ಜಗತ್ತಿನಲ್ಲಿಯೇ ಪುರಾತನ, ಶ್ರೇಷ್ಠವಾದ ಭಾಷೆ ಕನ್ನಡ ಭಾಷೆ: ಸಿದ್ದಲಿಂಗ ದೇವರು

ಕನ್ನಡ ಭಾಷೆಗೆ ಮಠಗಳು ಹಾಗೂ ಮಠಾದೀಶರ ಕೊಡಿಗೆಯೂ ಅಪಾರವಾಗಿದೆ.ಬಾಲ್ಕಿಯ ಚನ್ನಬಸವ ಪಟ್ಟದೇವರು ನಿಜಾಮನ ಆಳ್ವಿಕೆಯಲ್ಲಿ ಉರ್ದು ಭಾಷೆಗೆ ಮಾನ್ಯತೆ ಕೊಡಲಾಗಿತ್ತು.ಕನ್ನಡ ಭಾಷೆಗೆ ಕಲಿಸುವುದನ್ನು ಕಂಡರೆ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಹೊರಗಡೆ ಉರ್ದು ಭೋರ್ಡ ಹಾಕಿ ಒಳಗಡೆ ಕನ್ನಡ ಕೆಲಸವನ್ನು ಚನ್ನಬಸವ ಪಟ್ಟದೇವರು ಮಾಡುತ್ತಿದ್ದರು.ಕನ್ನಡ ಭಾಷೆ ಮೇಲೆ ಇರುವ ಪ್ರೀತಿ, ಅಭಿಮಾನ ತೋರಿಸುತ್ತದೆ.ಕನ್ನಡದ ಬಗ್ಗೆ ಸ್ವಾಭಿಮಾನ ತನ್ನಿಂದ ತಾನೇ ಬರಬೇಕಾಗಿದೆ.ಕಡ್ಡಾಯವಾಗಿ ಎಲ್ಲಾ ಅಂಗಡಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. – ಸಿದ್ದಲಿಂಗ ದೇವರು ರಾವೂರ.

ಶಹಾಬಾದ: ಜಗತ್ತಿನಲ್ಲಿಯೇ ಪುರಾತನ ಮತ್ತು ಶ್ರೇಷ್ಠವಾದ ಭಾಷೆ ಕನ್ನಡ ಭಾಷೆಯಾಗಿದೆ ಎಂದು ರಾವೂರಿನ ಸಿದ್ಧಲಿಂಗೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಹೇಳಿದರು.

ಅವರು ರವಿವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಭಂಕೂರ ಕಸಾಪ ವಲಯ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಕನ್ನಡಕ್ಕೆ ತನ್ನದೇ ಆದ ಪರಂಪರೆಯಿದೆ.ವಿಶ್ವದಲ್ಲಿಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ ಕನ್ನಡವಾಗಿದೆ.ಕನ್ನಡದಲ್ಲಿ ನೂರಾರು ಪದ್ಧತಿಯ ಸಾಹಿತ್ಯಗಿವೆ.ಜನಪದ ಸಾಹಿತ್ಯ, ವಚನ ಸಾಹಿತ್ಯ, ಗದ್ಯ,ಪದ್ಯ, ರಗಳೆ, ಕಾವ್ಯ, ಕಾದಂಬರಿ, ಬಂಡಾಯ ಹೀಗೇ ಹಲವಾರು ಕಾಣುತ್ತೆವೆ.

ಅದರಲ್ಲೂ ಜನಪದ ಸಾಹಿತ್ಯ ವನ್ನು ನಮ್ಮ ಹಿರಿಯರು ಹೊಲದಲ್ಲಿ ಕೆಲಸ ಮಾಡುವಾಗ, ಬೀಸುವಾಗ, ಮಗುವನ್ನು ಮಲಗಿಸುವಾಗ ಸೇರಿದಂತೆ ಬಾಯಿಂದ ಬಾಯಿಗೆ ಬಂದ ಸಾಹಿತ್ಯವಾಗಿದೆ.ಅವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ.ಆದರೂ ಅವರ ಸಾಹಿತ್ಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಅನೇಕ ಜನರು ಪಿಹೆಚ್‌ಡಿ ಮಾಡುವುದನ್ನು ನೋಡಿದ್ದೆವೆ.

