ಹಗರಿಬೊಮ್ಮನಹಳ್ಳಿ:- ಆನೆಗೊಂದಿ ಪಕ್ಕದ ಪಂಪಾ ಸರೋವರದ ಬಳಿಯ ಪುರಾತತ್ವ ಇಲಾಖೆಗೆ ಸೇರಿರುವ ಪುರಾತನ ಜಯಲಕ್ಷಿ ದೇಗುಲವನ್ನು ತರಾತುರಿಯಲ್ಲಿ ಸ್ಥಳೀಯ ಭಕ್ತರ ಗಮನಕ್ಕೂ ತಾರದೇ ಸಚಿವ ಶ್ರೀರಾಮುಲು ನೇತೃತ್ವದ ತಂಡದವರು ಜೀರ್ಣೋದ್ಧಾರ ನೆಪದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೇ ಸ್ಥಳಾಂತರಿಸಿದ್ದೇಕೆ? ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಪ್ರಶ್ನಿಸಿದ್ದಾರೆ.
ಹಿಂದುತ್ವ ಸಂಪ್ರದಾಯ ಆಚರಣೆ ಭಕ್ತಿಯ ಬಗ್ಗೆ ಮತ್ತೆ ಮಾತನಾಡುವ ಬಿಜೆಪಿಗರೇ ಜಯಲಕ್ಷಿ ದೇಗುಲವನ್ನು ಕನಿಷ್ಠ ಧಾರ್ಮೀಕ ವಿಧಿವಿಧಾನ ಅನುಸರಿಸದೇ ಸ್ಥಳಾಂತರಿಸಿರುವ ಮೂಲಕ ತಾವು ಏನು ಮಾಡಿದರೂ ಸರಿ ಮಾಡಿದ್ದೇ ಸಂಪ್ರದಾಯ ಎನ್ನುವಂತೆ ನಡೆದುಕೊಳ್ಳುತ್ತಿದ್ದು ಒಂದು ಬಾರಿ ಪುರಾತತ್ವ ಇಲಾಖೆ ವಶಪಡಿಸಿಕೊಂಡ ಮೇಲೆ ದೇಗುಲವನ್ನು ಯಥಾಸ್ಥಿತಿ ಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದ್ದು ಜೀರ್ಣೋದ್ಧಾರಕ್ಕೆ ಬೇರೆಯವರಿಗೆ ಅನುಮತಿ ನೀಡಿದ್ದೂ ಏಕೆ? ಎಂದು ಪತ್ರೇಶ್ ಕೇಳಿದ್ದಾರೆ
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತರಾತುರಿಯಲ್ಲಿ ಮೂರ್ತಿ ಸ್ಥಳಾಂತರ ಮಾಡಿರುವುದನ್ನು ನೋಡಿದರೆ ಇದು ನಿಧಿ ಶೋಧವೇ ಅಥವಾ ಶಕ್ತಿ ದೇವತೆಯನ್ನು ವೈಯುಕ್ತಿಕ ಹೋಮಹವನಕ್ಕೆ ಬಳಸಿಕೊಳ್ಳುವ ಪ್ರಯತ್ನವೇ ಎನ್ನುವ ಅನುಮಾನ ಜನರಲ್ಲಿ ಮೂಡಿದ್ದು ತಕ್ಷಣವೇ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕೆಂದು ಪತ್ರೇಶ್ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…
ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…
ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…
ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…
ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…