ಕಲಬುರಗಿ: ಕಲೆ ಒಂದು ಜನಾಂಗದ ಸಂಸ್ಕೃತಿಯಉದ್ಭವ ಮತ್ತು ವಿಕಾಸದೊಂದಿಗೆ ಹುಟ್ಟಿ ಬೆಳೆಯುತ್ತದೆ. ಹೀಗಾಗಿ ಕಲೆಯಇತಿಹಾಸ, ಮಾನವ ಸಂಸ್ಕೃತಿಯಇತಿಹಾಸವಾಗಿದೆ. ಸಂಸ್ಕೃತಿ ಮತ್ತು ಸೌಂದರ್ಯ ಪ್ರಜ್ಞೆಇಲ್ಲದಯಾವುದೆ.ದೇಶತನ್ನ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ. ಸಂಸ್ಕೃತಿ ಮತ್ತು ಸೌಂದರ್ಯ ಪ್ರಜ್ಞೆ, ನಾಗರಿಕತೆಯ ಮೂಲವಾಗಿದೆಂದು ನಾಡೋಜಡಾ. ಜೆ.ಎಸ್. ಖಂಡೇರಾವ್ ಹೇಳಿದರು.
ನಗರದಯುವ ಹವ್ಯಾಸಿ ಚಿತ್ರಕಲಾವಿದೆಕುಮಾರಿ ವೈಷ್ಣವಿ ಆರ್. ಬಿ. ಅವರ ಏಕ ವ್ಯಕ್ತಿಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಕೆ.ಎಸ್. ಮಾಲಿಪಾಟೀಲ ಮುಖ್ಯಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕಲ್ಯಾಣಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂಅವರು ಮಾತನಾಡಿ, ಕಲ್ಯಾಣಕರ್ನಾಟಕದದೃಶ್ಯಕಲಾ ಪರಂಪರೆಯುಅತ್ಯಂತಉತ್ಕೃಷ್ಟವಾಗಿದೆ.ಕಲಬುರಗಿ ನಗರದಲ್ಲಿ ಪ್ರತಿ ತಿಂಗಳಿಗೊಂದು ವಿನೂತನಚಿತ್ರಕಲಾ ಪ್ರದರ್ಶನ ನಡೆಯಬೇಕು.ಆ ಪ್ರದರ್ಶನಕ್ಕೆ ಪ್ರಾಯೋಜಕತ್ವತಾವು ನೀಡುವುದಾಗಿ ಹೇಳಿದರು.
ಡಾ. ಅಶೋಕ ಶೆಟಕಾರ ನಿರೂಪಿಸಿದರು.ಎಂ.ಎಚ್. ಬೆಳಮಗಿ ಸ್ವಾಗತಿಸಿದರು.ಡಾ. ಪರಶುರಾಮ ಪಿ.ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎನ್. ಪಾಟೀಲ ವಂದಿಸಿದರು.ನಗರದಅಂಕುರಆರ್ಟ್ಗ್ಯಾಲರಿ, ದಿ ಆರ್ಟ್ಇಂಟಿಗ್ರೇಶನ್ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವೈಷ್ಣವಿ.ಆರ್.ಬಿ. ರಚಿಸಿದ ೩೦ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಐದು ದಿನ, ಅಗಸ್ಟ್ ೫ರ ವರೆಗೆ ಪ್ರದರ್ಶನ ಗೊಳ್ಳಲಿವೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…