ಶಹಾಬಾದ: ಡಾ.ರಾಜಕುಮಾರ ಅವರು ಭೂಮಿಗೆ ಬೀಜವಾಗಿ ಬಿದ್ದು ವೃಕ್ಷವಾಗಿ ಬೆಳೆದ ಅಪ್ಪಟ ಕಲಾವಿದ. ಕನ್ನಡ ಜನತೆಗೆ ಕನ್ನಡದ ಕಂಪನ್ನು ಪಸರಿಸಿದ ಮಹಾನ್ ಚೇತನ ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.
ಅವರು ರವಿವಾರ ಆರ್ಯ ಈಡಿಗ ಸಮಾಜದ ವತಿಯಿಂದ ನಗರದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಡಾ.ರಾಜಕುಮಾರ ಮಾರ್ಗದಲ್ಲಿ ವರನಟ ಡಾ. ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಶಹಾಬಾದ: ಕಸಾಪದಿಂದ ಡಾ. ರಾಜಕುಮಾರ್ 94ನೇ ಹುಟ್ಟುಹಬ್ಬದ
ನಾಡಿನಲ್ಲಿ ರಾಜಕುಮಾರ ಅವರನ್ನು ಗೊತ್ತಿಲ್ಲದವರು ಯಾರು ಇಲ್ಲ.ಅವರು ಎಷ್ಟೋ ಕಲಾವಿದರನ್ನು ಮಿಂಚುವಂತೆ ಮಾಡಿರುವುದು ಮಾತ್ರ ಸತ್ಯ. ಅವರ ಸರಳ ವ್ಯಕ್ತಿತ್ವದಿಂದ ಅವರಿಗೆ ಯಾರು ಶತ್ರುಗಳಿರಲಿಲ್ಲ.ಅವರ ವ್ಯಕ್ತಿತ್ವ ಕಂಡು ಕಾಡುಗಳ್ಳ ವೀರಪ್ಪನ ಅವರನ್ನು ಬಿಟ್ಟಿರುವುದು ನಮಗೆಲ್ಲ ಗೊತ್ತಿರುವ ವಿಚಾರ.ಸಮಾಜವನ್ನು ಪ್ರತಿಸುವುದರ ಜತೆಗೆ ಕನ್ನಡ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು.ಅಲ್ಲದೇ ಗೋಕಾಕ ವರದಿ ಜಾರಿಯಾಗಲು ರಾಜಕುಮಾರ ಅವರೇ ಕಾರಣರಾಗಿದ್ದಾರೆ ಎಂದು ಮರೆಯಬಾರದೆಂದು ಹೇಳಿದರು.
ಬಸವರಾಜ ಗುತ್ತೇದಾರ ಮಾತನಾಡಿ, ಡಾ.ರಾಜಕುಮಾರ ಅವರು ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಸಂಬೋಧಿಸಿದ ಮಹಾನ್ ವ್ಯಕ್ತಿ. ಅವರು ನಿಧನರಾಗಿ ಸುಮಾರು ವರ್ಷ ಕಳೆದರೂ ಇಂದಿನ ಮಕ್ಕಳ ಬಾಯಿಯಲ್ಲಿ ಅವರ ಹೆಸರು ಅಜರಾಮರವಾಗಿ ಉಳಿದಿದೆ ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ʼಐ ಪರೀಕ್ಷೆ ಅಕ್ರಮದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಹೇಳಿದೇನೂ?
ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಭೀಮಯ್ಯ ಗುತ್ತೇದಾರ ಮಾತನಾಡಿ, ಡಾ.ರಾಜ್ಕುಮಾರ್ ಅವರು ಎಲ್ಲರಿಗೂ ಚಿರಪರಿಚಿತರು. ಅವರು ನಟಿಸುತ್ತಿದ್ದ ಚಿತ್ರಗಳು ಕೌಟುಂಬಿಕ ಹಿನ್ನೆಲೆಯ ಕಥಾಹಂದರ ಹೊಂದಿದ್ದವು ಹಾಗೂ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಉತ್ತಮ ಭಾವನೆಯ ಚಿತ್ರಗಳಾಗಿದ್ದವು.ಅವರಿಲ್ಲದೇ ಇಂದು ಅಂತಹ ಕೌಟುಂಬಿಕ ಹಾಗೂ ಮೌಲ್ಯಗಳನ್ನು ಬಿತ್ತುವ ಚಲನಚಿತ್ರಗಳು ಮಾಯವಾಗಿವೆ ಎಂದು ಹೇಳಿದರು.ಡಾ ರಾಜಕುಮಾರ್ ಅವರ ಜನ್ಮದಿನ ಆಚರಿಸಲಾಯಿತು.
ಶಹಾಬಾದ ಆರ್ಯ ಈಡಿಗ ಸಮಾಜದ ಉಪಾಧ್ಯಕ್ಷ ಅಶೋಕ ಗುತ್ತೇದಾರ, ಸಾಯಿ ಕುಮಾರ ಗುತ್ತೇದಾರ, ವಿಶ್ವರಾಧ್ಯ ಗುತ್ತೇದಾರ, ಆಕಾಶ ಗುತ್ತೇದಾರ, ಪವನ್ ಕುಮಾರ, ವಿಶ್ವ ಕಟ್ಟಿಮನಿ, ಉತ್ತಮ ಗುತ್ತೇದಾರ, ಪ್ರೇಮ್ ಕುಮಾರ ಗುತ್ತೇದಾರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…