ಕಲಬುರಗಿ: ಅಧಿಕ ಬಿಸಿಲು ಈ ಬಾರಿ ಕಲಬುರಗಿ ಹಾಗೂ ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳನ್ನು ಕಾಡುತ್ತಿದ್ದರೂ ಸಹ ರಾಜ್ಯ ಸರ್ಕಾರ ದಿಲ್ಲಿ ಬಿಸಿಲಿಗೆ ಹೋಲಿಕೆ ಮಾಡುತ್ತ ಕಳೆದ 40 ವರ್ಷದಿಂದ ಪ್ರತಿ ಬೇಸಿಗೆಯಲ್ಲೂ ಕಚೇರಿ ವೇಳೆ ಬದಲಾವಣೆಯ ಸವಲತ್ತು ಹೊಂದುತ್ತಿದ್ದ ಕಲಬುರಗಿ ಕದಾಯ ವಿಭಾಗದ 7 ಹಾಗೂ ಬೆಳಗಾವಿಯ 2 ಸೇರಿದಂತೆ 9 ಜಿಲ್ಲಗಳನ್ನು ವಂಚಿಸಿರೋದು ಬಿಸಿಲು ಜಿಲ್ಲೆಗಳ ನೌಕರರು ಹಾಗೂ ಸಾಮಾನ್ಯ ಜನತೆಗೆ ಸರ್ಕಾರ ಮಾಡಿರುವ ದ್ರೋಹ ಎಂದು ವಿಧಾನ ಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ದೂರಿದ್ದಾರೆ.
ನೌಕರರ ಸಂಘ ಕಚೇರಿ ವೇಳೆ ಬದಲವಣೆಗೆ ಕೋರಿದ್ದರೂ ಸಹ ಅದನ್ನು ತಿರಸ್ಕರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಆಯೋಗದವರು ದಿಲ್ಲಿಯಲ್ಲೂ ಕಲುಗುರಗಿ ವಿಭಗಕ್ಕಿಂತ ಅದಿಕ ಹಬಿಸಿಲಿದೆ, ಹಾಗಿದ್ದರೂ ಅಲ್ಲಿನ ಕಚೇರಿ ವೇಳೆ ಬದಲಾಗುತ್ತಾ? ಇನ್ಮುಂದೆ ಕಲಬುರಗಿ, ಬೆಳಗಾವಿ ವಿಭಾಗಗಳಲ್ಲಿಯೂ ಕಚೇರಿ ವೇಳೆ ಬದಲಾಗದು ಎಂದು ಏಕಾಏಕಿ ತಾನೇ ತೀರ್ಮಾವನಿಸಿದಂತಿದೆ. ಯಾಕೆ ಹೀಗೆ? ಈ ನಿರ್ಣಯ ಕೈಗೊಳ್ಳಲು ಇರುವ ಕಾರಣಗಳೇನು? ಇವನ್ನು ಹೇಳದೆ ಏಕಾಏಕಿ ಕಚೇರಿ ವೇಳೆ ಬದಲಿಸಿ ಸೂಚನೆ ಹೊರಡಿಸಿರೋದು ತಕ್ಷಣ ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶ ಮಾಡಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ದಿ.. ದೇವರಾಜ ಅರಸು ಸರ್ಕಾರದ ಕಾಲದಿಂದಲೂ ಬಿಸಿಲ ಬೇಗೆಯಿಂದ ನೌಕರರಿಗೆ ಹಾಗೂ ಜನತೆಗೆ ರಕ್ಷ್ಷೆ ನೀಡಲು, ಬಿಸಿಲಿಂದ ಆಗಬಹುದಾದ ತೊಂದರೆಗಳಿಂದ ಇವರಿಗೆ ಸುರಕ್ಷತೆ ಕಲ್ಪಿಸಲು ಕಚೇರಿ ವೇಳೆಯಲ್ಲಿಯೇ ಬದಲಾವಣೆಯ ಆದೇಶ ಅಂದು ಕೈಗೊಂಡು ಜಾರಿಗೆ ತರಲಾಗಿತ್ತು. ಇಂದು ಏನೂ ಯೋಚಿಸದೆ ಇದ್ದಂತಹ ಸವಲತ್ತಿಗೂ ಕೊಕ್ಕೆ ಹಾಕೋದು ಸರಿಯಾದ ಕ್ರಮವಲ್ಲ. ಇಂತಹ ನಿರ್ಣಯಕ್ಕೆ ವೈe್ಞÁನಿಕ ಅಥವಾ ಇರೆ ಯಾವ ಗಟ್ಟಿ ಆದಾರವೂ ಸರ್ಕಾರ ನೀಡಿಲ್ಲ.
ಮೇಲ್ನೋಟಕ್ಕೆ ಇದು ಕಲಬುರಗಿ ವಿಭಾಗವನ್ನು ಕೇಂದ್ರೀಕರಿಸಿ ಕೈಗೊಂಡ ನಿರ್ಣಯವಾಗಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಮುಖ್ಯಮಂತ್ರಿಗಳು ಇದನ್ನು ಗಮನಿಸಿ ತಕ್ಷಣ ಬಿಸಿಲಿನಿಂದ ನೌಕರರಿಗೆ, ಜನತತೆಗೆ ರಕ್ಷಿಸಲು ಕಚೇರಿ ವೇಳೆಯಲ್ಲಿ ಎಂದಿನಂತೆ ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಕಾಲ ಬೆ. 8 ರಿಂದ ಮಧ್ಯಾಹ್ನ 1. 30 ರ ವರೆಗೆ ಬದಲಾವಣೆ ಮಾಡಿ ಆದೇಶ ಹೊರಡಿಸಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಈಗಾಗಲೇ ಮಾರ್ಚ್ ತಿಂಗಳಲ್ಲೇ ರಣರಣ ಬಿಸಿಲಿಂದ ಕಲಬುರಗಿ , ಬೆಳಗಾವಿ ವಿಭಾಗದ ಜಿಲ್ಲೆಗಳು ಬಸವಳಿದಿವೆ. ಬಿಸಿಲ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗಿದೆ. ಬೆಳಗಿನ 7 ಗಂಟೆಗೆ ಶುರುವಾಗುವ ಬಿಸಿಲ ಪ್ರಖರತೆ 6 ಗಂಟೆಯವರೆಗೂ ಇರುತ್ತದೆ. ಹೀಗಿರುವಾಗ ಕೇರಿ ವೇಳೆ ಬೆಳಗಿನ ಹೊತ್ತು ಇದ್ದಲ್ಲಿ ನೌಕರರು ಹಾಗೂ ಸಾರ್ವಜನಿಕರು ಇಬ್ಬರಿಗೂ ಅನುಕೂಲವಾಗಲಿದೆ. ಸರ್ಕಾರ ವೇಳೆ ಬದಲಾವಣೆ ಮಾಡೋದು ಬೇಡವೆಂದು ಕೈಗೊಂಡ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…