ಬಿಸಿ ಬಿಸಿ ಸುದ್ದಿ

ಒಳ್ಳೆಯ ಓದುಗಾರ ಒಳ್ಳೆಯ ಬರಹಗಾರನಾಗಬಲ್ಲ: ಡಾ. ಸಾದೀಕಾ ನವಾಬ

ಕಲಬುರಗಿ: ಸಾಹಿತ್ಯಕ್ಕೆ ಓದು ಮತ್ತು ವಿಭಿನ್ನ ವಿಚಾರಧಾರೆ ಅವಶ್ಯಕ. ಒಬ್ಬ ಒಳ್ಳೆಯ ಓದುಗಾರನೇ ಒಳ್ಳೆಯ ಬರಹಗಾರನಾಗಬಲ್ಲ. ಯಾವುದೇ ಭಾಷೆಯ ಬರವಣಿಗೆಯಾದರೂ ಅಷ್ಟೆ. ಓದುವುದರ ಜೊತೆಜೊತೆಗೆ ಆಲಿಸುವುದೂ ಕೂಡ ಅನಿವಾರ್ಯವಾಗಿದೆ. ಉರ್ದು ಭಾಷೆಯ ಸಾಹಿತ್ಯ ಅತಿ ಶ್ರೀಮಂತವಾಗಿದೆ. ಜಗತ್ತಿನ ಪುರಾತನ ಭಾಷೆಗಳಲ್ಲೊಂದಾದ ಉರ್ದು ಅನೇಕ ಸಾಹಿತಿಗಳನ್ನು ಜಗತ್ತಿಗೆ ನೀಡಿದೆ ಎಂದು ಮುಂಬಯಿಯ ಬುರ‍್ಹಾನಿ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಡಾ ಸಾದಿಕಾ ನವಾಬ ಇವರು ನುಡಿದರು.

ಇವರು ಸೋಮವಾರ (೪/೭/೨೦೨೨) ರಂದು ಸ್ಥಳೀಯ ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಉರ್ದು ವಿಭಾಗದ ವತಿಯಿಂದ ಏರ್ಪಡಿಸಿದ “ಸಾಹಿತ್ಯ ಸಭೆ”ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಕಾದಂಬರಿ ಹಾಗೂ ಸಣ್ಣ ಕತೆಗಳನ್ನು ಹೇಗೆ ಬರೆಯಬೇಕು ಎಂದು ವಿವರಿಸುತ್ತಿದ್ದರು.

ಅವರು ಪ್ರೇಮಚಂದರ ಬರವಣಿಗೆಯ ತುಣುಕುಗಳನ್ನು ಉದಾಹರಣೆಯ ಸಹಿತ ವಿವರಿಸಿದರು. ಲೇಖಕನು ರಚನಾತ್ಮಕವಾಗಿ ಬರೆಯವಾಗ ಪ್ರಾಮಾಣಿಕವಾಗಿದ್ದರೆ ಮಾತ್ರ ಬರವಣಿಗೆ ಲವಲವಿಕೆಯಿಂದ ಕೂಡಿರುತ್ತದೆ ಎಂದರು. ಒಳ್ಳೆಯ ಲೇಖಕನಾಗಲು ಆಲಿಸಿವಿದು ಅವಶ್ಯಕ, ವಿಷಯ ವಿಮರ್ಶೆ ಸಾಹಿತಿಯ ಜೀವಾಳ ಎಂದು ಅಭಿಪ್ರಾಯಟ್ಟರು. ಒಂದೇ ವಿಷಯದ ಕುರಿತು ವಿಭಿನ್ನ ದೃಷ್ಟಿಕೋನ ದ ಬಗ್ಗೆ ಸರೋಜಿನಿ ನಾಯ್ಡು ಹಾಗೂ ರಬೀಂದ್ರನಾಥ ಟಾಗೋರರ ಬರವಣಿಗೆಯ ಉದಾಹರಣೆಯನ್ನು ನೀಡಿದರು.

ಉರ್ದು ವಿಭಾಗದ ಮುಖ್ಯಸ್ಥ, ಡಾ ಹಮೀದ ಅಕ್ಬರ್ ಇವರು ಸಭೆಯ ಅಧ್ಯಕ್ಷತೆಯ ಸ್ಥಾನವಹಿಸಿ ಮಾತನಾಡುತ್ತ, ಅವರು ಡಾ ಸಾದೀಕಾ ನವಾಬರ ಸಾಧನಗಳ ಬಗ್ಗೆ ಹರ್ಷವ್ಯಕ್ತ ಪಡಿಸಿದರು. ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ್ ಅಂಶಗಳು ಉತ್ತಮ ಬರವಣಿಗೆಗೆ ಬಹಳ ಸಹಾಯಕಾರಿಯಾಗಿವೆ ಎಂದು ನುಡಿದರು.

ಪ್ರಾರಂಭದಲ್ಲಿ ಇಂಗ್ಲೀಷ ವಿಭಾಗದ ವಿದ್ಯಾರ್ಥಿನಿ ಜುಬಿಯಾ ನಾತ ಪ್ರಸ್ತುತಪಡಿಸಿದರೆ, ಉರ್ದು ವಿಭಾಗದ ಸಂಶೊಧನಾ ವಿದ್ಯಾರ್ಥಿನಿ ಅತಿಥಿಯರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸನಾ ಹಾಗೂ ಸಂಗಡಿಗರು ಇಕ್ಬಾಲರ ಕವಿತೆಗಳನ್ನು ಹೇಳಿದರು. ಉರ್ದು ವಿಭಾಗದ ವಿದ್ಯಾರ್ಥಿನಿ ನಾಜಿಯಾ ಬೇಗಮ್ ಅತಿಥಿಯರನ್ನು ಪರಿಚಯಿಸಿದರೆ, ವಿದ್ಯಾರ್ಥಿನಿ ಹುಮೆರಾ ಬೇಗಮ ವಂದಿಸಿದರು. Pವಿದ್ಯಾರ್ಥಿನಿ ತೆಹಸೀನ ಬೇಗಮ ಕಾರ್ಯಕ್ರಮನ್ನು ನಿರೂಪಿಸಿದರು.ವಿದ್ಯಾರ್ಥಿನಿ ವಿಶ್ವವಿದ್ಯಾಲದ ಆವರಣದಲ್ಲಿ ನಡೆದ ಈ ಕಾರ್ಯಕರಮದಲ್ಲಿ ವಿವಿಯ ಸಮೂಹ ಸಂವಹನ ಮತ್ತು ಮಾಧ್ಯಮ, ಇಂಗ್ಲೀಷ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ವಿಭಾಗದ ಶೈಕ್ಷಣಿಕ ಸಿಬ್ಬಂದಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

7 hours ago