಂದಿಗೆ ಭಾಗವಹಿಸಿ ಬುದ್ದರ ಮೂರ್ತಿಗೆ ಪುಷ್ಫಾರ್ಚಣೆ ಮಾಡಿ ಮೇಣದ ಬತ್ತಿ ಹಚ್ಚಿ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಹಿಸಿದ್ದ ಉಪಾಸಕ ಮೂರ್ತಿ ಬೋಮ್ಮನಹಳ್ಳಿಯವರು ತ್ರೀಸರಣ ಪಂಚಶೀಲ ಪಠಿಸಿದರು, ಎಲ್ಲರು ಸಾಮೂಹಿಕವಾಗಿ ಶ್ರಧ್ಧೆಯಿಂದ ಪಾರ್ಥನೆಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸಿರುವ ಶಿವರಾಜ ಪಾಣೆಗಾಂವ್ ಇವರು ಮುಖ್ಯ ಪೇದೆಯಾಗಿ ಬಡ್ತಿ ಪಡೆದಿರುವ ಪ್ರಯುಕ್ತ ಮತ್ತು ಹುಣ್ಣಿಮೆಯ ದಿನದ ಅಂಗವಾಗಿ ಬುದ್ಧ ವಿಹಾರಕ್ಕೆ ಆಗಮಿಸಿದ ಎಲ್ಲರಿಗೂ ಸಿಹಿ ಊಟವನ್ನು ಪ್ರಸಾದ ವ್ಯವಸ್ಥೆ ಮಾಡಿದ ಭೀಮರಾಯ ಸಿಂದಗೇರಿ ದಂಪತಿಯವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅದ್ಯಕ್ಷ ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ , ಶರಣಪ್ಪ ಗುಳಬಾಳ, ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ, ವೆಂಕಟೇಶ ಸುರಪುರಕರ್, ಮಲ್ಕಯ್ಯ ತೇಲ್ಕರ್ ಹಣಮಂತ ಭದ್ರಾವತಿ,,ಗುರುಪಾದಪ್ಪ ಹುಲಿಮನಿ ವಕೀಲರು, ಗೋಪಾಲ್ ವಜ್ಜಲ್, ಮರೆಪ್ಪ ತೆಲ್ಕರ್, ಶಂಕರ್ ಹೊಸಮನಿ, ಸಿದರಾಮ್ ಹಾಲಬಾವಿ, ಶರಣು ಹಸನಾಪುರ್ ಶ್ರೀಮಂತ ಚಲವಾದಿ, ರಾಜು ಬಡಿಗೇರ್, ರಾಯಪ್ಪ ಕಟ್ಟಿಮನಿ, ಸತಿಶ್ ಯಡಿಯಾಪೂರ್, ಹಣಮಂತ ರತ್ತಾಳ, ಹಣಮಂತ ತೆಲ್ಕರ್, ಉಪಾಸಿಕರಾದ ಭೀಮಂಬಾಯಿ ಕಲ್ಲದೆವನಹಳ್ಳಿ, ಮಂಜುಳಾ ಸುರಪೂರ್,ಬಸಮ್ಮ ಹುಲಿಮನಿ, ಶಿಲ್ಪಾ ಹುಲಿಮನಿ,ಬಾರತಿ ಸಿಂದಗೆರಿ, ಸುನಿತಾ ಕಿರದಳ್ಳಿ, ಯಲ್ಲಮ್ಮ ತೇಲಕ್ರ್, ರೇಣುಕಾ ಅರಕೇರಿ, ಗೌತಮಿ, ಮೇಘಾ,ಮಾಯಾ, ಖುತ್ಬಜಾ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

16 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago