ಭಾಲ್ಕಿ: ವಚನ ಜಾತ್ರೆ-೨೦೨೨ ಹಾಗೂ ಡಾ.ಚನ್ನಬಸವ ಪಟ್ಟದ್ದೇವರ ೨೩ನೇ ಸ್ಮರಣೋತ್ಸವದ ಉದ್ಘಾಟನಾ ಸಮಾರಂಭ ಜ್ಯೋತಿ ಪ್ರಜ್ವಲನೆಯ ಮುಖಾಂತರ ಉದ್ಘಾಟಿಸಿ, ನಾಡೋಜ ಗೊ.ರು.ಚನ್ನಬಸಪ್ಪನವರು ಇಂದು ಎಲ್ಲೆಡೆ ಅನಾಚಾರ, ಭೃಷ್ಟಾಚಾರ, ಅನೈತಿಕ, ಘಟನೆಗಳು ನಡೆದು ನಿಜವಾದ ಅರ್ಥದಲ್ಲಿ ಮಾನವ ಮಾನಸಿಕ ಒತ್ತಡದ ಹುತ್ತಕ್ಕೆ ಬಿದ್ದಂತಾಗಿದೆ. ಇಂತಹ ಹುತ್ತದಿಂದ ಹೊರಬರುವ ಏಕೈಕ ಮಾರ್ಗವೆಂದರೆ, ಶರಣರ ವಚನಗಳ ಅಧ್ಯಯನ. ಇಂತಹ ವಚನ ಸಾಹಿತ್ಯ ಅದೊಂದು ವಿನೂತನ ಸಂವಿಧಾನ. ಸಾರ್ವಕಾಲಿಕವಾಗಿ ಸಲ್ಲುವ ಮಾರ್ಗ ಈ ಸಾಹಿತ್ಯದಲ್ಲಿದೆ ಎಂದರು.

ದಿವ್ಯಸನ್ನಿಧಾನವಹಿಸಿದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಕರ್ನಾಟಕದಲ್ಲಿ ಮೊಟ್ಟ ಮೊದಲು ಬಸವಣ್ಣಣವರೆ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೆ ಏಕೈಕ ದೈವ ಎಂದು ನಂಬಿ, ನಡೆದ ಮಠಾಧೀಶರೆಂದರೆ, ಸದ್ಗುರುಗಳಾದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು. ಅವರ ೨೩ನೆಯ ಸ್ಮರಣೋತ್ಸವವನ್ನು ವಚನ ಜಾತ್ರೆಯಾಗಿ ಆಚರಿಸುತ್ತಿರುವುದು ಅವರ ಬಸವನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಇಂದು ಎಲ್ಲರೂ ವಚನ ಸಾಹಿತ್ಯವನ್ನು ಓದಿ ಬಸವಾದಿ ಶರಣರ ಮಾರ್ಗದಲ್ಲಿ ನಡೆದರೆ ವಿಶ್ವಶಾಂತಿ ಎಲ್ಲಡೆ ನೆಲೆಸುವುದು ಎಂದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿಯಲ್ಲಿ ಆಕ್ರಮ: ಕಾಂಗ್ರೆಸ್ ಮುಖಂಡನ ಬಂಧನ

ಅನುಭಾವ ನುಡಿಗಳಲ್ಲಿ ಸಾಹಿತಿ ಡಾ.ಬಸವರಾಜ ಸಾದರ ವಚನಗಳನ್ನು ಕೇವಲ ನುಡಿದರೆ ಮಾತ್ರ ಸಾಲದು. ಅದು ನಮ್ಮ ನಿತ್ಯ ಆಚರಣೆಯಲ್ಲಿ ಬಂದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಭಾಲ್ಕೇಶ್ವರ ಶುಗರ‍್ಸ ಅಧ್ಯಕ್ಷ ಪ್ರಕಾಶ ಖಂಡ್ರೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಬಸವರಾಜ ಸಾದರ ವಿರಚಿತ ವಚನ ವರ್ಷಾರ್ಥ, ಪೂಜ್ಯ ಡಾ.ಬಸವಲಿಂಗ ಪಟ್ಟದದೇವರು ವಿರಚಿತ ಮಕ್ಕಳಿಗಾಗಿ ಪಂಚಾಚಾರ ಲೋಕಾರ್ಪಣೆ ಮಾಡಲಾಯಿತು.

