ಬಿಸಿ ಬಿಸಿ ಸುದ್ದಿ

ತಾರಾ ಇಂಗ್ಲಿಷ್ ಭಾಷಾ ಲ್ಯಾಬ್ ಉದ್ಘಾಟನೆ

ಕಲಬುರಗಿ: ಭಾರತದ ೭೫ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೃತಕ ಬುದ್ದಿವಂತಿಕೆ ಮತ್ತು ಧ್ವನಿ ತಂತ್ರಜ್ಞಾನ-ಚಾಲಿತ ಸಂವಹನ ಇಂಗ್ಲಿಷ್ ಕಾರ್ಯಕ್ರಮದಲ್ಲಿ ಪ್ರಥಮ `ತಾರಾ ಇಂಗ್ಲಿಷ್ ಭಾಷಾ ಲ್ಯಾಬ್’ನ್ನು ನಗರದ ಶ್ಲೋಕ-ಬಿರ್ಲಾ ಶಾಲೆಯಲ್ಲಿ ಸೋಮವಾರ ಆರಂಭಿಸಲಾಯಿತು.

ಲರ್ನಿಂಗ್ ಮ್ಯಾಟರ್ಸ್ ಸಹ ಸಂಸ್ಥಾಪಕರು ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಾಧಿಕಾರಿ ಸರಸ್ವತಿ ರಾಮಮೂರ್ತಿ ಅವರು ಮಾತನಾಡಿ, ಸರಳತೆ ಮತ್ತು ಬಳಕೆಯ ಸುಲಭತೆಯೊಂದಿಗೆ ಟಿಇಎಲ್‌ಎಲ್‌ನ ೨೧ನೇ ಶತಮಾನದ ತಂತ್ರಜ್ಞಾನ ವಿಶಿಷ್ಟ ಸಂಯೋಜನೆಯು ತ್ವರತವಾಗಿ ವಿದ್ಯಾರ್ಥಿಗಳ ಇಂಗ್ಲಿಷ ಕಲಿಕೆಯು ಫಲಿತಾಂಶಗಳ ಮೇಲೆ ಬಹಳ ಸಕರಾತ್ಮಕ ಪರಿಣಾಮ ತರುತ್ತದೆ ಎಂದು ಹೇಳಿದರು.

ಅಲೆಕ್ಸಾ ಪ್ಲಾಟ್ ಫಾರ್ಮ್ ನ್ನು ಬಳಸುವ ಧ್ವನಿ ಸಾಧನದ ಸಂಯೋಜನೆಯು ಉತ್ತಮ ಗುಣಮಟ್ಟದ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಸ್ಥಳೀಯ ಇಂಗ್ಲಿಷ್ ನಿರರ್ಗಳತೆ ಬರುವಂತೆ ಮಾಡಲು ಅಗತ್ಯವಾದ ನೈಸರ್ಗಿಕ, ಸಂಭಾಷಣೆಯ ಶೈಲಿನ ಪಾಠಗಳ ಮೂಲಕ ಕಲಿಯುವವರಿಗೆ ಭಾಷಾ ಕಲಿಕೆಯನ್ನು ಸುಲಭವಾಗಿಸುತ್ತದೆ. ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಮತ್ತು ಶಬ್ದಕೋಶ, ವ್ಯಾಕರಣ ಮತ್ತು ಸಂಭಾಷಣಾ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಚಟುವಟಿಕೆಗಳಿಂದ ಕಲಿಕೆ ಇನ್ನಷ್ಟು ದೃಢವಾಗುತ್ತದೆ ಎಂದು ಅವರು ಹೇಳಿದರು.

ಶಾಲೆಯ ಸಂಸ್ಥಾಪಕ ಮತ್ತು ಟ್ರಸ್ಟಿ ಆದ ಅಭಿಷೇಕ ಚಿಮ್ಮಲಗಿ ಮಾತನಾಡಿ, ವಿದ್ಯಾರ್ಥಿಗಳು ಅಂತಾರಾಷ್ಟ್ರಿಯ ಭಾಷಾ ಗುಣಮಟ್ಟವನ್ನು ಸಾಧಿಸಬೇಕು. ಇದರಿಂದ ಶೈಕ್ಷಣಿಕ ಮತ್ತು ವೃತ್ತಿ ಜೀವನದ ಯಶಸ್ಸು ಖಾತರಿಗೊಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸುನಿತಾ ಪಿ.ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.

emedialine

Recent Posts

“ರಾಜಗಂಭೀರ” ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

  ಕಲಬುರಗಿ: ಶಿಕ್ಷಣ ಪ್ರೇಮಿಗಳು, ಹಿರಿಯ ಮುತ್ಸದ್ದಿಗಳು ಹಾಗೂ ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ್ ಅವರು ಮೇ 6 ರಂದು…

10 mins ago

ಮೇ 7 ರಂದು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಲಬುರಗಿ: ಲೋಕಸಭಾ ಚುನಾವಣೆಯ ಮತದಾನ ಇದೇ ಮೇ 7 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿನ ನೌಕರರು ಹಾಗೂ…

11 hours ago

ಸುಣ್ಣ-ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ ವಿಶೇಷ ಮತಗಟ್ಟೆಗಳು

ಮತದಾರರನ್ನು ಕೈಬೀಸಿ ಕರೆಯುತ್ತಿವೆ ಸಖಿ, ಥೀಮ್ ಬೂತ್‍ಗಳು ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ, ಜಿಲ್ಲಾ…

11 hours ago

ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ಅನುಕೂಲವಾಗಿವೆ

ಶಹಾಬಾದ: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ.ಆದ್ದರಿಂದ ಕಾಂಗ್ರೆಸ್ ಮತ ನೀಡಬೇಕೆಂದು ಕಾಂಗ್ರೆಸ್ ಮುಖಂಡ…

11 hours ago

ಸಂವಿಧಾನ ಉಳಿಸುವ ಪಕ್ಷಕ್ಕೆ ಮತದಾನ ಮಾಡಿ: ದ್ವಾರಕನಾಥ್

ಕಲಬುರಗಿ: ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸ್ಲಂ ಜನರ ಮತ ಸಂವಿಧಾನ ಮತ್ತು ದೇಶ…

12 hours ago

7 ರಂದು ಕಡ್ಡಾಯವಾಗಿ ಮತದಾನ ಮಾಡಿ: ಮಹೆಬೂಬ್ ಬಿ

ಕಲಬುರಗಿ: ಇದೇ ಮೇ 7 ರಂದು ಲೋಕಸಭೆ ಚುನಾವಣೆ ಹಿನ್ನೆಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ…

12 hours ago