ಹೈದರಾಬಾದ್ ಕರ್ನಾಟಕ

ವಚನಗಳ ವೈವಿದ್ಯಮಯ ಆಯಾಮಗಳ ವಿಶೇಷ ಉಪನ್ಯಾಸ ಮಾಲಿಕೆಯ ಸಮಾರೋಪ

ಕಲಬುರಗಿ: ಭಾರತೀಯ ನಾಗರಿಕತೆಯುಜಗತ್ತಿನಇತರ ನಾಗರಿಕತೆಗಳಿಗಿಂತ ಸಧೃಡವಾಗಿದೆಅದಕ್ಕೆ ಮೂಲ ಕಾರಣ ಬುದ್ದ, ಬಸವಣ್ಣ, ರಾಮಾನುಜಾಚಾರ್ಯರಂತ ಸಮಾಜ ಸುಧಾರಕರು ಎಂದುಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಅವರು ಬಸವ ಸಮಿತಿಯಅನುಭವ ಮಂಟಪದಲ್ಲಿಕನಾಟಕಕೇಂದ್ರೀಯ ವಿಶ್ವವಿದ್ಯಾಲಯ ಹಾಗು ಬಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಗಳ ವೈವಿದ್ಯಮಯ ಆಯಾಮಗಳು ಕುರಿತುಎಪ್ರಿಲ್ ೩೦ ರಿಂದಮೇ ೨೮ ರ ವರೆಗೆ ನಡೆದವಿಶೇಷ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೆ ಸಂದರ್ಭದಲ್ಲಿಅವರುಡಾ. ವೀರಣ್ಣದಂಡೆಯವರು ರಚಿಸಿದ ಕಲ್ಯಾಣದ ಶರಣರುಪುಸ್ತಕವನ್ನು ಹಾಗು ಶರಣರ ನಾಮಾವಳಿಎಮ್ಪಿತ್ರಿ ಲೋಕಾರ್ಪಣೆಗೋಳಿಸಿದರು. ಅವರು ಮುಂದುವರೆದು ಮಾತನಾಡಿಬಸವಣ್ಣನವರುಜಾತಿರಹಿತ ಸಮ ಸಾಮಾಜ ನಿರ್ಮಾಣಕ್ಕಾಗಿ ನೀಡಿದ ಸಮಾನತೆ, ಭಾತೃತ್ವ, ಸ್ವಾತಂತ್ರ್ಯ ತತ್ತ್ವಗಳು ಇಂದಿನ ನಮ್ಮ ಸಂವಿಧಾನದ ಮೂಲ ತತ್ತ್ವಗಳಾಗಿವೆ. ಅಲ್ಲದೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳಲ್ಲಿ ಈ ತತ್ತ್ವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಸಮಾಜ ಸುಧಾರಣೆಯ ಪ್ರತಿಫಲವನ್ನುಇಂದು ನಾವು ಅನುಭವಿಸುತ್ತಿದ್ದೇವೆ.

ಅವರ ತತ್ತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ನಮ್ಮ ಯುವಪಿಳಿಗೆಗೆ ದಾರಿದೀಪಗಳಾಗಿವೆ. ಆದ್ದರಿಂದಕನಾಟಕಕೇಂದ್ರೀಯ ವಿಶ್ವವಿದ್ಯಾಲಯವು ಮುಂಬರುವ ಶೈಕ್ಷಣಿಕ ವರ್ಷದಿಂದಶರಣರ ವಚನಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು. ಇದರಿಂದ ನಮ್ಮ ವಿದ್ಯಾರ್ಥಿಗಳು ಈ ಮಾನವೀಯ ಮೌಲ್ಯಗಳ ಪ್ರಾಮುಖ್ಯತೆಯನ್ನುಅರಿತುಜೀವನದಲ್ಲಿ ಅಳವಡಿಸಿಕೋಳ್ಳಲಿದ್ದಾರೆ.

ವಚನಗಳು ಕೇವಲ ಕನ್ನಡಕ್ಕೆ ಸಿಮಿತವಾಗಿರದೆ ಭಾರತದ ವಿವಿಧ ಭಾಷೆಯ ಹಾಗೂ ಜಗತ್ತಿನಇತರ ಭಾಷೆಯಜನರಿಗೆತಲುಪಿಸಲು ಬಸವ ಸಮಿತಿ ಅವುಗಳ ಅನುವಾದಕರ‍್ಯಕೈಗೊಂಡಿರುವುದು ಶ್ಲಾಘನೀಯ. ಬಸವ ಸಮಿತಿಯೊಂದಿಗಿನ ಶೈಕ್ಷಣಿಕಒಡಂಬಡಿಕೆಯ ಅಂಗವಾಗಿ ಕನಾಟಕಕೇಂದ್ರೀಯ ವಿಶ್ವವಿದ್ಯಾಲಯವು ವಚನಗಳನ್ನು ಜಪನಿಸ್, ಸ್ಪ್ಯಾನಿಸ್ ಹಾಗು ಜರ್ಮನ್ ಭಾಷೆಗಳಿಗೆ ಅನುವಾದ ಮಾಡುವಕಾರ‍್ಯವನ್ನುಕೈಗೆತ್ತಿಕೊಂಡಿದೆ ಎಂದುಅವರು ಹೇಳಿದರು.

