ದೇವದುರ್ಗ: ತಾಲೂಕು ಜಾಲಹಳ್ಳಿ ಪಟ್ಟಣದ ಸುಪ್ರಸಿದ್ಧ ರಂಗನಾಥ ಸ್ವಾಮಿಯ ಜಾತ್ರೆ ನಿಮಿತ್ಯ ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಏ.೧೬ ರಂದು ರಥೋತ್ಸವ ನಡೆಯಲಿದೆ.
ರಥೋತ್ಸವಕ್ಕೆ ಜಾತ್ರೆ ಪ್ರತಿವರ್ಷ ಯುಗಾದಿ ಹಬ್ಬ ಮುಗಿದ ದಿನಗಳ ನಂತರ ಆರಂಭವಾಗುವ ಜಾಲಹಳ್ಳಿ ಜಾತ್ರೆಯು ಹಲವು ವಿಶೇಷತೆಗಳಿಂದ ಕೂಡಿರುತ್ತದೆ. ಸುಮಾರು ನೂರಕ್ಕೂ ಹೆಚ್ಚು ಹಳ್ಳಿಗಳ ಜನರು ಭಾಗವಹಿಸಿ ಈ ಜಾತ್ರೆಗೆ ಕಳೆ ನೀಡುವ ಮೂಲಕ ದೈವಿಕ ಶಕ್ತಿಗೆ ವಿಶೇಷ ಮಹತ್ವ ನೀಡುತ್ತಾರೆ.
ರಥೋತ್ಸವ ಮುಂಚೆ ಸತತ ೯ ದಿನಗಳ ಕಾಲ ರಂಗನಾಥ ಸ್ವಾಮಿಯ ವಾಹನಗಳು ಎಂದು ಅನಾದಿ ಕಾಲ ದಿಂದಲೂ ಪೂಜಿಸಿಕೊಂಡು ಬಂದಿರುವ ಮೀನು, ಆಮೆ,ನಾಗಪ್ಪ, ನವಿಲು,ಸಿಂಹ, ಕುದುರೆ, ಹನುಮಂತ, ಗರುಡುವಾನ,ಹಾಗೂ ಆನೆ,ಸೇರಿದಂತೆ ೯ ವಾಹನಗಳ ಸೇವೆ ಪ್ರತಿ ದಿನ ಅದ್ದೂರಿಯಾಗಿ ನಡೆಯುತ್ತದೆ.
ವಾಹನಗಳ ಸೇವೆಯಲ್ಲಿ ಪ್ರಮುಖವಾಗಿ ಐದು ಮತ್ತು ಏಳನೇ ದಿನ ನಡೆಯುವ ಹನುಮಂತ ಹಾಗೂ ಗರುಡುವಾಹನ ಸೇವೆ ಆತಂತ್ಯ ವಿಜೃಂಭಣೆಯಿಂದ ಜರುಗತ್ತದೆ. ಅದರಲ್ಲೂ ಗರುಡ ಮತ್ತು ಹನುಮ ವಾಹನೋತ್ಸವ ದಿನಗಳಂದು ವಿವಿಧ ಹಳ್ಳಿಗಳಿಂದ ಜನ ಸಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿರುತ್ತದೆ.
ವಿಶೇಷವಾಗಿ ರಥೋತ್ಸವದ ದಿನ ಹಾಗೂ ಅದರ ಹಿಂದಿನ ದಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗುವ ನೀರಿನಾಟ ಜಿಲ್ಲೆಯಾಧ್ಯಾಂತ ಗಮನ ಸೆಳೆಯುತ್ತದೆ.
ಏ.೧೬ ರಂದು ರಥೋತ್ಸವ ಜರುಗಲಿದ್ದು, ಜಾತ್ರೆಗಾಗಿ ಸಿದ್ಧತೆಗಳು ನಡೆದಿದ್ದು, ಪಟ್ಟಣ ಸಿಂಗಾರಗೊಳ್ಳುತ್ತಿದೆ. ಜಾತ್ರೆ ಅಂಗವಾಗಿ ನಡೆಯುವ ಜಾನುವಾರುಗಳ ಮಾರಾಟ ಮತ್ತು ಖರೀದಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…