ಬದುಕಿಗೆ ಮಾರ್ಗದರ್ಶನ ನೀಡುವ , ಬದುಕಿಗೆ ಪಾಠ ಹಾಗೂ ಬದುಕಿನ ನಿಜ ಸ್ವರೂಪವನ್ನು ಜನಪದ ಸಾಹಿತ್ಯದಲ್ಲಿ ಮಾತ್ರ ಕಾಣಬಹುದು.ಅಲ್ಲದೇ ಕನ್ನಡ ಭಾಷೆಗೆ ಅತ್ಯಂತ ಶ್ರೀಮಂತಿಕೆ ಕೊಟ್ಟ ಸಾಹಿತ್ಯ ಏನಾದರೂ ಇದ್ದರೇ ಅದು ವಚನ ಸಾಹಿತ್ಯ. ಶರಣರ ರಚಿಸಿದ ವಚನ ಸಾಹಿತ್ಯ ಅತ್ಯಂತ ಸರಳ ಹಾಗೂ ಮೌಲ್ಯಗಳ ಭಂಡಾರದಿಂದ ಕೂಡಿವೆ.ಅದರಲ್ಲೂ ಉತ್ತರ ಕರ್ನಾಟಕರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ ಎಂದಿಗೂ ಮರೆಯಬಾರದೆಂದು ಹೇಳಿದರು.

ಪ್ರಗತಿಪರ ಚಿಂತಕ ಸುರೇಶ ಮೆಂಗನ ಮಾತನಾಡಿ, ಹಲವಾರು ಸಾಹಿತ್ಯವನ್ನು ಅರಗಿಸಿಕೊಂಡಿರುವ ಭಾಷೆ ಕನ್ನಡ ಭಾಷೆ.ಇಂದಿನ ಯುವಕರು ಕನ್ನಡದ ಸಾಹಿತ್ಯವನ್ನು ಅರಿತು ಸಾಹಿತ್ಯವನ್ನು ರಚಿಸಬಹುದು.ನಮ್ಮ ಶಂಕರವಾಡಿ ಗ್ರಾಮದ ದಿ. ಡಾ.ಚೆನ್ನಣ್ಣ ವಾಲೀಕಾರ ಅವರು ಗ್ರಾಮೀಣ ಮಟ್ಟದಿಂದ ಬಂದು ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದರು ಎಂದು ನೆನಪಿಸಿಕೊಂಡರು. ಎಲೆ ಮರೆಯಾಗಿರುವ ಕಲಾವಿದರನ್ನು ಗುರುತಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಇನ್ನೂ ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.

ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಿ-ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.

ಶಹಾಬಾದ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಭಂಕೂರ ವಲಯ ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಎಸ್.ಕೊಕಟನೂರ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಬಾಳಿ, ಭಂಕೂರ ಕಸಾಪ ಹಾಲಿ ಅಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಶಶಿಕಾಂತ ಪಾಟೀಲ,ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್,ಸಿಆರ್‌ಪಿ ಮರೆಪ್ಪ ಭಜಂತ್ರಿ ವೇದಿಕೆಯ ಮೇಲಿದ್ದರು. ಹಣಮಂತ ಕುಂಬಾರ ನಿರೂಪಿಸಿದರು, ವೀಣಾ ನಾರಾಯಣ ಸ್ವಾಗತಿಸಿದರು, ಶಶಿಕಾಂತ ಮಡಿವಾಳ ವಂದಿಸಿದರು.

ಕಸಾಪ ತಾಲೂಕಾ ಮಾಜಿ ಅಧ್ಯಕ್ಷ ನಾಗಣ್ಣ ರಾಂಪೂರೆ, ಕಸಾಪ ಪದಾಧಿಕಾರಿಗಳಾದ ಈರಣ್ಣ ಹಳ್ಳಿ ಕಾರ್ಗಿಲ್, ಮುನ್ನಾ ಪಟೇಲ್, ಹೆಚ್.ವಾಯ್.ರಡ್ಡೇರ್,ಅಮೃತ ಮಾನಕರ್, ಭರತ್ ಧನ್ನಾ, ರೇವಣಸಿದ್ದಪ್ಪ ಮುಸ್ತಾರಿ, ಲಕ್ಷ್ಮಿಕಾಂತ ಕಂದಗೂಳ,ಮಲ್ಲಿಕಾರ್ಜುನ ಘಾಲಿ,ಶಿವರಾಜ ಹಡಪದ,ಈರಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420