ಚಿತ್ತಾಪುರ: ಹಲಕರ್ಟಿ ಗ್ರಾಮದ ರೈತ ಕೃಷಿ ಕಾರ್ಮಿಕರ ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) SUCI (C) ಪಕ್ಷದ ವಾಡಿ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಆರ್. ಕೆ. ವೀರಭದ್ರಪ್ಪ ರವರು ಸಮಿತಿಯನ್ನು ಉದ್ಘಾಟಿಸುತ್ತಾ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ರೈತರ ವಿರೋಧಿ ಹಾಗೂ ಜನವಿರೋಧಿ ಕಾಯ್ದೆಗಳಾದ ನೀರಿನ ಖಾಸಗೀಕರಣ, ವಿದ್ಯುತ್ ಖಾಸಗೀಕರಣ, ಎಪಿಎಂಸಿಗೆ ತಿದ್ದುಪಡಿ, ಅಗತ್ಯ ವಸ್ತುಗಳು ತಿದ್ದುಪಡಿ, ಎಲ್ಲಾ ವಸ್ತುಗಳ ಬೆಲೆ ಏರಿಕೆ ಹೀಗೆ ಒಂದರ ಮೇಲೊಂದು ಕಾಯ್ದೆಗಳನ್ನು ಆಳುವ ಎಲ್ಲಾ ಪಕ್ಷಗಳು ಜಾರಿ ಮಾಡುತ್ತಲೇ ಬಂಡವಾಳಗಾರ ಸೇವೆ ಮಾಡುತ್ತಾ ಜನಸಾಮಾನ್ಯರ ಹಾಗೂ ರೈತರನ್ನು ಜೀವಂತ ಸಮಾಧಿ ಮಾಡಲು ಹೊರಟಿವೆ. ಹೀಗಾಗಿ ರೈತರ ಹಾಗೂ ಗ್ರಾಮೀಣ ಬಡವರ ಮೇಲೆ ಆಗುವ ಅನ್ಯಾಯವನ್ನು ಪ್ರತಿರೋಧಿಸಲು ರೈತಸಂಘ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಮುಂದಿನ ಹೋರಾಟಗಳನ್ನು ರೂಪಿಸೋಣ ಎಂದರು.
ನಂತರ, ಹಲಕರ್ಟಿ ಗ್ರಾಮದ ನೂತನ ರೈತರ ಗ್ರಾಮಸಮಿತಿಯನ್ನು ರಚಿಸಲಾಯಿತು. ಪದಾಧಿಕಾರಿಗಳನ್ನು ಆರ್ ಕೆ ಎಸ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಗುಂಡಣ್ಣ ಕುಂಬಾರ್ ಅವರು ಆಯ್ಕೆ ಮಾಡಿದರು.
ನೂತನ ಪದಾಧಿಕಾರಿ: ಅಧ್ಯಕ್ಷರು ಚೌಡಪ್ಪ ಗಂಜಿ, ಉಪಾಧ್ಯಕ್ಷರು ದೊಡ್ಡಪ್ಪ ಹೊಸೂರ, ಅಯ್ಯಪ್ಪ ಹುಳಗೋಳ, ಭೀಮಶಂಕರ್ ಇಸಬಾ, ಕಾರ್ಯದರ್ಶಿ : ಶಿವಕುಮಾರ ಆಂದೋಲ, ಸಹ ಕಾರ್ಯದರ್ಶಿ ಭೀಮಪ್ಪ ಮಾಟನಹಳ್ಳಿ, ಈರಪ್ಪ ಜೈನಾಪುರ, ವೀರೇಶ್ ನಾಲ್ವರ್, ಮಾಂತೇಶ್ ಹುಳಗೋಳ, ಮಂಜುನಾಥ್ ಹಿಟ್ಟಿನ, ನಾಗರಾಜ ಇಸಬಾ, ಮುನಿಂದ್ರ ಕೊಟ್ಟಿಗೆ, ಬಸಪ್ಪ ಇಸಬಾ, ವೀರಭದ್ರ ಹಿಟ್ಟಿನ, ವಿರುಪಾಕ್ಷಿ ಛತ್ರಿಕಿ, ಶಶಿಕುಮಾರ್ ಇಸಬಾ, ಮಹೆಬೂಬ್, ನಾಗರಾಜ ಇಸಬಾ, ಲಕ್ಷ್ಮಣ್ ಇಸಬಾ, ಸಾಬಣ್ಣ ಹೊಸೂರ್, ಗಿರಿಯಪ, ಶಿವಯೋಗಿ ಬಳ್ಳ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…