ಕಲಬುರಗಿ: ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ತಮ್ಮ 48 ನೇ ಹುಟ್ಟುಹಬ್ಬವನ್ನು ವೆಂಕಟರಮಣನ ಸನ್ನಿಧಾನ ತಿರುಪತಿಯಲ್ಲಿ ಆಚರಿಸಿಕೊಂಡರು.
ಈ ವಿಶೇಷ ದಿನದಂದು ಸಹ ಕುಟುಂಬ- ಪರಿವಾರ ಸಮೇತರಾಗಿ ಡಾ. ಅಜಯ್ ಸಿಂಗ್ ತಮ್ಮ ಸಹೋದರ, ಮಾಜಿ ಎಂಎಲ್ಸಿ ವಿಜಯ್ ಸಿಂಗ್, ತಾಯಿ ಪ್ರಭಾವತಿ ಧರಂಸಿಂಗ್, ಪತ್ನಿ ಶ್ವೇತಾ ಅಜಯ್ ಸಿಂಗ್, ಮಕ್ಕಳು, ಬಂಧುಗಳ ಜೊತೆಗೂಡಿ ತಿರುಪತಿಗೆ ಭೇಟಿ ನೀಡಿ ವೆಂಕಟರಮಣನ ಪೂಜೆ- ದರುಶನ ಮಾಡಿದರು.
ಡಾ. ಅಜಯ್ ಸಿಂಗ್ ಹಾಗೂ ವಿಜಯ್ ಸಿಂಗ್ ಸಹೋದರರ ಹುಟ್ಟುಹಬ್ಬ ಒಂದೇ ದಿನ ಇರೋದರಿಂದ ಸಹೋದರರಿಬ್ಬರೂ ಪರಿವಾರ ಸಮೇತರಾಗಿ ತಿರುಪತಿ ಭೇಟಿ ನೀಡಿ ಬಾಲಾಜಿ ಸನ್ನಿಧಾನದಲ್ಲಿ ತಮ್ಮ ಜನ್ಮದಿನ ಪರಿವಾರದವರ ಜೊತೆಗೂಡಿ ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಇಬ್ಬರು ಸಹೋದರರು ಇದೇ ಸಂದರ್ಭದಲ್ಲಿ ಕೋವಿಡ್ನಿಂದ ಬೇಗ ಮುಕ್ತಿ ಕೊಡುವಂತೆ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಾಮಾನ್ಯವಾಗಿ ನಾಯಕರ ಹುಟ್ಟುಹಬ್ಬವೆಂದರೆ ಜನದಟ್ಟಣೆ, ಬ್ಯಾನರ್, ಬಂಟಿಂಗ್ ಎಲ್ಲವೂ ಇರುತ್ತವೆ, ಆದರೆ ಡಾ. ಅಜಯ್ ಸಿಂಗ್ ಅವರಂತೂ ಮುಂಚೆಯೇ ಕೋವಿಡ್ ಕಾರಣದಿಂದಾಗಿ ತಮ್ಮ ಹುಟ್ಟುಹಬ್ಬ ಯಾರೂ ಅದ್ದೂರಿಯಾಗಿ ಆಚರಿಸೋದು ಬೇಡವೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದನ್ನು ಸ್ಮರಿಸಬಹುದಾಗಿದೆ. ಡಾ. ಅಜಯ್ ಸಿಂಗ್ ತಿರುಪತಿ ಭೇಟಿಯಲ್ಲಿ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್, ಅವರ ಆಪ್ತ ವರ್ಗದವರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…