ಮುಖ್ಯ ಅಥಿತಿಗಳಾಗಿದ್ದ ಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪಿ. ಡೋಣೂರಅವರುಸಮಾರೋಪ ನುಡಿಗಳನ್ನಾಡಿ ವಚನಗಳು ಬೇರೆಯವರಿಗೆ ಹೇಳಲು ಬರೆದವುಗಳಲ್ಲ, ಬದಲಿಗೆ ಶರಣರುತಮ್ಮಆತ್ಮಸಾಕ್ಷಿಯನ್ನು ಉದ್ದೇಶಿಸಿ ತಮ್ಮನ್ನುತಾವು ಶುದ್ಧಿಕರಿಸಿಕೊರ್ಳಲು ಬರೆದವುಗಳಾಗಿವೆ. ಆದ್ದರಿಂದ ನಾವು ವಚನಗಳನ್ನು ಬೇರೆಯವರಿಗೆ ಹೇಲುವ ಬದಲು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಶರಣರುತಮ್ಮನ್ನುತಾವು ಪರಿಪೂರ್ಣಗೋಳಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆಒತ್ತು ನೀಡಿದರು. ಯಾರು ಸಮಾಜ ಸುಧಾರಣೆ, ನ್ಯಾಯ, ಸಮಾನತೆ, ಸತ್ಯಕ್ಕಾಗಿ ಪ್ರತಿಪಾದಿಸುತ್ತಾರೋಅವರನ್ನು ಸಮಾಜ ಪ್ರತಿರೋಧಿಸುತ್ತಾ ಬಂದಿದೆ. ಹಾಗೆ ಅಂದು ಸಮಾಜ ಶರಣರನ್ನು ಪ್ರತಿರೋಧಿಸಿತ್ತು. ಸಮಾಜ ಸುಧಾರಕರಾದವರುಇದನ್ನುಅರಿಯಬೇಕು ಮತ್ತು ಪ್ರತಿರೋಧಏದುರಿಸಲು ಸ್ತುತಿ ನಿಂದೆಗಳನ್ನು ಅನುಭವಿಸಲು ಸಿದ್ದರಿರಬೇಕು ಎಂದುಅವರು ಹೇಳಿದರು.

ಇದಕ್ಕೂ ಮುನ್ನ ಲೋಕಾರ್ಪಣೆಗೊಂಡಡಾ. ವೀರಣ್ಣದಂಡೆಯವರು ರಚಿಸಿದ ಕಲ್ಯಾಣದ ಶರಣರುಪುಸ್ತಕವನ್ನುಕುರಿತುಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದಡಾ. ವಿಕ್ರಮ ವಿಸಾಜಿಯವರು ಮಾತನಾಡಿ ೧೨ನೇ ಶತಮಾನದ ಶರಣರ ಸೂಚಿಇದಗಿದೆ. ಇದು ಸುಮಾರು ೧೬೦೦ ಕ್ಕಿಂತ ಹೆಚ್ಚು ಶರಣರ ಹೆಸರು, ಮೂಲ ಹಾಗು ಅವರ ಕಸುಬಿನ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಇದರ ವಿಶೇಷವೆಂದರೆ ಭಾರತದಯಾವುದೆ ಸಾಹಿತ್ಯ ಪರಂಪರೆಯಲ್ಲಿಇರದಷ್ಟು ಶರಣರ/ಲೇಖಕರ ಮಾಹಿತಿಇದರಲ್ಲಿದೆ ಎಂದುಅವರು ಹೇಳಿದರು.

ಇದೆ ಸಂದರ್ಭದಲ್ಲಿಕೇಂದ್ರ ಬಸವ ಸಮಿತಿಯ, ಅಧ್ಯಕ್ಷರಾದ ಶ್ರೀ. ಅರವಿಂದಜತ್ತಿಯವರು ಮಾತನಾಡಿ ಈ ವಿಶೇಷ ಉಪನ್ಯಾಸ ಮಾಲಿಕೆಯ ಲೇಖನಗಳನ್ನು ಜುಲೈ ತಿಂಗಳಲ್ಲಿ ಹೊರಬರಲಿರುವ ಬಸವ ಪಥದ ೫೦೦ ನೇ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನಡಾ. ಜಯಶ್ರೀ ದಂಡೆಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಲೇಖಕರಾದಡಾ. ವೀರಣ್ಣದಂಡೆಯವರು ಮಾತನಾಡಿ ಪುಸ್ತಕದಕುರತುತಮ್ಮಅನುಭವವನ್ನು ಹಂಚಿಕೊಂಡರು. ಡಾ. ವಿಲಾಸವತಿ ಖೂಬಾ ಅವ್ವಾಅವರು ಸ್ವಗತಿಸಿದರು, ಶ್ರೀ. ಉದ್ದಂಡಯ್ಯನವರು ನೀರೂಪಿಸಿದರು ಹಾಗು ಡಾ. ಆನಂದ ಸಿದ್ದಮಣಿ ವಂದಿಸಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

60 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago