ಶಹಾಬಾದ : ರಾಷ್ಟ್ರದ ತ್ರಿವರ್ಣ ದ್ವಜ ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಈ ಶುಭಗಳಿಗೆಯಲ್ಲಿ ಇಡೀ ದೇಶದ ಮನೆ ಮನೆಯಲ್ಲೂ ಬಾನೆತ್ತರಕ್ಕೆ ಹಾರುತ್ತಿರುವದು ನಮಗೆ ಅತ್ಯಾಂತ ಗರ್ವದ ವಿಷಯ ಅದರ ಜೊತೆಗೆ ತಿರಂಗ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯಾಳದಲ್ಲೂ ಹಾರುವದರೊಂದಿಗೆ ನಾವೆಲ್ಲ ರಾಷ್ಟ್ರ ಪ್ರೇಮ ಮೆರೆಯ ಬೇಕು ಎಂದು ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿ ನಿಯಮಿತ ಭಂಕೂರನ ಅಧ್ಯಕ್ಷ ವೆಂಕಾರೆಡ್ಡಿ ಜಿ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಭಂಕೂರ ಗ್ರಾಮದ ಹಿರೋಡೇಶ್ವರ ಎಫ್.ಪಿ.ಓ ಕಛೇರಿಯಲ್ಲಿ ನಡೆದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷವಾಗಿದ್ದು ದೇಶ ಹೆಮ್ಮೆಯ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಮನೆ ಮನೆಯಲ್ಲಿ ತಿರಂಗಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕಿದೆ. ಇದು ದೇಶಕ್ಕೆ ಗರಿಮೆಯ ವಿಷಯ ಎಂದರು. ಈ ಸ್ವಾತಂತ್ರ್ಯದ ಹಿಂದೆ ಅನೇಕ ಹೋರಾಟಗಾಗರರ ತ್ಯಾಗ ಬಲಿದಾನವಿದೆ. ಪ್ರತಿ ಹೋರಾಟಗಾರರ ಹೆಸರು ಇತಿಹಾಸದ ಪುಟಗಳಲಿ ಅಚ್ಚಳಿಯದಂತೆ ಕುಳಿತಿದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವು ನಿಜಕ್ಕೂ ಪುಣ್ಯವಂತರು. ಆದರೆ ಆ ಸ್ವಾತಂತ್ರ್ಯ ಜತನದಿಂದ ಕಾಪಾಡಿಕೊಂಡು ಹೋಗಬೇಕಾಗಿದೆ ಕಾರಣ ದೇಶ ಪ್ರೇಮದ ಸಂಕೇತವಾದ ತಿರಂಗಾ ಜನಮಾನಸದಲ್ಲಿ ಹಾರಾಡಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಉಪಾದ್ಯಕ್ಷ ಬಸವರಾಜ ರಾಮಗೊಂಡ,ನಾಗಣ್ಣ ಮಡಿವಾಳ, ಸುನೀಲ್ ಗುಡೂರ, ಹೀರಾಚಂದ ಗುಗರಿ, ಶಿವರಾಜ ನಿಂಗಣ್ಣೋರ, ಮಾಲಾಶ್ರೀ ಕಟ್ಟಿ, ಮಲ್ಲಿಕಾರ್ಜುನ ಇಟಗಿ, ಜೇನುಗೂಡು ಸಂಪನ್ಮೂಲ ಸಂಸ್ಥೆಯ ಅನೀತಾ ಮಂಜುನಾಥ, ಸಾವೀತ್ರಿ ಶಿವಮೂರ್ತಿ, ಮಂಜೂಳಾ ಸಿದ್ರಾಮಪ್ಪ, ಕಂಪನಿಯ ಸಿ.ಇ.ಓ ಗುರು ಪಿ.ಹೆಚ್, ಮಹಾದೇವಿ ಹೂಗಾರ, ಪ್ರೇಮಲತಾ ಎನ್, ಮುಸಳಿ. ಭೀಮರಾಯ ಎಸ್. ರಾವೂರ್. ಸುಧಾರಾಣಿ, ಎಸ್. ಕದ್ದರಗಿ, ಅಂಬರೇಶ್, ಎಮ್. ಪೂಜಾರಿ ಮಂಜುನಾಥ ಮರತೂತ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…