ಬಿಸಿ ಬಿಸಿ ಸುದ್ದಿ

ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾದ ಡೇಟಾ ಎನೆಲೆಟಿಕ್ಸ್: ಮೋರೆ

ಕಲಬುರಗಿ: ಮಹಾವಿದ್ಯಾಲದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಇನಸ್ಟೀಟ್ಯೂಟ್ ಆಫ್ ಇಂಜಿನಿಯರಿಂಗ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನಿಡಲಾಯಿತು.

ಭಾರತದ ಆರ್ಥಿಕ ಬೇಳವಣಿಗೆಯಲ್ಲಿ ಡೇಟಾ ಎನೆಲೆಟಿಕ್ಸ್ ನ ಮಹತ್ವ ಮತ್ತು ಪರಿಣಾಮ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಇನಸ್ಟೀಟ್ಯೂಟ್ ಆಫ್ ಇಂಜಿನಿಯರಿಂಗ್ನ ಬಿ.ಎಸ್. ಮೋರೆ ಅವರು ವಿದ್ಯಾರ್ಥಿಗಳು ಡೇಟಾ ಎನೆಲೆಟಿಕ್ಸನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ, ವಿಶ್ವದ ಪ್ರಭಲ ಎಂಟು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು ಡೇಟಾ ಎನೆಲೆಟಿಕ್ಸನಲ್ಲಿ ತನ್ನದೆ ಛಾಪು ಮೂಡಿಸಿದೆ ಎಂದು ಹೇಳಿದರು.

ಸ್ವಾಗದ ಭಾಷಣ ಮಾಡಿದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ಸರ್ವರಿಗೂ ಸ್ವಾಗತಿಸಿ ತಮ್ಮ ವಿಭಾಗದಲ್ಲಿ ವರುಷಕ್ಕೆ ಸುಮಾರು ಮೂರು ವಿಧ್ಯಾರ್ಥಿಗಳ ಗುಂಪುಗಳು ಡೇಟಾ ಎನೆಲೆಟಿಕ್ಸ್ ನ ಮೇಲೆ ಪ್ರೋಜೆಕ್ಟಗಳನ್ನು ಮಂಡಿಸುತ್ತಿದ್ದು, ಅವುಗಳು ಉತ್ತಮ ಪ್ರೊಜೆಕ್ಟ ಎಂಬ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿವೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಅಶೋಕ ಪಾಟೀಲ ಅವರು ತಮ್ಮ ವಿಚಾರವನ್ನು ಮಂಡಿಸಿ ಡೇಟಾ ಎನೆಲೆಟಿಕ್ಸ್ ಬ್ಯಾಂಕಿಂಗ್, ವೀಮಾ, ಆರೋಗ್ಯ ಹಾಗೂ ಕೃಷಿ ವಲಯಗಳಲ್ಲಿ ಮಾಡಿದ ಕ್ರಾಂತಿಕಾರಿ ಬೆಳವಣಿಗೆಗಳನ್ನು ಹಾಗೂ ಅವುಗಳಿಂದ ಭಾರತದ ಆರ್ಥಿಕ ಸುಧಾರಣೆಯನ್ನು ಉದಾಹರಣೆಯೊಂದಿಗೆ ವಿವರಿಸಿದರು. ಇನ್ನೊಬ್ಬ ಭಾಷಣಕಾರರದಾ ಉದಯ ಎಸ್. ಬಳಿಗಾರರ ಅವರು ಬಿಗ್ ಡೇಟಾ ಎನೆಲೆಟಿಕ್ಸ್‌ನ ಮೇಲೆ ಸವಿಸ್ತಾರ ವಿವರಣೆಯನ್ನು ನೀಡಿದರು.

ಅಧ್ಯಕ್ಷೀಯ ಭಾಷಣ ಮಂಡಿಸಿದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್. ಹೆಬ್ಬಾಳ ಅವರು ಮಾತನಾಡಿ ಮಾಹಿತಿ ವಿಜ್ಞಾನ ವಿಭಾಗವು ಸಕ್ರೀಯವಾಗಿ ವಿವಿಧ ತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ ಯಶಸ್ವಿಯತ್ತ ಸಾಗುತ್ತಿರುವುದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ. ಬಾಬುರಾವ ಸೇರಿಕಾರ ಹಾಗೂ ಸದಸ್ಯರಾದ ಹನುಮಯ್ಯ ಬೇಲೂರೆ ಅವರು ಉಪಸ್ಥಿತರಿದ್ದರು, ಸದಸ್ಯರಾದ ಡಾ.ಶ್ರೀಧರ ಪಾಂಡೆಯವರು ವಂದನಾರ್ಪಣೆ ಮಾಡಿದರು ಹಾಗೂ ಸಂಚಾಲಕರಾದ ವಿಭಾಗದ ಉಪ ಪ್ರಾಧ್ಯಾಪಕರಾದ ಮುಕುಂದ ಹರವಾಳಕರ ಮತ್ತು ಗುರಪ್ಪ ಕಲ್ಯಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಭಾದ ಡಾ.ವಿಶ್ವನಾಥ ಬುರಕಪಳ್ಳಿ, ನಿತಿನ ಕಟ್ಟಶೆಟ್ಟರ, ಶರಣಕುಮಾರ ಹುಲಿ, ಗೌರಿ ಪಾಟೀಲ, ರಶ್ಮೀ ತಳ್ಳಳಿ, ಗಂಗಾ ಧರಕ, ಗೀತಾ ವಿ.ಜಿ., ಮಲ್ಲಿಕಾರ್ಜುನ ರೆಡ್ಡಿ, ಶ್ರೀಮತಿ ಕವಿತಾ ಕೆ., ಅಂಬಾರಾಯ ಹಾಗೂ ಇತರರು ಈ ವಿಚಾರ ಸಂಕಿರಣದ ಉಸ್ತುವಾರಿಯನ್ನು ವಹಿಸಿದ್ದರು.

emedialine

Recent Posts

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

11 mins ago

ಸುರಪುರ:ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ

ಸುರಪುರ: ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ…

29 mins ago

ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಸುರಪುರ: ನಮ್ಮ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜೊರಿಗೊಳಿಸಿದ್ದು ರೈತರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ…

31 mins ago

ವಿದ್ಯಾರ್ಥಿನಿಯರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಸೈಕಲ್‍ ವಿತರಣೆ

ಕಲಬುರಗಿ: ನಗರದ ಎನ್.ವಿ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಂಗಣದಲ್ಲಿ ಎನ್.ವಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಗುಲಬರ್ಗ ನಾರ್ಥವತಿಯಿಂದ ವಿದ್ಯಾರ್ಥಿನಿಯರಿಗೆ…

37 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420