ಸೇಡಂ: ನಾವು ದೇಶ, ಭಾಷೆ, ಭೂಮಿ, ನದಿ ಸೇರಿದಂತೆ ಎಲ್ಲವನ್ನು ಮಾತೆಯ ರೂಪದಲ್ಲಿ ಕಾಣುತ್ತೇವೆ. ಆದರೆ ಹೆಣ್ಣು ಮಗು ಹುಟ್ಟಿದರೆ ಹೋರೆ, ಹುಣ್ಣು ಎಂದು ಭಾವಿಸುವ ಕಾಲ ಒಂದಿತ್ತು. ಇಂದು ಕಾಲ ಬದಲಾಗಿದೆ ಹೆಣ್ಣು ಮಗು ಹೆತ್ತರೆ ಸಂಭ್ರಮ ಪಡುವ ಅನೇಕ ಜನರು ನಮಗೆ ಕಾಣಸಿಗುತ್ತಾರೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಗನ್ನಾಥ ತರನಳ್ಳಿ ಹೇಳಿದರು.
ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಕರ್ತ ಸುಧೀರ ಬಿರಾದಾರ ಪುತ್ರಿ ವಿಸ್ಮಯಳ ಜನ್ಮದಿನದ ಅಂಗವಾಗಿ ಹೆಣ್ಣು ಹೆತ್ತ ಐವರು ತಾಯಂದಿರಿಗೆ ಸನ್ಮಾನ ಕಾರ್ಯಮದಲ್ಲಿ ಮಾತನಾಡಿದ ಅವರು, ಕೆಲವು ಕಡೆ ಹೆಣ್ಣು ಹೆತ್ತರೆ ಏನೋ ತಪ್ಪು ಮಾಡಿದ್ದಾಳೆ ಎನ್ನುವ ರೀತಿಯಲ್ಲಿ ಮನೆಮಂದಿಯಲ್ಲಾ ನೋಡುತ್ತಿದ್ದರು. ಆದರೆ ಇದೀಗ ಕಾಲ ಬದಲಾಣೆಯಾಗಿದೆ, ಭೂಮಿ ಮಾತ್ರವಲ್ಲ ಬಾಹ್ಯಾಕಾಶದವರೆಗೆ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಹೆತ್ತ ತಂದೆ ತಾಯಿ ಅತ್ಯಂತ ಸಂತೋಷದಿಂದ ಇದ್ದಾರೆ.
ಕೆಲವು ಮನೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳೇ ಆಸರೆಯಾಗಿದ್ದಾರೆ ಎನ್ನುವುದು ಅಲ್ಲಲ್ಲಿ ನಾವು ಕಾಣುತ್ತೇವೆ. ಇಂದು ಪತ್ರಕರ್ತ ಸುಧೀರ ತಮ್ಮ ಮಗಳ ಜನ್ಮದಿನದಂದು ಹೆಣ್ಣು ಮಕ್ಕಳನ್ನು ಹೆತ್ತ ಐವರು ತಾಯಂದಿರಿಗೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಚಿತ್ರವುಳ್ಳ ಬೆಳ್ಳಿ ಪದಕ, ಸಿಹಿ ನೀಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದು ಹೆಮ್ಮೆಪಡುವ ವಿಷಯ. ಕೆಲವು ಕಡೆಗಳಲ್ಲಿ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಬಿಸಾಡುವುದು, ಮಗುವನ್ನು ಹೆತ್ತು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ದಯವಿಟ್ಟು ಇಂತಹ ಮಹಾಪಾಪದ ಕೆಲಸ ಯಾರೂ ಸಹ ಮಾಡಬಾರದು ಎಂದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಶಿವುಕುಮಾರ ನಿಡಗುಂದಾ, ಪ್ರಧಾನ ಕಾರ್ಯದರ್ಶಿ ಶರಣು ಮಹಾಗಾಂವ, ಪತ್ರಕರ್ತರಾದ ಅವಿನಾಶ ಬೋರಂಚಿ, ಸುಧೀರ ಬಿರಾದಾರ, ಕಾರ್ಯಾಲಯದ ಸಿಬ್ಬಂದಿಗಳಾದ ನಾಗಮ್ಮ, ಮಹೇಶ್ವರಿ, ಶಶಿಕಾಂತ ಗುತ್ತೇದಾರ, ಮಲ್ಲೇಶ ಊಡಗಿ, ಸಿದ್ದಯ್ಯ ಸ್ವಾಮಿ, ಗುರುದೇವಿ ಸೇರಿದಂತೆ ಇನ್ನಿತರರಿದ್ದರು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…