ಬಿಸಿ ಬಿಸಿ ಸುದ್ದಿ

ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಪರಿಹಾರಿಕೆ ಒತ್ತಾಯ: ಗ್ರಾಮದ ಅನೇಕ ಬಡವರ ಮನೆಗಳ ಪತ್ರಾ ಹಾರಿ ಮನೆಯಲ್ಲಿನ ಸಾಮಗ್ರಿ ಧ್ವಂಸಗೊಂಡು ನಷ್ಟವಾಗಿವೆ. ಹಾರಿದ ಅನೇಕರ ಪತ್ರಗಳು ಸಿಕ್ಕಿಲ್ಲ ಇದರಿಂದ ಬಡವರಿಗೆ ತೊಂದರೆ ಆಗಿದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಸಂತ್ರಸ್ತರ ಬಡವರ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಂಖರರಾವ್ ದೇಶಮುಖ ಅವರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಆಳಂದ: ತಾಲೂಕಿನ ನಿರುಗಡಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಬಿಸಿದ ರಬಸದ ಬಿರುಗಾಳಿ, ಆಲಿಕಲ್ಲು ಮಳೆಗೆ ಸುಮಾರು ೬೦ಕ್ಕೂ ಹೆಚ್ಚು ಮನೆಗಳ ಪತ್ರಾ ಹಾರಿಹೋಗಿವೆ. ಅಲ್ಲದೆ, ೨೫ಕ್ಕೂ ಹೆಚ್ಚು ಗಿಡ, ಮರಗಳು ಹಾಗೂ ೧೦ ವಿದ್ಯುತ್ ಕಂಬಗಳು ಉರುಳಿ ಬಿದ್ದುಕೊಂಡಿವೆ. ಇದೇ ವೇಳೆ ಪತ್ರಾ ಹಾರಿ ಹಲವರಿಗೆ ಗಾಯಗೊಂಡ ವರದಿಯಾಗಿದೆ.

ಹಠಾತಾಗಿ ಗ್ರಾಮದಲ್ಲಿ ಆವರಿಸಿದ ಬಿರುಗಾಳಿಗೆ ಹಕ್ಕಾಬೀಕ್ಕಿಯಾದ ಜನರು, ನೋಡು ನೋಡುತ್ತಿದ್ದಂತೆಯೇ ಒಬ್ಬರ ಪತ್ರ ಇನ್ನೊಬ್ಬರ ಮನೆಯ ಮೇಲೆ ಹಾರಾಡಿದ್ದು ಅನೇಕ ಜೀವ ಉಳಿಸಿಕೊಳ್ಳಲು ಪರದಾಡಿದ್ದರಲ್ಲದೆ, ಹಾರಿದ ಪತ್ರಾಗಳು ಸಿಗದೆ ಕಂಗಾಲಾಗಿದ್ದಾರೆ. ಅಲ್ಲದೆ, ಹೆಚ್ಚಿನ ಜನ, ಜಾನುವಾರು ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಸೇಡಂನಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ

ಗ್ರಾಮದಲ್ಲಿನ ಅನೇಕ ಬಡವರ ಪತ್ರಾಟೀನ ಶೆಡ್ಡ್ ಮನೆಗಳು ಮೇಲಿನ ಪತ್ರಾಗಳು ಹಾರಿ ಬಡವರ ಬದಕು ಮೂರಾಬಟ್ಟೆಯಾಗಿಸಿ ನಷ್ಟ ಅನುಭವಿಸುವಂತೆ ಮಾಡಿದೆ ಎಂದು ಗ್ರಾಪಂ ಸದಸ್ಯ ಮಂಜುನಾಥ ಮೂಲಗೆ ಅವರು ಹೇಳಿಕೊಂಡಿದ್ದಾರೆ.

ಶ್ರೀಕಾಂತ ಚನ್ನಯ್ಯಾ ಎಂಬುವರ ಮನೆಯ ಪತ್ರಾ ಹಾರಿ ಮನೆಯಲ್ಲಿದ್ದ ಮಗುವಿನ ತೆಲೆಗೆ ಕಲ್ಲುಬಿದ್ದು ಹಾಗೂ ಮಗಳ ಬೇನ್ನು ಮೇಲೆ ಕಲ್ಲು ಬಿದ್ದು ಬೇನ್ನಿಗೆ ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜ ಬಂಗರಗಿ ಅವರ ಎತ್ತಿಗೆ ಹಾರಿಬಂದ ಪತ್ರ ಬಡಿದು ಸ್ಥಳದಲ್ಲೇ ಕಾಲು ಕಡಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

ಜಗನಾಥ ಮೂಲಗೆ ಮನೆಯ ಎಲ್ಲ ಪತ್ರಗಳು ಹಾರಿಹೋಗಿ ಅರ್ಧ ಕಿ.ಮೀ ದೂರದಲ್ಲಿ ಬಿದ್ದಿವೆ. ಪತ್ರ ಕಟ್ಟಿಯ ಅಡ್ಡಿಗೆ ಹಾಕಿದ ಫ್ಯಾನ್ ತೋಟಲು ಕಿತ್ತು ಹಾರಿಹೋಗಿ ದೂರದಲ್ಲಿ ಬಿದ್ದುಕೊಂಡಿವೆ. ದತ್ತಾ ಪಾತ್ರೆ ಎಂಬುವರ ಕಿರಾಣಿ ಅಂಗಡಿ ಎಲ್ಲಾ ಪತ್ರಗಳು ಹಾರಿ ಗೋಡೆ ಉರುಳಿಬಿದ್ದಿದೆ. ಈ ವೇಳೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಶ್ರೀಕಾಂತ ನವಣೆ ಎಂಬುವರ ಎಲ್ಲ ಪತ್ರ ಹಾರಿವೆ. ಹಣಮಂತ ಗಾಡೆಕರ್, ಶಿವಾನಂದ ನಾಗೂರೆ, ಬಸವರಾಜ ಜಮಗೆ ಪತ್ರಾ ಮತ್ತು ಶಿವಾಜಿ ಪಾತ್ರೆ ಅವರ ಸೀಮೆಂಟಿನ ಪತ್ರ ಹಾರಿ ಗೋಡೆ ಕುಸಿದು ಬಿದ್ದು ಕಿರಾಣಿ ಅಂಗಡಿಯ ಸಾಮಗ್ರಿಗಳ ಹಾನಿಯಾಗಿವೆ. ಮಲ್ಲಿನಾಥ ಬಿರಾದಾರ, ಪ್ರಕಾಶ ಬಿರಾದಾರ ಹುಸೇನಿ ಶೇಖ ಅವರ ಮನೆಯ ಹಾರಿದ ಹೋಗಿದ್ದ ಪತ್ರಾಗಳು ಸಿಕ್ಕಿಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಬಸವರಾಜ ಕೋರೆ ಎಂಬುವರ ೮ ಪತ್ರಗಳು ಹಾರಿಹೋಗಿವೆ ಮನೆಯಲ್ಲ ಬಯಲಾಗಿದೆ. ಈ ಅವಘಡದಿಂದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ, ಗ್ರಾಮಸ್ಥರು ಕತ್ತಲೆಯಲ್ಲಿ ಕಾಲಕಳೆಯುಂತಾಗಿ ಎರಡೂ ದಿನಗಳಾದರು ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಗ್ರಾಮದ ಯುವಕರೊಬ್ಬರು ಗ್ರಾಮಲೇಖಪಾಲಕರ ಗಮನಕ್ಕೆ ತಂದಾಗ ತಹಸೀಲ್ದಾರ ಆದೇಶವಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರಾದರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

7 hours ago