ವೇದಿಕೆಯಲ್ಲಿ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಹುಲಸೂರು, ಪೂಜ್ಯ ಅಭಿನವ ಷಣ್ಮುಖ ಸ್ವಾಮಿಗಳೂ ಕೌಲಗಾ, ಪೂಜ್ಯ ಸಿದ್ಧರಾಮೇಶ್ವರ ಪಟ್ಟದ್ದೇವರು ಗೋರಚಿಂಚೋಳಿ, ಪೂಜ್ಯ ಸಿದ್ಧರಾಮೇಶ್ವರ ಶರಣರು ಬೆಲ್ದಾಳ, ಪೂಜ್ಯ ಪಂಚಾಕ್ಷರಿ ಸ್ವಾಮಿಗಳು, ಪೂಜ್ಯ ಅಕ್ಕ ಗಂಗಾಂಬಿಕಾ ದಿವ್ಯಸಮ್ಮುಖ ವಹಿಸಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಪೊಲೀಸರ ವಶಕ್ಕೆ

ಅತಿಥಿಗಳಾಗಿ ಡಿ.ಕೆ.ಸಿದ್ರಾಮ, ಗುರುನಾಥ ಕೊಳ್ಳುರು, ಜೈರಾಜ ಖಂಡ್ರೆ, ಬಾಬು ವಾಲಿ, ಅಧ್ಯಕ್ಷರು ನಗರಾಭಿವೃದ್ಧಿ ಬೀದರ, ಬಸವರಾಜ ವಂಕೆ ಅಧ್ಯಕ್ಷರು, ಪುರಸಭೆ ಭಾಲ್ಕಿ, ಡಾ.ಜಗನ್ನಾಥ ಹೆಬ್ಬಾಳೆ, ಭಾಗವಹಿಸಿದ್ದರು. ಕೀಶನರಾವ ಸರೋದೆ, ಎ.ಎಸ್.ಪಾಟೀಲ, ಮನಯ್ಯಾ ಬಡಿಗೇರ ಅವರಿಗೆ ನಾಡೋಜ ಜೆ.ಎಸ್. ಚಿತ್ರಕಲಾ ಪ್ರಶಸ್ತಿ ನೀಡಲಾಯಿತು. ಡಾ.ಸೋಮನಾಥ ನುಚ್ಚಾ, ಡಾ.ವೈಜಿನಾಥ ಭಂಡೆ, ಪ್ರೊ.ಚಂದ್ರಶೇಖರ ಬಿರಾದಾರ ಅವರಿಗೆ ಡಾ.ಜಿ.ಬಿ.ವಿಸಾಜಿ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.

ಶಕುಂತಲಾ ಬೆಲ್ದಾಳೆ ಬಸವಗುರುಪೂಜೆ ನೆರವೇರಿಸಿದರು. ಶಶಿಧರ ಕೋಸಂಬೆ ಸ್ವಾಗತಿಸಿದರು. ಕು.ಪುಷ್ಪಾಂಜಲಿ ಪಟ್ನೆ ವಚನ ನೃತ್ಯ ನಡೆಸಿಕೊಟ್ಟರು, ದೀಪಕ ಥಮಕೆ ನಿರೂಪಿಸಿದರು. ಮಲ್ಲಮ್ಮ ಆರ್. ಪಾಟೀಲ ವಂದಿಸಿದರು. ಕೊನೆಯಲ್ಲಿ ಜಮುರಾ ಸುತ್ತಾಟ ಕಲಾವಿದರಿಂದ ಸೋರುತಿಹದು ನಾಟಕ ಪ್ರದರ್ಶನಗೊಂಡಿತು.

ಪ್ರಭಾತ ಪಥಸಂಚಲನ: ಇಂದು ಬೆಳಿಗ್ಗೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಪ್ರಭಾತ ಪಥಸಂಚಲನ ಯಶಸ್ವಿಯಾಗಿ ನಡೆಯಿತು. ಈ ಪಥಸಂಚಲನ ನಂತರದಲ್ಲಿ ಷಟ್‌ಸ್ಥಲ ಧ್ವಜಾರೋಹಣವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಆಯುಕ್ತ ರಮೇಶ ಕೋಲಾರ ನೆರವೇರಿಸಿದರು. ರಾಜಶೇಖರ ಅಷ್ಟೂರೆ, ಬಸವಗುರುಪೂಜೆ ನೆರವೇರಿಸಿದರು. ಗಣ್ಯಮಾನ್ಯರಾದ ಪ್ರಸನ್ನ ಖಂಡ್ರೆ, ಸಾಗರ ಖಂಡ್ರೆ, ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ, ಕಿರಣ ಖಂಡ್ರೆ, ಓಂಪ್ರಕಾಶ ರೊಟ್ಟೆ, ವಿಜಯಕುಮಾರ ಪರಮಾ, ಬಾಬುರಾವ ಧೂಪೆ ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು.

ಇದನ್ನೂ ಓದಿ: 2.5 ಲಕ್ಷ ಯುವ ಜನತೆಗೆ ತರಬೇತಿ ನೀಡುವ ಗುರಿ: ಬಸವರಾಜ ಬೊಮ್ಮಾಯಿ

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420