ನಿಮ್ಮನರಿದ ಜ್ಞಾನವೇ ಪರಮಜ್ಞಾನ

ವಚನ, ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟ ಜ್ಞಾನವೆಂಬ ಜ್ಞಾನತ್ರಯಂಗಳೇನಾದವು?! ಅಂತು ತ್ರಿಕಾಲಜ್ಞಾನಂಗಳಿಂದೇನಹುದು? ಕೂಡಲಸಂಗಮದೇವಾ, ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ..! ದೇವರ ಸ್ವರೂಪವನ್ನು ತಿಳಿಯದ, ಅರಿಯದ ಜ್ಞಾನ ಸುಜ್ಞಾನವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ಧಾರೆ ಬಸವಣ್ಣನವರು.

ಕೇವಲ ಶಾಸ್ತ್ರ ಜ್ಞಾನವಷ್ಟೇ ಅಲ್ಲ, ತ್ರಿಕಾಲಜ್ಞಾನವೂ ನಿಜವಾದ ಜ್ಞಾನವಲ್ಲ, ಸಮ್ಯಗ್ ಜ್ಞಾನವಲ್ಲ, ಪರಾವಿಧ್ಯೆಯಲ್ಲ , ಆದರೆ ಕೂಡಲ ಸಂಗಮದೇವಾ ನಿಮ್ಮನರಿದ ಜ್ಞಾನವೇ ಪರಮಜ್ಞಾನ. ಅದೇ ಪರಾವಿಧ್ಯೆ, ಎಂಬ ಬಸವಣ್ಣನವರ ವಚನದಲ್ಲಿ ಮತ್ಸ್ಯ ನುಂಗಿದ ಮಾಣಿಕ್ಯದಂತೆ ಹೊಳೆಯುತ್ತದೆ.

ಹೊರಗೆ ಮುಗಿಲು, ಒಳಗೆ ಮಿಂಚು, ಮಾನವನ ಮರೆಯ ಈ ಮಿಂಚು, ಸಾಧಕನ ಜೀವಜಾತಿಯ ಬೆಳಗಿನ ಬೆಳಗು, ಈ ಬೆಳಗನ್ನು ಬೆಳಗಿನಲರಿಯಬೇಕು, ಅಂದರೆ ಜೀವಜಾತಿಯ ಸಾರವಾದ ಮಾನವ ತನ್ನ ಬೆಳಗಿನಿಂದ, ತನ್ನ ಅರಿವಿನ ಕಣ್ಣಿಂದ ಆರಿಸಬೇಕು. ಕಾಣಬೇಕು. ಈ ಮಹಾಬೆಳಗನ್ನು ಕಂಡು ಬೆಳಗು ನಡೆಸಿದಂತೆ ನಡೆಯಬೇಕು. ಇರಿಸಿದಂತೆ ಇರಬೇಕು. ಬೆಳಗಿನ ಬೆಳಗಿನಲ್ಲಿ ಬೆಳಕಾಗಿ ಇರುವುದೇ ದಿವ್ಯ ಜೀವನ. ಈ ಮಹಾಬೆಳಗು ನಿರೂಪಿಸಿದಂತೆ, ಪ್ರೇರೇಪಿಸಿದಂತೆ ವರ್ತಿಸುವುದೇ ದಿವ್ಯಾಚರಣೆ. ಅದೇ ಬೆಳಗಿನಾಚರಣೆ. ಬೆಳಗಿನಲ್ಲಿ ಎಚ್ಚೆತ್ತು ಬೆಳಗಾದ ಅರಿವು ಆಚರಣೆಯಾಗಿ ಸರವಾಂಗದಿಂದ ಹರಿದರೆ ಅದೇ ಪರಿಪೂರ್ಣ ದಿವ್ಯಜೀವನ.

ಈ ದಿವ್ಯಜೀವನದಲ್ಲಿ ಅಂತರಂಗದ ಅರಿವು ಬೇರಲ್ಲ, ಬಹಿರಂಗದ ಆಚರಣೆ ಬೇರಲ್ಲ, ಅರಿವು ಆಚಾರದ ಪ್ರಾಣ; ಆಚಾರ ಅರಿವಿಗೆ ಅಂಗ, ದೇಹದಲ್ಲಿ ಪ್ರಾಣ ಚೈತನ್ಯ ತುಂಬಿರುವಂತೆ, ಕ್ರಿಯಾಚರಣೆಯೆಲ್ಲ ಅರಿವುಮಯ. ಅರಿವಿನ ಬೆಳಗುಮಯ, ಈ ಪರಿಪೂರ್ಣ ದಿವ್ಯ ಜೀವನವೆಂದರೆ ದಿವ್ಯಜ್ಞಾನ. ದಿವ್ಯ ಶಕ್ತಿ,ದಿವ್ಯಯೋಗ. ದಿವ್ಯ ಭಕ್ತಿ. ದಿವ್ಯ ಪೂಜೆ.

ಈ ಜ್ಞಾನ ಭಕ್ತಿ ಶಕ್ತಿ ಪೂಜೆ ಧ್ಯಾನ ಯೋಗ. ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ ಹಗಲು ರಾತ್ರಿ ಎನ್ನದೆ ನಿತ್ಯ ನಿರಂತರವಾಗಿ ನಡೆಯುತ್ತದೆ. ಈ ದಿವ್ಯ ಜೀವನದಲ್ಲಿ, ದೇಹ ಕರಣೇಂದ್ರಿಯಗಳ ಕತ್ತಲೆಯನ್ನು ಕಳೆದು, ರಾಗ ದ್ವೇಷ ಬೇಕು ಬೇಡಗಳ ಸೀಮೆಯ ದಾಟಿ, ದಿವ್ಯ ಸಾಮ್ರಾಜ್ಯದಲ್ಲಿ ನೆಲೆಯಾಗಿ ನಿಂದಿರುವ ಈ ದಿವ್ಯ ಜೀವನದ ವಿಶುದ್ಧಿಯಲ್ಲಿ, ಇದ್ಧರೆ ಆತ ಮಹಾ ಜ್ಞಾನಿ. ಜೀವನ ಸಾಧನೆಯಲ್ಲಿ ವಿಸ್ತಾರದಲ್ಲಿ ಕತ್ತಲೆಯ ಕುನ್ನಿಗಳಾದ ಅನೀತಿ , ಅತ್ಯಾಚಾರ, ಅನಾಚಾರ, ಅನ್ಯಾಯ, ಆಲಸ್ಯ, ಪರಪೀಡೆ, ಪರಶೋಷಣೆ, ಧರ್ಪ, ಮೋಸ, ವಂಚನೆ, ಇದ್ದಲ್ಲಿ ಅತನಲ್ಲಿರುವ ಜ್ಞಾನವೆಲ್ಲ ಶ್ವಾನಜ್ಞಾನವಾಗುತ್ತದೆ. ಅಮೃತ ಸಾಗರದಲ್ಲಿ ಬೇವಿನ ಬೀಜ ವುಂಟೆ.!? ಎಂದು ಹೇಳಿದರು ಶರಣರು..!

  • # ಶ್ರೀ ಬಸವಾಂಜಲಿದೇವಿ ಮಾತಾಜೀ
  • ಪೀಠಾಧ್ಯಕ್ಷರು, ಶ್ರೀ ಬಸವಜ್ಞಾನ ಮಂದಿರ, ಮೈಸೂರು
  • # ನಿರೂಪಣೆ — ಕೆ.ಶಿವು.ಲಕ್ಕಣ್ಣವರ
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420